Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್‌ನ ವಡೋದರಾದಲ್ಲಿ ಸರ್ದಾರ್ ಧಾಮ್ ಹಾಸ್ಟೆಲ್ ಉದ್ಘಾಟಿಸಿದ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಗುಜರಾತ್‌ನ ವಡೋದರಾದಲ್ಲಿ ಸರ್ದಾರ್ ಧಾಮ್ ಹಾಸ್ಟೆಲ್ ಉದ್ಘಾಟಿಸಿದ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಗುಜರಾತ್‌ನ ವಡೋದರಾದಲ್ಲಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ದಾರ್ ಧಾಮ್ ಹಾಸ್ಟೆಲ್ ಉದ್ಘಾಟಿಸಿದರು. ಸೋಮನಾಥ ದೇವಾಲಯವು ತನ್ನ 75ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವವನ್ನು ಆಚರಿಸಿದ ದಿನದಂದು ವಡೋದರಾದ ಸರ್ದಾರ್ ಧಾಮ್‌ನಲ್ಲಿ ನಡೆದ ಗಣ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಶಿಕ್ಷಣ ಸಂಸ್ಥೆಗಳ ಉದ್ಘಾಟನೆ ಮತ್ತು ಆಧ್ಯಾತ್ಮಿಕ ಸ್ಮರಣಾರ್ಥ ಶುಭ ಸಂದರ್ಭದ ಕಾಕತಾಳೀಯತೆಯನ್ನು ಉಲ್ಲೇಖಿಸಿದರು. ಡಾ. ದುಷ್ಯಂತ್ ಮತ್ತು ದಕ್ಷಾ ಪಟೇಲ್ ಸಂಕೀರ್ಣವನ್ನು ಉದ್ಘಾಟಿಸುವುದರ ಜೊತೆಗೆ ಬೋಧನಾ ಸಹಾಯ ಯೋಜನೆಯನ್ನು ಉದ್ಘಾಟಿಸುವುದು ಮತ್ತು ಬಹು ಶೈಕ್ಷಣಿಕ ಯೋಜನೆಗಳಿಗೆ ಶಿಲಾನ್ಯಾಸ ಸಮಾರಂಭಗಳನ್ನು ನಡೆಸುವುದರೊಂದಿಗೆ, ಪ್ರಧಾನಮಂತ್ರಿಯವರು ಉಪಕ್ರಮಗಳನ್ನು ಯುವಜನರ ಭವಿಷ್ಯದ ವೃತ್ತಿಜೀವನಕ್ಕಾಗಿರುವ ಉಡಾವಣಾ ಪ್ಯಾಡ್‌ಗಳೆಂದು ಬಣ್ಣಿಸಿದರು. “ಕೆಲವೇ ಗಂಟೆಗಳ ಹಿಂದೆ, ನಾನು ಪ್ರಭಾಸ್ ಪಠಾಣ್‌ನಲ್ಲಿ ಸೋಮನಾಥ ಅಮೃತ್ ಮಹೋತ್ಸವವನ್ನು ಆಚರಿಸುತ್ತಿದ್ದೆ, ಮತ್ತು ಈಗ ನಾವು ಇಲ್ಲಿ ಪರಿವರ್ತನಾತ್ಮಕ ಶಿಕ್ಷಣ ಸಂಸ್ಥೆಗಳನ್ನು ಉದ್ಘಾಟಿಸುತ್ತಿದ್ದೇವೆ, ಈ ಸಂಯೋಜನೆ ಪರಂಪರೆ ಮತ್ತು ಪ್ರಗತಿ ಹೇಗೆ ಒಟ್ಟಿಗೆ ಮುಂದುವರಿಯುತ್ತದೆ ಎಂಬುದನ್ನು ಸಂಕೇತಿಸುತ್ತದೆ” ಎಂದು ಶ್ರೀ ಮೋದಿ ಹೇಳಿದರು.

ಭಾರತದಾದ್ಯಂತ ಸಂಸ್ಥೆಯ ವಿಸ್ತರಿಸುತ್ತಿರುವ ಸಾಂಸ್ಥಿಕ ಹೆಜ್ಜೆಗುರುತನ್ನು ಪಟ್ಟಿ ಮಾಡುವಾಗ ಸರ್ದಾರ್ ಧಾಮ್‌ನ ಶೈಕ್ಷಣಿಕ ಧ್ಯೇಯದ 75 ವರ್ಷಗಳ ಪರಂಪರೆಯನ್ನು ಪ್ರತಿಬಿಂಬಿಸಿದ ಪ್ರಧಾನಮಂತ್ರಿ, 2021 ರಲ್ಲಿ ಬಾಲಕಿಯರ ಹಾಸ್ಟೆಲ್‌ನ ಶಿಲಾನ್ಯಾಸ ಸಮಾರಂಭ ನಡೆದಾಗ ತಮ್ಮ ಭೇಟಿಯನ್ನು ನೆನಪಿಸಿಕೊಂಡರು, ನಂತರ ಸೂರತ್, ರಾಜ್‌ಕೋಟ್, ಭುಜ್, ಮೆಹ್ಸಾನಾ ಮತ್ತು ದಿಲ್ಲಿಯಲ್ಲಿ ಸಂಸ್ಥೆಯ ಉಪಸ್ಥಿತಿಯನ್ನು ಗಮನಿಸಿದರು. ಅಹಮದಾಬಾದ್‌ನ ನಿಕೋಲ್ ನೆರೆಹೊರೆಯಲ್ಲಿ ಸಾವಿರ ಸಾಮರ್ಥ್ಯದ ಹೊಸ ಬಾಲಕಿಯರ ಹಾಸ್ಟೆಲ್‌ನ ಉದ್ಘಾಟನೆಯನ್ನು ಏಕಕಾಲದಲ್ಲಿ ನೆರವೇರಿಸುತ್ತ, ಅವರು ಸ್ಪಷ್ಟವಾದ ರೂಪಾಂತರಗಳನ್ನು ಉಲ್ಲೇಖಿಸಿದರು. “ಕಳೆದ ವರ್ಷದ ಉದ್ಘಾಟನೆಯಲ್ಲಿ ಸಾವಿರಾರು ಹೆಣ್ಣುಮಕ್ಕಳು ಅಲ್ಲಿ ಶಿಕ್ಷಣ ಪಡೆಯುತ್ತಿದ್ದರು, ಅವರ ಭವಿಷ್ಯಕ್ಕಾಗಿ ಹೊಸ ದಿಕ್ಕುಗಳನ್ನು ರೂಪಿಸುತ್ತಿದ್ದುದನ್ನು ನೋಡಿದೆವು ಮತ್ತು ಹಾಸ್ಟೆಲ್‌ಗಾಗಿ ಇಂದಿನ ಶಿಲಾನ್ಯಾಸವು ದೇಶಾದ್ಯಂತ ಹೆಣ್ಣುಮಕ್ಕಳಿಗೆ ಶೈಕ್ಷಣಿಕ ಪ್ರವೇಶವನ್ನು ವಿಸ್ತರಿಸುವ ಸರ್ದಾರ್ ಧಾಮ್‌ನ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತದೆ” ಎಂದು ಶ್ರೀ ಮೋದಿ ದೃಢಪಡಿಸಿದರು.

ಸಾಮಾಜಿಕ ವಿಕಾಸದ ವಿಶಾಲ ಚೌಕಟ್ಟಿನೊಳಗೆ ಶೈಕ್ಷಣಿಕ ಪರಿವರ್ತನೆಯನ್ನು ಸಂದರ್ಭೋಚಿತವಾಗಿ ವಿವರಿಸುತ್ತಾ, ಪ್ರಾಯೋಗಿಕ ವಾಸ್ತವದಲ್ಲಿ ಸುಧಾರಣೆಯನ್ನು ಆಧಾರವಾಗಿಟ್ಟುಕೊಂಡು, ಸಮಗ್ರ ಬದಲಾವಣೆಗೆ ಸರ್ಕಾರ ಮತ್ತು ನಾಗರಿಕ ಸಮಾಜದ ನಡುವಿನ ಸಹಯೋಗದ ಪ್ರಯತ್ನದ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ವ್ಯವಸ್ಥಿತ ಪರಿವರ್ತನೆಗೆ ಪುರಾವೆ ಆಧಾರಿತ ವಿಧಾನಕ್ಕೆ ಉದಾಹರಣೆಯಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಎತ್ತಿ ತೋರಿಸಿದ ಅವರು, ಭಾಷೆ ಆಧಾರಿತ ತಾರತಮ್ಯವನ್ನು ತೆಗೆದುಹಾಕುವುದರಿಂದ ಹಿಡಿದು ಪಠ್ಯಕ್ರಮದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ನಾವೀನ್ಯತೆಯನ್ನು ಅಳವಡಿಸುವವರೆಗೆ ನೀತಿಯ ಬಹುಮುಖಿ ನಾವೀನ್ಯತೆಗಳನ್ನು ವಿವರಿಸಿದರು. “ಬದಲಾವಣೆ ಸಮಗ್ರವಾಗಲು ಮತ್ತು ಫಲಿತಾಂಶಗಳು ಶಾಶ್ವತವಾಗಲು, ಸಮಾಜ ಮತ್ತು ಸರ್ಕಾರವು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ನಮ್ಮ ಯುವಜನರು ಸ್ನಾತಕೋತ್ತರ ಕಕ್ಕಾಬಿಕ್ಕಿಯನ್ನು ತಡೆಯುವ ಅಪ್ರೆಂಟಿಸ್‌ಶಿಪ್ ಅವಕಾಶಗಳೊಂದಿಗೆ ತಮ್ಮ ಪದವಿಗಳನ್ನು ಪೂರ್ಣಗೊಳಿಸುತ್ತಾರೆ” ಎಂಬುದರತ್ತ ಶ್ರೀ ಮೋದಿ ಗಮನ ಸೆಳೆದರು.

ಗುಜರಾತ್‌ನ ವಿಶಿಷ್ಟ ಉದ್ಯಮಶೀಲ ಸಂಸ್ಕೃತಿಯನ್ನು ಸಂಭ್ರಮಿಸುವುದರ ಜೊತೆಗೆ ಶೈಕ್ಷಣಿಕ ಹೂಡಿಕೆಗಳಿಂದ ಹೊರಹೊಮ್ಮುವ ಜನಸಂಖ್ಯಾ ಲಾಭವನ್ನು ಉಲ್ಲೇಖಿಸುತ್ತಾ, ರಾಜ್ಯದ ಯುವಜನರು ಸ್ಟಾರ್ಟ್‌ಅಪ್ ಇಂಡಿಯಾ ಮಿಷನ್ ಚೌಕಟ್ಟುಗಳ ಮೂಲಕ ಸಜ್ಜುಗೊಳ್ಳುತ್ತಿರುವ ಸಹಜ ವ್ಯವಹಾರ ಕುಶಾಗ್ರಮತಿಯನ್ನು ಹೊಂದಿದ್ದಾರೆ ಎಂದು ಪ್ರಧಾನಮಂತ್ರಿ ಘೋಷಿಸಿದರು. ಸಣ್ಣ ನಗರಗಳಲ್ಲಿ ನವೋದ್ಯಮ ಸ್ಥಾಪನೆಯಲ್ಲಿ ಆಗುತ್ತಿರುವ ಏರಿಕೆಯ ಜೊತೆಗೆ ಉದ್ಯಮಶೀಲತಾ ಸಾಹಸಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ವೇಗಗೊಳುತ್ತಿರುವುದನ್ನು ವಿವರಿಸಿದ ಅವರು, ಹಿಂದೆ ಅನಿರ್ದಿಷ್ಟತೆಯ, ಅಪಾಯದ ವಲಯಗಳು ಎಂದು ಪರಿಗಣಿತವಾದಂತಹ ವಲಯಗಳು ಈಗ ಯುವ ನಾವೀನ್ಯಕಾರರನ್ನು ಆಕರ್ಷಿಸುತ್ತಿವೆ ಎಂದು ಗಮನಿಸಿದರು. “ಮುಂಬರುವ ದಿನಗಳಲ್ಲಿ, ದೇಶವು ದೊಡ್ಡ ಕೌಶಲ್ಯಪೂರ್ಣ ಕಾರ್ಮಿಕ ಪಡೆಯನ್ನು ಹೊಂದಿರುತ್ತದೆ ಎಂದರೆ, ದೇಶದ ಉತ್ಪಾದನಾ ವಲಯವು ಅಭೂತಪೂರ್ವ ವೇಗವನ್ನು ಅನುಭವಿಸುತ್ತದೆ, ಕ್ರೀಡೆಯಿಂದ ಬಾಹ್ಯಾಕಾಶ ತಂತ್ರಜ್ಞಾನದವರೆಗೆ  ಕಳೆದ ದಶಕದಲ್ಲಿ ರೂಪಾಂತರವನ್ನು ಅದು  ತೋರಿಸಿದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯನ್ನು ನಾಗರಿಕತೆಯ ಮೂಲಭೂತ ಪ್ರಗತಿಯ ಮಾನದಂಡವೆಂದು ಗುರುತಿಸಿದ ಪ್ರಧಾನಮಂತ್ರಿ, ಎರಡು ದಶಕಗಳ ಹಿಂದೆಯೇ ಗುಜರಾತ್ ತತ್ವವನ್ನು ಗುರುತಿಸಿದ್ದನ್ನು ಪ್ರಸ್ತಾಪಿಸಿದರು ತ್ವ ರಾಜ್ಯದ ಪ್ರವರ್ತಕ ಲಿಂಗತ್ವ -ಪ್ರೇರಿತ ಅಭಿವೃದ್ಧಿ ಮಾದರಿಯನ್ನು ಗುರುತಿಸಿದರು. ನೈರ್ಮಲ್ಯ, ನೀರು ಮತ್ತು ಇಂಧನ ಲಭ್ಯತೆ  ನಿಬಂಧನೆಗಳ ಜೊತೆಗೆ ಮಹಿಳೆಯರಿಗೆ ಕೋಟ್ಯಂತರ ಬ್ಯಾಂಕ್ ಖಾತೆಗಳನ್ನು ತೆರೆಯುವ ಮೂಲಕ ರಾಷ್ಟ್ರೀಯ ಪ್ರಗತಿ ಸಾಧಿಸಿದ್ದನ್ನು ದಾಖಲಿಸಿದ ಅವರು, ಮುದ್ರಾ ಯೋಜನೆಯಿಂದಾದ  ಸಬಲೀಕರಣ ಮತ್ತು ಆಯುಷ್ಮಾನ್ ಭಾರತ್  ಆರೋಗ್ಯ ರಕ್ಷಣಾತ್ಮಕ ಚೌಕಟ್ಟುಗಳನ್ನು ಉಲ್ಲೇಖಿಸಿದರು. “ಸಾಮಾಜಿಕ ಪ್ರಗತಿಯು ಮೂಲಭೂತವಾಗಿ ತನ್ನ ಮಹಿಳಾ ಜನಸಂಖ್ಯೆಯ ಭಾಗವಹಿಸುವಿಕೆಯನ್ನು ಅವಲಂಬಿಸಿದೆ ಎಂದು ಗುಜರಾತ್ ಅರ್ಥಮಾಡಿಕೊಂಡಿದೆ ಮತ್ತು ಅದಕ್ಕೆ ಅನುಗುಣವಾಗಿ ದೃಢವಾದ ಕ್ರಮಗಳನ್ನು ಅದು ತೆಗೆದುಕೊಂಡಿತು, ಈ ಪ್ರಯೋಜನಗಳು ಈಗ ಇಡೀ ರಾಷ್ಟ್ರಕ್ಕೆ ವಿಸ್ತರಿಸಿವೆ” ಎಂದು ಶ್ರೀ ಮೋದಿ ವಿವರಿಸಿದರು.

ಐತಿಹಾಸಿಕವಾಗಿ ಪುರುಷ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಮಹಿಳಾ ಕಾರ್ಮಿಕ ಶಕ್ತಿಯ ಪ್ರವೇಶವನ್ನು ದಾಖಲಿಸುತ್ತಾ, ಹೆಣ್ಣುಮಕ್ಕಳಿಗೆ ಹಿಂದೆ ಪುರುಷ ಪ್ರಾಬಲ್ಯದ ನಾಯಕತ್ವದ ಪಾತ್ರಗಳಲ್ಲಿ ಪ್ರವೇಶ ಇರಲಿಲ್ಲ ಎಂದ ಅವರು ಈಗ ಮಿಲಿಟರಿ, ವಾಯುಯಾನ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅವರ ಪ್ರವೇಶ ಬದಲಾವಣೆಗಳನ್ನು ವೇಗಗೊಳಿಸುತ್ತಿದೆ ಎಂದರು. ರಾಜಕೀಯ ಅಡಚಣೆಯನ್ನು ಪ್ರಸ್ತಾಪಿಸಿದ ಅವರು ಸಂಸತ್ತಿನ ಮೂಲಕ ನಾರಿ ಶಕ್ತಿ ವಂದನ ತಿದ್ದುಪಡಿಯನ್ನು ಅಂಗೀಕರಿಸುವ ವಿಫಲ ಪ್ರಯತ್ನಗಳನ್ನು ಉಲ್ಲೇಖಿಸಿದರು. ಹಾಗು ಲಿಂಗ ಸಮಾನತೆಯ ಉದ್ದೇಶಗಳಿಗೆ ಅಚಲವಾದ ಬದ್ಧತೆಯನ್ನು ಪುನರುಚ್ಚರಿಸಿದರು. “ಮಹಿಳಾ ಕೆಡೆಟ್‌ಗಳು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ, ನಮ್ಮ ಹೆಣ್ಣುಮಕ್ಕಳು ಫೈಟರ್ ಪೈಲಟ್‌ಗಳಾಗುತ್ತಿದ್ದಾರೆ ಮತ್ತು ಮಹಿಳೆಯರ ರಾಜಕೀಯ ಭಾಗವಹಿಸುವಿಕೆಯನ್ನು ಮುಂದುವರಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ, ರಾಜಕೀಯ ಕಾರಣಗಳು ತಿದ್ದುಪಡಿ ಅಂಗೀಕಾರವನ್ನು ತಡೆಯುತ್ತಿದ್ದರೂ, ನಮ್ಮ ಬದ್ಧತೆ ಅಚಲವಾಗಿ ಉಳಿದಿದೆ” ಎಂದು ಶ್ರೀ ಮೋದಿ ದೃಢಪಡಿಸಿದರು.

ಸರ್ಕಾರಿ ವ್ಯಾಪ್ತಿಯನ್ನು ಮೀರಿ ಸಾಮಾಜಿಕ ವಲಯಗಳಲ್ಲಿ ಎಲ್ಲ ಲಿಂಗತ್ವ-ಒಳಗೊಂಡ ಅವಕಾಶ ವಿಸ್ತರಣೆಯ ಜವಾಬ್ದಾರಿಯನ್ನು ವಹಿಸಿ, ನಾಗರಿಕ ಸಮಾಜ ಸಂಸ್ಥೆಗಳು ಸಮಾನ ಹೊಣೆಗಾರಿಕೆಯನ್ನು ಹಂಚಿಕೊಳ್ಳುತ್ತಿವೆ ಎಂದು ಘೋಷಿಸಿದ ಪ್ರಧಾನಮಂತ್ರಿ, ಸರ್ದಾರ್ ಧಾಮ್‌ನ ನಿರ್ದಿಷ್ಟ ಸಮರ್ಪಣೆಯನ್ನು ಅನುಕರಣೀಯ ಸಾಂಸ್ಥಿಕ ಪದ್ದತಿ ಎಂದೂ ಪ್ರತಿಪಾದಿಸಿದರು. ಬಹು ಕ್ಷೇತ್ರಗಳಲ್ಲಿ ಮಹಿಳಾ ಸಬಲೀಕರಣದೊಂದಿಗೆ ಸಂಸ್ಥೆಯು ಸಮಗ್ರ ರೀತಿಯಲ್ಲಿ ತೊಡಗಿಸಿಕೊಂಡಿರುವುದನ್ನು ಗುರುತಿಸಿದ ಅವರು ಸಾಂಸ್ಥಿಕ ಮನ್ನಣೆ ವಿಸ್ತಾರಗೊಂಡ ಪರಿಯನ್ನು ಪ್ರಸ್ತಾಪಿಸಿದರು. “ಸರ್ದಾರ್ ಧಾಮ್ ಜವಾಬ್ದಾರಿಯನ್ನು ಸಂಪೂರ್ಣ ಸಮರ್ಪಣೆಯೊಂದಿಗೆ ನಿರ್ವಹಿಸುತ್ತಿದೆ ಮತ್ತು ಸಾಮಾಜಿಕ ಪರಿವರ್ತನೆಗೆ ನಿರಂತರ ಸಾಂಸ್ಥಿಕ ಬದ್ಧತೆಯ ಅಗತ್ಯವಿದೆ ಎಂಬುದನ್ನು ತನ್ನ ಕಾರ್ಯ ಚಟುವಟಿಕೆಯ ಮೂಲಕ ತೋರಿಸುತ್ತಿದೆ ಎಂಬುದರಿಂದ ನನಗೆ ಸಂತೋಷವಾಗಿದೆ” ಎಂದೂ ಶ್ರೀ ಮೋದಿ ಹೇಳಿದರು.

ಗುಜರಾತ್‌ನ ವಿಶಿಷ್ಟ ಸಾಂಸ್ಕೃತಿಕ ಗುಣಲಕ್ಷಣವೆಂದರೆ ಹಂತ ಹಂತವಾಗಿ ಸಾಗುವ  ದಿಕ್ಕನ್ನು ತ್ವರಿತವಾಗಿ ಗುರುತಿಸುವುದು ಮತ್ತು ರಾಜ್ಯದ ಸ್ಪರ್ಧಾತ್ಮಕ ಪ್ರಯೋಜನವನ್ನು ಅವಕಾಶವಾಗಿ ಪರಿವರ್ತಿಸಿ, ಅಡಚಣೆಗಳನ್ನು ನಿವಾರಿಸಿ  ಸಾಂಸ್ಥಿಕ ಸಾಮರ್ಥ್ಯವಾಗಿ ಪರಿವರ್ತಿಸುವುದು ಎಂದು ನಿರೂಪಿಸಿದ ಪ್ರಧಾನಮಂತ್ರಿ, ಐತಿಹಾಸಿಕ ನಿರಂತರತೆಯೊಳಗೆ ಸಮಕಾಲೀನ ಉತ್ಪಾದನಾ ರೂಪಾಂತರವನ್ನು ಉಲ್ಲೇಖಿಸಿದರು. ಅರೆವಾಹಕಗಳು, ಏರೋಸ್ಪೇಸ್, ​​ಸುಧಾರಿತ ಎಂಜಿನಿಯರಿಂಗ್, ಹಸಿರು ಶಕ್ತಿ ಮತ್ತು ಹಣಕಾಸು ಸೇವೆಗಳು ಸೇರಿದಂತೆ ಮುಂದುವರಿದ ಕ್ಷೇತ್ರಗಳಾಗಿ ವಲಯ ವೈವಿಧ್ಯೀಕರಣವನ್ನು ವಿವರಿಸುತ್ತಾ, ಅವರು ರಾಜ್ಯದ ಸಾಂಸ್ಥಿಕ ಹೊಂದಾಣಿಕೆಯನ್ನು ದಾಖಲಿಸಿದರು. “ಬದಲಾವಣೆಯನ್ನು ಅವಕಾಶವಾಗಿ ಪರಿವರ್ತಿಸುವುದು, ಹೊಸ ಸಾಧ್ಯತೆಗಳನ್ನು ಅಳವಡಿಸಿಕೊಳ್ಳುವುದು ಮತ್ತು ಕಾಲಕ್ರಮೇಣ ಭವಿಷ್ಯಕ್ಕಾಗಿ ತಯಾರಿ ಮಾಡುವುದು ಗುಜರಾತ್‌ನ ಕೆಲಸದ ಸಂಸ್ಕೃತಿಯ ಭಾಗವಾಗಿದ್ದು, ಪ್ರತಿಯೊಂದು ಉದಯೋನ್ಮುಖ ವಲಯದಲ್ಲಿ ಹೊಸ ಗುರುತುಗಳನ್ನು ರಚಿಸಲು ರಾಜ್ಯಕ್ಕೆ ಅನುವು ಮಾಡಿಕೊಡುತ್ತದೆ” ಎಂದು ಶ್ರೀ ಮೋದಿ ದೃಢಪಡಿಸಿದರು.

ದೇಶೀಯ ಸೆಮಿಕಂಡಕ್ಟರ್ ಉತ್ಪಾದನಾ ಸಾಮರ್ಥ್ಯವನ್ನು ದಾಖಲಿಸುವುದರ ಜೊತೆಗೆ ಸಮಕಾಲೀನ ಉತ್ಪಾದನಾ ರೂಪಾಂತರವನ್ನು ನಿರ್ಣಾಯಕ ಮೂಲಸೌಕರ್ಯ ಅಭಿವೃದ್ಧಿಯಾಗಿ ಪರಿಗಣಿಸಲಾಗಿರುವುದನ್ನೂ ಪ್ರಧಾನಮಂತ್ರಿ ಉಲ್ಲೇಖಿಸಿದರು, ಸನಂದ್‌ನಲ್ಲಿ ದೇಶೀಯವಾಗಿ ಸೆಮಿಕಂಡಕ್ಟರ್‌ಗಳನ್ನು ತಯಾರಿಸಲಾಗುತ್ತಿದೆ ಎಂಬುದರತ್ತ ಪ್ರಧಾನಮಂತ್ರಿ ಗಮನ ಸೆಳೆದರು. ಕೇನ್ಸ್ ಸೆಮಿಕಂಡಕ್ಟರ್ ಸ್ಥಾವರದಲ್ಲಿ ಈಗಾಗಲೇ ಉತ್ಪಾದನೆ ಪ್ರಾರಂಭವಾಗಿದೆ. ಎಂದ ಅವರು ಧೋಲೆರಾ ಮತ್ತು ಸೂರತ್ ಎರಡರಲ್ಲೂ ಪ್ರಗತಿಯಲ್ಲಿರುವ ಹೊಸ ಸೆಮಿಕಂಡಕ್ಟರ್ ಯೋಜನೆಗಳನ್ನು ವಿವರಿಸುವುದರ ಜೊತೆಗೆ ಪೂರೈಕೆ ಸರಪಳಿ ಕೇಂದ್ರೀಕರಣದ ರಾಷ್ಟ್ರೀಯ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾ, ಜಾಗತಿಕ ಜಾಲಗಳೊಳಗಿನ ಪ್ರಾದೇಶಿಕ ಮಹತ್ವದ ಕೇಂದ್ರಗಳನ್ನು ಗುರುತಿಸಿದರು. “ಗುಜರಾತ್ ಜಾಗತಿಕ ಸೆಮಿಕಂಡಕ್ಟರ್ ಪೂರೈಕೆ ಸರಪಳಿಗಳಲ್ಲಿ ನಿರ್ಣಾಯಕ ಕೇಂದ್ರವಾಗಿ  ತನ್ನನ್ನು ತಾನು ಸ್ಥಾನಿಕರಿಸಿಕೊಳ್ಳುತ್ತಿದೆ, ಇಲ್ಲಿಂದ ಮೆಟ್ರೋ ಕೋಚ್‌ಗಳು ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪುತ್ತಿರುವುದರಿಂದ ವಡೋದರಾ ರೂಪಾಂತರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ” ಎಂದು ಶ್ರೀ ಮೋದಿ ನುಡಿದರು.

ಎಂಜಿನಿಯರಿಂಗ್, ಭಾರೀ ಯಂತ್ರೋಪಕರಣಗಳು, ರಾಸಾಯನಿಕಗಳು, ಔಷಧಗಳು ಮತ್ತು ವಿದ್ಯುತ್ ಉಪಕರಣಗಳಿಗೆ ಬಲಿಷ್ಠ ಕೇಂದ್ರವಾಗಿ ನಗರವು ಹೊರಹೊಮ್ಮುತ್ತಿರುವುದನ್ನು ಎತ್ತಿ ತೋರಿಸುತ್ತಾ, ವೈವಿಧ್ಯಮಯ ವಲಯಗಳಲ್ಲಿ ವಡೋದರಾದ ಉತ್ಪಾದನಾ ವಿಶೇಷತೆಯನ್ನು ವಿವರಿಸಿದರು. ಹಾಗು ಇದೇ ಸಂದರ್ಭದಲ್ಲಿ ಆಗಿರುವ ವೃತ್ತಿಪರ ಅಭಿವೃದ್ಧಿ ಮೂಲಸೌಕರ್ಯಗಳತ್ತ ಗಮನ ಸೆಳೆದರು. ಗತಿಶಕ್ತಿ ವಿಶ್ವವಿದ್ಯಾಲಯದ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವೃತ್ತಿಪರ ಸಿದ್ಧತೆಯು ಏರೋಸ್ಪೇಸ್ ಯೋಜನೆಗಳ ಜೊತೆಗೆ ವಡೋದರಾವನ್ನು ವಾಯುಯಾನ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಲು ಅವಕಾಶ ಕಲ್ಪಿಸುತ್ತದೆ ಎಂದು ಗುರುತಿಸಿದ ಅವರು, ಇದು ಸಮಗ್ರ ಆರ್ಥಿಕ ಪರಿವರ್ತನೆಗೆ ನಾಂದಿಯಾಗಲಿದೆ ಎಂದರು. “ವಡೋದರಾ ಬಹು ವಲಯಗಳಲ್ಲಿ ಉತ್ಪಾದನಾ ಶಕ್ತಿ ಕೇಂದ್ರವಾಗಿದೆ, ಉದಯೋನ್ಮುಖ ಏರೋಸ್ಪೇಸ್ ಸಾಮರ್ಥ್ಯಗಳೊಂದಿಗೆ ನಗರವು ಜಾಗತಿಕವಾಗಿ ಗುರುತಿಸಲ್ಪಟ್ಟ ವಾಯುಯಾನ ಕೇಂದ್ರವಾಗಿ ವಿಕಸನಗೊಳ್ಳುವುದನ್ನು ಸೂಚಿಸುತ್ತದೆ” ಎಂದು ಶ್ರೀ ಮೋದಿ ಗಮನಿಸಿದರು.

ಐತಿಹಾಸಿಕ ಅನಿಶ್ಚಿತತೆಯೊಳಗೆ ಸಮಕಾಲೀನ ಸವಾಲುಗಳನ್ನು ಸಂದರ್ಭೋಚಿತವಾಗಿ ಪರಿಗಣಿಸುವಾಗ, ಬಹು ಬಿಕ್ಕಟ್ಟುಗಳಿಂದ ಹೊರಹೊಮ್ಮುವ ಜಾಗತಿಕ ಅಸ್ಥಿರತೆಯನ್ನು ಗುರುತಿಸಿದ ಪ್ರಧಾನಮಂತ್ರಿ, ಸಾಂಕ್ರಾಮಿಕ, ಆರ್ಥಿಕ ಅಡ್ಡಿ ಮತ್ತು ಪಶ್ಚಿಮ ಏಷ್ಯಾದ ಸಂಘರ್ಷವನ್ನು ಅನುಕ್ರಮ ಒತ್ತಡದ ಬಿಂದುಗಳೆಂದು ಹೇಳಿದರು. ಪಶ್ಚಿಮ ಏಷ್ಯಾದ ಸಂಘರ್ಷವು ಪ್ರಸ್ತುತ ದಶಕದ ಬಿಕ್ಕಟ್ಟನ್ನು ವ್ಯಾಖ್ಯಾನಿಸುವಂತಿದೆ ಮತ್ತು ಸಾಂಕ್ರಾಮಿಕ ಯುಗದ ಸಾಮೂಹಿಕ ಸಜ್ಜುಗೊಳಿಸುವಿಕೆಗೆ ಅನುಕ್ರಮವಾಗಿ, ಸರ್ಕಾರಿ ಕ್ರಮಗಳು ವಿಶಾಲ ಸಾಮಾಜಿಕ ಜವಾಬ್ದಾರಿಯ ಚೌಕಟ್ಟಿನೊಳಗೆ ಸೇರಿರುವಂತಹವು ಎಂದರು. “ಕರೋನಾ ಬಿಕ್ಕಟ್ಟಿನಿಂದ ಹಿಡಿದು ಜಾಗತಿಕ ಆರ್ಥಿಕ ಅಸ್ತವ್ಯಸ್ತ ಪರಿಸ್ಥಿತಿಗಳ ಮೂಲಕ ಪಶ್ಚಿಮ ಏಷ್ಯಾದ ಉದ್ವಿಗ್ನತೆಯವರೆಗೆ, ಪ್ರತಿಯೊಂದು ರಾಷ್ಟ್ರದ ಮೇಲೆ ಪರಿಣಾಮ ಬೀರುವ ಅಭೂತಪೂರ್ವ ಅಸ್ಥಿರತೆಯನ್ನು ಪ್ರಪಂಚವಿಂದು ಎದುರಿಸುತ್ತಿದೆ, ಆದರೆ ನಾವು ಸಾಮೂಹಿಕವಾಗಿ ಕರೋನಾವನ್ನು ಜಯಿಸಿದಂತೆಯೇ, ಖಂಡಿತವಾಗಿಯೂ ನಿರಂತರ ಸರ್ಕಾರಿ ಪ್ರಯತ್ನದ ಮೂಲಕ ಬಿಕ್ಕಟ್ಟನ್ನು ನಿಭಾಯಿಸುತ್ತೇವೆ” ಎಂದು ಶ್ರೀ ಮೋದಿ ದೃಢವಾಗಿ ನುಡಿದರು.

ವ್ಯವಸ್ಥಿತ ಒತ್ತಡದ ಸಮಯದಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಅತ್ಯಗತ್ಯ ಸಂಪನ್ಮೂಲವೆಂದು  ಹೇಳಿದ ಅವರು, ರಾಷ್ಟ್ರೀಯ ಸ್ಥಿತಿಸ್ಥಾಪಕತ್ವಕ್ಕೆ ಸಾಮೂಹಿಕ ಬದ್ಧತೆ ಅವಶ್ಯ ಎಂದರು. ನಾಗರಿಕರು ಕರ್ತವ್ಯಕ್ಕೆ ಹೇಗೆ ಆದ್ಯತೆ ನೀಡಬೇಕು ಮತ್ತು ರಾಷ್ಟ್ರೀಯ ಸಂಪನ್ಮೂಲಗಳ ಮೇಲಿನ ಹೊರೆಯನ್ನು ಹೇಗೆ ಕಡಿಮೆ ಮಾಡಬೇಕು ಎಂಬುದನ್ನು ಪ್ರಧಾನಮಂತ್ರಿ ವಿವರಿಸಿದರು. ಕಚ್ಚಾ ತೈಲ ಕ್ಷೇತ್ರದ ವಿಶ್ಲೇಷಣೆಯ ಮೂಲಕ ಭಾರತದ ಆಮದು ಅವಲಂಬನೆಯನ್ನು ವಿವರಿಸಿದ ಅವರು  ಇಂಧನ ಭದ್ರತೆಯು ಅಪಾಯಕ್ಕೆ ಒಳಗಾಗುವ  ತೀವ್ರ ದುರ್ಬಲ ವಲಯ  ಎಂದು ಹೇಳಿದರು. ಪ್ರಾದೇಶಿಕ ಸಂಘರ್ಷದಿಂದ ಸೃಷ್ಟಿಯಾಗಿರುವ ಜಾಗತಿಕ ಪೂರೈಕೆ ಸರಪಳಿ ಅಡಚಣೆಗಳನ್ನು ಅವರು ಉಲ್ಲೇಖಿಸಿದರು. “ಭಾರತದ ಆಮದುಗಳಲ್ಲಿ ಹೆಚ್ಚಿನ ಭಾಗವು ಇಂದು ಸಂಘರ್ಷದಲ್ಲಿ ಸಿಲುಕಿರುವ ಪ್ರದೇಶಗಳಿಂದ ಪಡೆಯಲಾಗುವ ಕಚ್ಚಾ ತೈಲವಾಗಿದ್ದು, ಅದು ಕೊರತೆ ಮತ್ತು ಬೆಲೆ ಏರಿಕೆಯ ಎರಡು ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿರುವುದರಿಂದ, ದೇಶಕ್ಕೆ ಸಾರ್ವಜನಿಕ ಭಾಗವಹಿಸುವಿಕೆಯ ಶಕ್ತಿಯ ಅಗತ್ಯವಿದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಪೆಟ್ರೋಲ್-ಡೀಸೆಲ್ ಕಡಿತ ತಂತ್ರಗಳನ್ನು ವಿವರಿಸುವಾಗ ಸಣ್ಣ ವೈಯಕ್ತಿಕ ಪ್ರತಿಜ್ಞೆಗಳ ಮೂಲಕ ಸಾಮೂಹಿಕ ಕ್ರಮವನ್ನು ಸೂಚಿಸಿದ ಪ್ರಧಾನಮಂತ್ರಿ, ಕಾರ್-ಪೂಲಿಂಗ್ ಉಪಕ್ರಮಗಳ ಜೊತೆಗೆ ಸಾರ್ವಜನಿಕ ಸಾರಿಗೆಯ ಆದ್ಯತೆಯನ್ನು ಪ್ರತಿಪಾದಿಸಿದರು. ವರ್ಚುವಲ್ ಸಭೆಗೆ ಆದ್ಯತೆ ಮತ್ತು ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಗಳ ಮೂಲಕ ಕೆಲಸದ ಸ್ಥಳದ ಡಿಜಿಟಲೀಕರಣಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಿದ ಪ್ರಧಾನಮಂತ್ರಿ ಇಂಧನ ಉಳಿಕೆಗೆ ಸಂಬಂಧಿಸಿದ ತಂತ್ರಜ್ಞಾನ-ಸಕ್ರಿಯಗೊಳಿಸಿದ ಪರಿಹಾರಗಳನ್ನು ಬಲವರ್ಧಕಗಳೆಂದು ಗುರುತಿಸಿದರು. “ಸಾಧ್ಯವಾದಲ್ಲೆಲ್ಲಾ, ಮೆಟ್ರೋ, ಎಲೆಕ್ಟ್ರಿಕ್ ಬಸ್‌ಗಳು ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಿ; ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಅನಗತ್ಯ ಇಂಧನ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ವರ್ಚುವಲ್ ಸಭೆಗಳು ಮತ್ತು ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಗಳಿಗೆ ಆದ್ಯತೆ ನೀಡಬೇಕು” ಎಂದು ಶ್ರೀ ಮೋದಿ ಆಗ್ರಹಿಸಿದರು.

ವಿದೇಶಿ ಕರೆನ್ಸಿ ಸಂರಕ್ಷಣೆಯ ಅಗತ್ಯಗಳನ್ನು ಅಡುಗೆ ಮತ್ತು ಅಮೂಲ್ಯ ಲೋಹದ ಕ್ಷೇತ್ರಗಳಿಗೆ ವಿಸ್ತರಿಸಿದ ಪ್ರಧಾನಮಂತ್ರಿ, ಬಿಕ್ಕಟ್ಟಿನ ಅವಧಿಯಲ್ಲಿ ಚಿನ್ನದ ಖರೀದಿಯನ್ನು ಮುಂದೂಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳಿಗಾಗಿ ಅಡುಗೆ ಎಣ್ಣೆ ಬಳಕೆಯನ್ನು ಕಡಿಮೆ ಮಾಡಲು ಮನವಿ ಮಾಡಿದರು. ಅಂತರರಾಷ್ಟ್ರೀಯ ರಜಾ ಪ್ರವೃತ್ತಿಗಳು ಮತ್ತು ಗಮ್ಯಸ್ಥಾನ (ಡೆಸ್ಟಿನೇಶನ್) ವಿವಾಹದ ಫ್ಯಾಷನ್ ಮೂಲಕ ಹೆಚ್ಚುತ್ತಿರುವ ವಿದೇಶಿ ಕರೆನ್ಸಿ ಹೊರಹರಿವಿನತ್ತ ಗಮನ ಸೆಳೆದ ಅವರು, ಬಹು ವಲಯಗಳಲ್ಲಿ ಆಗುವ ಪರಿಣಾಮವನ್ನು ಉಲ್ಲೇಖಿಸಿದರು. “ದೇಶವು ಅಡುಗೆ ಎಣ್ಣೆ ಮತ್ತು ಚಿನ್ನದ ಆಮದುಗಳ ಮೇಲೆ ಗಮನಾರ್ಹ ವಿದೇಶಿ ಕರೆನ್ಸಿಯನ್ನು ಖರ್ಚು ಮಾಡುತ್ತದೆ, ಜೊತೆಗೆ ಡೆಸ್ಟಿನೇಷನ್ (ಗಮ್ಯಸ್ಥಾನ) ವಿವಾಹಗಳು ರಾಷ್ಟ್ರೀಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಮೀಸಲು ಸಂಪನ್ಮೂಲಗಳನ್ನು ಬಳಸುತ್ತವೆ, ಜಾಗತಿಕ ಅನಿಶ್ಚಿತತೆಯ ಅವಧಿಯಲ್ಲಿ ಅವುಗಳ ಬಳಕೆಯನ್ನು ಮಿತಿಗೊಳಿಸುವ ಸಂಯಮ  ಅತ್ಯಗತ್ಯ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಏಕತಾ ಪ್ರತಿಮೆಯನ್ನು ಕಾರ್ಯತಂತ್ರದ ಪ್ರವಾಸೋದ್ಯಮ ಪರ್ಯಾಯವಾಗಿ ಬಳಸಿಕೊಳ್ಳುವುದರ ಜೊತೆಗೆ ರಜಾ ಬಳಕೆಯನ್ನು ದೇಶೀಯ ಪರ್ಯಾಯಗಳತ್ತ ಮರುನಿರ್ದೇಶಿಸುವಂತೆ ಮನವಿ ಮಾಡಿದ, ಪ್ರಧಾನಮಂತ್ರಿಯವರು ಭಾರತ ಕೇಂದ್ರಿತ ಪ್ರಯಾಣ ಮಾದರಿಗಳನ್ನು ಪ್ರತಿಪಾದಿಸಿದರು ಮತ್ತು ಸ್ಮಾರಕವನ್ನು ಅತ್ಯಾಧುನಿಕ ವಿವಾಹ ಸ್ಥಳವಾಗಿ ಪರಿಗಣಿಸಬಹುದೆಂದರು. ಆರ್ಥಿಕ ಗುಣಕ ಪರಿಣಾಮಗಳ ಜೊತೆಗೆ ಅಸಾಧಾರಣ ಸೌಲಭ್ಯಗಳು ಮತ್ತು ಸಾಂಸ್ಕೃತಿಕ ಮಹತ್ವವನ್ನು ಉಲ್ಲೇಖಿಸಿದ ಅವರು ಪ್ರವಾಸೋದ್ಯಮ ಅಭಿವೃದ್ಧಿಯನ್ನು ಕರೆನ್ಸಿ ಸಂರಕ್ಷಣೆಯ ಅಗತ್ಯಗಳೊಂದಿಗೆ ಸಂಯೋಜಿಸಿದರು. “ನಾವು ಭಾರತದೊಳಗೆ ರಜಾದಿನಗಳನ್ನು ಕಳೆಯುವುದು ಮತ್ತು ಮದುವೆಗಳಿಗೆ ಭಾರತೀಯ ಸ್ಥಳಗಳನ್ನು ಆಯ್ಕೆ ಮಾಡುವುದು ಅತ್ಯಗತ್ಯ, ಗುಜರಾತ್ ಮಾತ್ರ ಅಸಾಧಾರಣ ತಾಣಗಳನ್ನು ನೀಡುತ್ತದೆ ಮತ್ತು ಏಕತಾ ಪ್ರತಿಮೆಯು ನಮ್ಮ ರಾಷ್ಟ್ರದೊಳಗೆ ವಿದೇಶಿ ಕರೆನ್ಸಿಯನ್ನು ಉಳಿಸಿಕೊಂಡು ಗಮ್ಯಸ್ಥಾನ ವಿವಾಹಗಳಿಗೆ ಸೂಕ್ತವಾದ ಭವ್ಯವಾದ ಸೌಲಭ್ಯಗಳನ್ನು ನೀಡುತ್ತದೆ” ಎಂದು ಶ್ರೀ ಮೋದಿ ನುಡಿದರು.

“ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ” ಚೌಕಟ್ಟಿನ ಮೂಲಕ ಇಂಧನ, ವಿದೇಶೀ ವಿನಿಮಯ ಸಂರಕ್ಷಣಾ ಮನವಿಗಳನ್ನು ಸಮಗ್ರ ರಾಷ್ಟ್ರೀಯ ಆಂದೋಲನಕ್ಕೆ ಜೋಡಿಸಿದ ಪ್ರಧಾನಮಂತ್ರಿ, ಸ್ಥಳೀಯ ರಸಗೊಬ್ಬರ ಮತ್ತು ನೈಸರ್ಗಿಕ ಕೃಷಿ ಪ್ರಚಾರದ ಮೂಲಕ ಅದಕ್ಕಿರುವ ಕೃಷಿ ಆಯಾಮವನ್ನು ಸ್ಪಷ್ಟಪಡಿಸಿದರು. ಬಹು ಆರ್ಥಿಕ ವಲಯಗಳಲ್ಲಿ ಸ್ಥಳೀಕರಣವನ್ನು ಪ್ರಸ್ತಾಪಿಸಿದರು. ಡೀಸೆಲ್ ಅವಲಂಬನೆಯನ್ನು ಕಡಿಮೆ ಮಾಡುವುದರ ಜೊತೆಗೆ ಸೌರ ಪಂಪ್ ಅಳವಡಿಕೆಯನ್ನು ಒತ್ತಿಹೇಳುತ್ತಾ, ಅವರು ವಿದೇಶಿ ಕರೆನ್ಸಿ ಸಂರಕ್ಷಣಾ ಉದ್ದೇಶಗಳೊಂದಿಗೆ ಪರಿಸರ ಸುಸ್ಥಿರತೆಯನ್ನು ಜೋಡಿಸಿದರು. “ವಿದೇಶಿ ಸರಕುಗಳ ಬದಲಿಗೆ, ಸ್ಥಳೀಯ ಉತ್ಪನ್ನಗಳನ್ನು ಅಳವಡಿಸಿಕೊಳ್ಳಿ ಮತ್ತು ನಿಮ್ಮ ಹಳ್ಳಿಗಳು, ನಗರಗಳು ಹಾಗು ರಾಷ್ಟ್ರದ ಉದ್ಯಮಿಗಳನ್ನು ಸಬಲೀಕರಣಗೊಳಿಸಿ; ಕೃಷಿಯಲ್ಲಿ ನಿರ್ದಿಷ್ಟವಾಗಿ, ವಿದೇಶಿ ಕರೆನ್ಸಿ ಹೊರಹರಿವು ಮತ್ತು ಪರಿಸರ ಹೊರೆ ಎರಡನ್ನೂ ಕಡಿಮೆ ಮಾಡಲು ಸೌರ ಪಂಪ್ ಅಳವಡಿಕೆಯನ್ನು ಹೆಚ್ಚಿಸುವಾಗ ಸ್ಥಳೀಯ ರಸಗೊಬ್ಬರಗಳು ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸಿ” ಎಂದು ಶ್ರೀ ಮೋದಿ ಕರೆ ನೀಡಿದರು.

ಸಾಮೂಹಿಕ ನಾಗರಿಕ ಬದ್ಧತೆಯ ಶಕ್ತಿಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಕರೆನ್ಸಿ ಸಂರಕ್ಷಣಾ ಮನವಿಗಳನ್ನು ಸಾಮೂಹಿಕ ಕ್ರಿಯಾ ಚೌಕಟ್ಟಿನಲ್ಲಿ ಸಂಯೋಜಿಸಿದರು. 140 ಕೋಟಿ ನಾಗರಿಕರ ಸಂಘಟಿತ ಪ್ರತಿಜ್ಞೆ ಮಾಡುವಿಕೆಯನ್ನು ಪರಿವರ್ತನಾ ಶಕ್ತಿ ಎಂದು ಗುರುತಿಸಿದರು. ಬಿಕ್ಕಟ್ಟು ನಿರ್ವಹಣೆಗೆ ಸಾಮೂಹಿಕ ಸಾಮರ್ಥ್ಯದಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತ ಏಕೀಕೃತ ರಾಷ್ಟ್ರೀಯ ಪ್ರತಿಕ್ರಿಯೆಯ ಅಗತ್ಯವನ್ನು ಪುನರುಚ್ಚರಿಸಿದರು. ರಾಷ್ಟ್ರೀಯ ಸ್ಥಿತಿಸ್ಥಾಪಕತ್ವವನ್ನು ದೃಢೀಕರಿಸುವುದಕ್ಕಾಗಿ ಈ ನಿಟ್ಟಿನಲ್ಲಿ ಸಮಾಜದಾದ್ಯಂತ ಸಮಗ್ರ ಸಜ್ಜುಗೊಳಿಸುವಿಕೆಗೆ ಕರೆ ನೀಡಿದರು. “ಈ ಪ್ರಯತ್ನಗಳು ಚಿಕ್ಕದಾಗಿ ಕಾಣಿಸಬಹುದು, ಆದರೆ 140 ಕೋಟಿ ಜನರು ಸಾಮೂಹಿಕವಾಗಿ ಪ್ರತಿಜ್ಞೆ ಮಾಡಿದಾಗ, ಸಣ್ಣ ಪ್ರಯತ್ನಗಳು ದೇಶದ ದೊಡ್ಡ ಶಕ್ತಿಯಾಗುತ್ತವೆ. ಮತ್ತೊಮ್ಮೆ, ಈ ಬಿಕ್ಕಟ್ಟು ನಮ್ಮ ಪ್ರಗತಿ ಅಥವಾ ಅಭಿವೃದ್ಧಿಯ ಮೇಲೆ ಪರಿಣಾಮ ಬೀರದಂತೆ ನಾವು ಒಂದಾಗಬೇಕು ಮತ್ತು ನಾವು ಒಟ್ಟಾಗಿ ಪ್ರತಿಜ್ಞೆಗಳನ್ನು ಪೂರೈಸುತ್ತೇವೆ ಮತ್ತು ನಮ್ಮ ಪ್ರೀತಿಯ ರಾಷ್ಟ್ರವನ್ನು ಬಲಪಡಿಸುತ್ತೇವೆ ಎಂದು ನನಗೆ ವಿಶ್ವಾಸವಿದೆ” ಎಂದು ಶ್ರೀ ಮೋದಿ ದೃಢವಾಗಿ ಹೇಳಿದರು.

ತಮಗೆ ನೀಡಲಾದ ಸರ್ದಾರ್ ಗೌರವ ರತ್ನ ಪ್ರಶಸ್ತಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ, ಸರ್ದಾರ್ ಪಟೇಲ್ ಅವರ ಹೆಸರಿನೊಂದಿಗೆ ಬರುವ ಆಳವಾದ ಜವಾಬ್ದಾರಿಯನ್ನು ಗುರುತಿಸಿದರು, ಗಾಗಾಜಿಭಾಯ್ ಅವರು ತಮ್ಮನ್ನು ಉದ್ದೇಶಕ್ಕೆ ಜಾಣತನದಿಂದ ಬಂಧಿಸಿದ್ದಾರೆ ಎಂದು ವಿಶಿಷ್ಟ ಹಾಸ್ಯದೊಂದಿಗೆ ಪ್ರಧಾನಮಂತ್ರಿ ನುಡಿದರು.. ತಮ್ಮ ಧ್ಯೇಯ ಏನು ಎಂಬುದರ ಬಗ್ಗೆ ಮಾತನಾಡಿದ ಅವರು, ಸರ್ದಾರ್ ಸಾಹೇಬ್ ಅವರ ಅಪೂರ್ಣ ಕನಸುಗಳನ್ನು ಪೂರ್ಣಗೊಳಿಸುವುದು ಮತ್ತು ಅವರು ಪ್ರಾರಂಭಿಸಿದ ಕೆಲಸವನ್ನು ಮುಂದುವರಿಸುವುದು ತನ್ನ ಜೀವನದ ಧ್ಯೇಯವಾಗಿದೆ ಎಂದು ಹೇಳಿದರು. ಜನರಿಂದ ಪಡೆದ ಆಶೀರ್ವಾದಗಳು, ತಾವು ಅಳವಡಿಸಿಕೊಂಡ ಮೌಲ್ಯಗಳು ಮತ್ತು ಗುಜರಾತ್ ಮಣ್ಣಿನಿಂದ ಕಲಿತ ಪಾಠಗಳು ತಮ್ಮ ಅಚಲ ಬದ್ಧತೆಯನ್ನು ಉಳಿಸಿಕೊಳ್ಳುತ್ತವೆ ಎಂದು ಸಭೆಗೆ ಅವರು ಭರವಸೆ ನೀಡಿದರು.

ಜಾಗತಿಕ ಗೌರವಗಳು ಸಂತೋಷದಾಯಕವಾಗಿದ್ದರೂ, ಸ್ವಂತ ಮನೆಯಿಂದ ಬರುವ ಮನ್ನಣೆಯು ವಿಶಿಷ್ಟ ಸಂತೋಷವನ್ನು ತರುತ್ತದೆ ಎಂದು ಹಿಂದೊಮ್ಮೆ ಹೇಳಿದ್ದ ಜನರಲ್ ಕಾರಿಯಪ್ಪ ಅವರ ಒಂದು ಮಾತನ್ನು ಉಲ್ಲೇಖಿಸಿ, ಭಾರತದ ಬೆಳೆಯುತ್ತಿರುವ ಶಕ್ತಿ ಅಂತರರಾಷ್ಟ್ರೀಯ ಗೌರವವನ್ನು ತರುತ್ತದೆ, ಆದರೆ ಮನೆಯ ಆಶೀರ್ವಾದಗಳು ಸೇವೆ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಎಂದು ಪ್ರಧಾನಮಂತ್ರಿ ನುಡಿದರು.

ಸರ್ದಾರ್ ಧಾಮ್ ನ ಶೈಕ್ಷಣಿಕ ಕೊಡುಗೆಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತ, ಭಾಷಣವನ್ನು  ಮುಕ್ತಾಯಗೊಳಿಸುವಾಗ ಸಂಘಟನೆ ಕೈಗೊಂಡ ಪರಿವರ್ತನಾ ಕಾರ್ಯಗಳಿಗೆ ಸಾಂಸ್ಥಿಕ ಮನ್ನಣೆಯನ್ನು ದೊರೆತಿರುವುದನ್ನು ಉಲ್ಲೇಖಿಸಿದರು. ಶೈಕ್ಷಣಿಕ ಅವಕಾಶ ವಿಸ್ತರಣೆಯ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಸಂಸ್ಥೆಯ ಪಾತ್ರವನ್ನು ಪ್ರಧಾನಮಂತ್ರಿ ಗುರುತಿಸಿದರು. ಇಂದಿನ ಯೋಜನೆ ಉದ್ಘಾಟನೆಗಳನ್ನು ಯುವ ಸಬಲೀಕರಣಕ್ಕೆ ಸಾಮಾಜಿಕ ಬದ್ಧತೆಯ ಸಂಕೇತವೆಂದು ಹೇಳಿದ ಅವರು ಭಾರೀ ಪ್ರಶಂಸೆಯನ್ನು ವ್ಯಕ್ತಪಡಿಸಿದರು. “ಶಿಕ್ಷಣ ಮತ್ತು ಅವಕಾಶಗಳ ಮೂಲಕ ರಾಷ್ಟ್ರದ ಭವಿಷ್ಯವನ್ನು ನಿರ್ಮಿಸಲು ಸಮಾಜದ ಸಾಮೂಹಿಕ ಬದ್ಧತೆಯನ್ನು ಪ್ರತಿನಿಧಿಸುವ ಇಂದಿನ ಯೋಜನೆಗಳಿಗೆ ನಾನು ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದೂ ಶ್ರೀ ಮೋದಿ ಹೇಳಿದರು.

 

*****