ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಾಮನ್ನಲ್ಲಿ ಸುಮಾರು ₹2,970 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ ಮತ್ತು ಶಿಲಾನ್ಯಾಸ ನೆರವೇರಿಸಿದರು. ಸ್ಥಳೀಯ ನಾಯಕರು ಮತ್ತು ನಾಗರಿಕರ ಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಅಗಾಧವಾದ ಸಾರ್ವಜನಿಕ ಭಾಗವಹಿಸುವಿಕೆಗೆ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ತಮ್ಮ ಹಿಂದಿನ ಭೇಟಿಯನ್ನು ನೆನಪಿಸಿಕೊಳ್ಳುತ್ತಾ, ತಮ್ಮ ಹಿಂದಿನ ಅವಲೋಕನವು ಹೇಗೆ ವಾಸ್ತವಕ್ಕೆ ಪರಿವರ್ತನೆಯಾಯಿತು ಎಂಬುದರತ್ತ ಗಮನ ಸೆಳೆದರು, ಈ ಪ್ರದೇಶವು ಈಗ ಹೆಮ್ಮೆಯಿಂದ ರಾಷ್ಟ್ರದ ವೈವಿಧ್ಯಮಯ ಮತ್ತು ಚೈತನ್ಯಶೀಲ ಸಾರವನ್ನು ಪ್ರತಿನಿಧಿಸುತ್ತಿದೆ ಎಂದರು. “ದಾಮನ್ ಮಿನಿ ಭಾರತದ ಜೀವಂತ ಉದಾಹರಣೆಯಾಗಿದೆ, ಇಲ್ಲಿ ವಿವಿಧ ಪ್ರದೇಶಗಳ ಜನರ ವಾಸ್ತವ್ಯವು ಇಡೀ ದೇಶದ ಸುಂದರ ನೋಟವನ್ನು ಒದಗಿಸುತ್ತದೆ” ಎಂದೂ ಶ್ರೀ ಮೋದಿ ಹೇಳಿದರು.
ಕೇಂದ್ರಾಡಳಿತ ಪ್ರದೇಶಗಳ ಆಡಳಿತಾತ್ಮಕ ಪ್ರಗತಿಯ ಬಗ್ಗೆ ತೀವ್ರ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ದಮನ್, ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿಗಳಲ್ಲಿ ಅತ್ಯಂತ ಸಕ್ರಿಯವಾಗಿ ಜಾರಿಗೆ ತರಲಾದ ಪರಿಣಾಮಕಾರಿ ಆಡಳಿತ ಮಾದರಿಯನ್ನು ಶ್ಲಾಘಿಸಿದರು. “ನಾನು ಇಲ್ಲಿಗೆ ಬಂದಾಗಲೆಲ್ಲಾ, ನನ್ನ ಹಿಂದಿನ ಭೇಟಿಗೆ ಹೋಲಿಸಿದರೆ, ಈ ಪ್ರದೇಶವು ಅಭಿವೃದ್ಧಿಯ ಹಾದಿಯಲ್ಲಿ ಮೈಲುಗಳಷ್ಟು ಮುಂದೆ ಸಾಗಿದೆ ಎಂದು ನನಗೆ ಅನಿಸುತ್ತದೆ” ಎಂದು ಶ್ರೀ ಮೋದಿ ಹೇಳಿದರು.
ಈ ಪ್ರದೇಶಕ್ಕೆ ಇದೊಂದು ಐತಿಹಾಸಿಕ ಮೈಲಿಗಲ್ಲು ಎಂಬಂತೆ ಅವರು, ಸಂಪರ್ಕ, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ ಮತ್ತು ನಗರ ಮೂಲಸೌಕರ್ಯವನ್ನು ಒಳಗೊಂಡ ಹಲವಾರು ಪರಿವರ್ತನಾ ಯೋಜನೆಗಳಿಗೆ ಅಡಿಪಾಯ ಹಾಕಿದರು ಮತ್ತು ಅವುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಉಪಕ್ರಮಗಳ ಹಿಂದಿನ ಅವಿರತ ಆಡಳಿತಾತ್ಮಕ ಪ್ರಯತ್ನಗಳನ್ನು ಗುರುತಿಸಿದ ಅವರು, ಆಧುನಿಕ ಅನುಕೂಲತೆಗಳು ಮತ್ತು ಯುವಜನರಿಗೆ ಹೊಸ ಅವಕಾಶಗಳನ್ನು ಸುಗಮಗೊಳಿಸಿದ್ದಕ್ಕಾಗಿ ನಾಯಕತ್ವವನ್ನು ಶ್ಲಾಘಿಸಿದರು. “ಈ ಅಭಿವೃದ್ಧಿ ಕಾರ್ಯಗಳು ಜನರ ಜೀವನವನ್ನು ಬಹಳವಾಗಿ ಸುಲಭಗೊಳಿಸುತ್ತವೆ ಮತ್ತು ಯುವಜನರಿಗೆ ಹೊಸ ಮಾರ್ಗಗಳನ್ನು ಯಶಸ್ವಿಯಾಗಿ ಸೃಷ್ಟಿಸುತ್ತವೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ರಾಷ್ಟ್ರೀಯ ಆರ್ಥಿಕ ಭೂದೃಶ್ಯದತ್ತ ಗಮನ ಹರಿಸುತ್ತಾ, ಪ್ರಧಾನಮಂತ್ರಿಯವರು ಇತ್ತೀಚಿನ ಪ್ರೋತ್ಸಾಹದಾಯಕ ಜಿಡಿಪಿ ದತ್ತಾಂಶವನ್ನು ಹಂಚಿಕೊಂಡರು, ಅಂತಿಮ ತ್ರೈಮಾಸಿಕದಲ್ಲಿ ಶೇ. 7.8 ರಷ್ಟು ಅದ್ಭುತ ಬೆಳವಣಿಗೆಗೆ ದೇಶದ ದೃಢವಾದ ಮೂಲಸೌಕರ್ಯ ಉತ್ತೇಜನ ಮತ್ತು ಕಲ್ಯಾಣ-ಚಾಲಿತ ಸುಧಾರಣಾ ಕಾರ್ಯಸೂಚಿಯೇ ಕಾರಣ ಎಂದು ಹೇಳಿದರು. “ಜಾಗತಿಕ ಬಿಕ್ಕಟ್ಟಿನ ಈ ಕಠಿಣ ಹಂತದಲ್ಲಿಯೂ ಸಹ, 140 ಕೋಟಿ ದೇಶವಾಸಿಗಳ ಸಾಮೂಹಿಕ ಪ್ರಯತ್ನಗಳೊಂದಿಗೆ, ಭಾರತವು ತನ್ನನ್ನು ತಾನು ಉಳಿಸಿಕೊಳ್ಳುತ್ತಿದೆ ಮತ್ತು ಮುಂಚೂಣಿಯಲ್ಲಿ ಉಳಿಯಲು ಶ್ರಮಿಸುತ್ತಿದೆ” ಎಂದು ಶ್ರೀ ಮೋದಿ ದೃಢಪಡಿಸಿದರು.
ವಿಶ್ವ ಪರಿಸರ ದಿನಾಚರಣೆಯೊಂದಿಗೆ ರಾಷ್ಟ್ರದ ಮೂಲಸೌಕರ್ಯ ಗುರಿಗಳನ್ನು ಜೋಡಿಸಿ, ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಸಂಪೂರ್ಣವಾಗಿ ಸೌರಶಕ್ತಿಯ ಮೂಲಕ ವಿದ್ಯುತ್ ಒದಗಿಸುವ ದಿಯು ಅದ್ಭುತ ಸಾಧನೆಯನ್ನು ಅವರು ಹೆಮ್ಮೆಯಿಂದ ಎತ್ತಿ ತೋರಿಸಿದರು. ವಿಕೇಂದ್ರೀಕೃತ ಹಸಿರು ವಿದ್ಯುತ್ ಉತ್ಪಾದನೆಯ ಭವಿಷ್ಯವನ್ನು ವಿವರಿಸುತ್ತಾ, ಅವರು ಪ್ರಸ್ತುತ ನಡೆಯುತ್ತಿರುವ ಬೃಹತ್ ಸಸಿ ನೆಡುವ ಅಭಿಯಾನಗಳು ಮತ್ತು ಮೇಲ್ಛಾವಣಿ ಸೌರ ಉಪಕ್ರಮಗಳನ್ನು ಬಹುವಾಗಿ ಪ್ರಶಂಸಿಸಿದರು. “ಮನೆಗಳು ಸೌರಶಕ್ತಿಯಿಂದ ವಿದ್ಯುತ್ ಪಡೆಯುವಂತೆ ಮತ್ತು ಕುಟುಂಬಗಳು ಹೆಚ್ಚುವರಿಯಿಂದ ಆದಾಯವನ್ನು ಗಳಿಸುವಂತೆ ನಾವು ಇದನ್ನು ಮತ್ತಷ್ಟು ಮುಂದುವರಿಸಬೇಕು” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ಸ್ಥಳೀಯ ಜನರು ತೋರಿದ ಆಳವಾದ ನಾಗರಿಕ ಪ್ರಜ್ಞೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ, ಈ ಪ್ರದೇಶದಲ್ಲಿ ನಡೆಯುತ್ತಿರುವ ಸಾಮೂಹಿಕ ಸ್ವಚ್ಛತಾ ಅಭಿಯಾನಗಳನ್ನು ವಿಶೇಷವಾಗಿ ಶ್ಲಾಘಿಸಿದರು. “ಈ ಸಕ್ರಿಯ ಸಾರ್ವಜನಿಕ ಭಾಗವಹಿಸುವಿಕೆಯು ಜನರಲ್ಲಿ ಸ್ವಚ್ಛತೆ ನಿಜವಾಗಿಯೂ ಹೇಗೆ ಒಂದು ಸ್ಪೂರ್ತಿಯಾಗಿದೆ, ಚೈತನ್ಯವಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ” ಎಂದೂ ಶ್ರೀ ಮೋದಿ ಹೇಳಿದರು.
ಕೇಂದ್ರಾಡಳಿತ ಪ್ರದೇಶ ಮತ್ತು ಸಿಂಗಾಪುರದ ಐತಿಹಾಸಿಕ ಆರ್ಥಿಕ ವಿಕಾಸದ ನಡುವೆ ದೂರದರ್ಶಿತ್ವದ ಸಮಾನಾಂತರವನ್ನು ಉಲ್ಲೇಖಿಸಿದ ಅವರು, ನಮೋ ವಿಮಾನ ನಿಲ್ದಾಣ ಮತ್ತು ಐಕಾನಿಕ್ ದಮನ್ಗಂಗಾ ಸೇತುವೆಯಂತಹ ಬೃಹತ್ ಮೂಲಸೌಕರ್ಯ ಯೋಜನೆಗಳು ಕೇವಲ ಸ್ಥಳೀಯ ಸೌಕರ್ಯಗಳ ಮೇಲ್ದರ್ಜೆಗೇರಿಸುವಿಕೆ ಅಥವಾ ನವೀಕರಣಗಳಲ್ಲ, ಬದಲು ಜಾಗತಿಕ ಪ್ರಾಮುಖ್ಯತೆಗೆ ಮೆಟ್ಟಿಲುಗಳಾಗಿವೆ ಎಂದು ಅವರು ಒತ್ತಿ ಹೇಳಿದರು. “ಅಂತಹ ಎಲ್ಲಾ ಮೂಲಸೌಕರ್ಯಗಳ ಮೂಲಕ, ನಾವು ಭವಿಷ್ಯದ ಮಹಾನ್ ನಿರ್ಣಯಗಳಿಗೆ ಗಟ್ಟಿಯಾದ ಅಡಿಪಾಯವನ್ನು ಹಾಕುತ್ತಿದ್ದೇವೆ” ಎಂದು ಶ್ರೀ ಮೋದಿ ದೃಢಪಡಿಸಿದರು.
ಸ್ಥಳೀಯ ಅಭಿವೃದ್ಧಿ ಕಾರ್ಯಸೂಚಿಯ ಸಾರಿಗೆ (ಲಾಜಿಸ್ಟಿಕ್) ಪ್ರಯೋಜನಗಳನ್ನು ವಿವರಿಸುತ್ತಾ, ವರ್ಧಿತ ಚಲನಶೀಲತೆಯು ವ್ಯಾಪಾರ ಮತ್ತು ಆತಿಥ್ಯವನ್ನು ವಿಸ್ತರಿಸುವಲ್ಲಿ ಹೇಗೆ ನೇರವಾಗಿ ಪೋಷಣೆ ಒದಗಿಸುತ್ತದೆ ಎಂಬುದನ್ನು ಪ್ರಧಾನಮಂತ್ರಿ ವಿವರಿಸಿದರು. ‘”ಸಾರಿಗೆ ನಗರದಂತಹ ಸೌಲಭ್ಯಗಳು ನಿಸ್ಸಂದೇಹವಾಗಿ ನಮ್ಮ ವ್ಯಾಪಾರ ಮತ್ತು ಲಾಜಿಸ್ಟಿಕ್ಸ್ಗೆ ಹೊಸ ಮತ್ತು ಶಕ್ತಿಯುತ ವೇಗವನ್ನು ನೀಡುತ್ತವೆ” ಎಂಬುದರತ್ತ ಶ್ರೀ ಮೋದಿ ಗಮನ ಸೆಳೆದರು. .
ಭಾರತದ ವಿಶಾಲ ಸಮುದ್ರ ಕಾರ್ಯತಂತ್ರವನ್ನು ವಿಸ್ತರಿಸುತ್ತಾ, ಅವರು ಲಕ್ಷದ್ವೀಪದಲ್ಲಿ ಬಂದರು ಅಭಿವೃದ್ಧಿಗಳನ್ನು ಉಲ್ಲೇಖಿಸಿದರು, ಪ್ರದೇಶದ ಸ್ಥಳೀಯ ಪ್ರಗತಿಯನ್ನು ರಾಷ್ಟ್ರದ ಪ್ರಧಾನ ನೀಲಿ ಆರ್ಥಿಕ ದೃಷ್ಟಿಕೋನಕ್ಕೆ ಸಂಯೋಜಿಸಿದರು. ‘”ಹೈಟೆಕ್ ಮೂಲಸೌಕರ್ಯದಿಂದ ನಡೆಸಲ್ಪಡುವ ಈ ಎಲ್ಲಾ ಉದ್ದೇಶಿತ ಪ್ರಯತ್ನಗಳು ನೀಲಿ ಆರ್ಥಿಕತೆಯಲ್ಲಿ ದೇಶದ ಶಕ್ತಿಯನ್ನು, ಬಲವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ಸರ್ಕಾರದ ಕೇಂದ್ರ ಆಶಯವಾದ ಅಭಿವೃದ್ಧಿ ತತ್ವಶಾಸ್ತ್ರವನ್ನು ವ್ಯಾಖ್ಯಾನಿಸುತ್ತಾ, ಪ್ರಧಾನಮಂತ್ರಿಯವರು, ಆಯುಷ್ಮಾನ್ ಆರೋಗ್ಯ ಮಂದಿರಗಳು ಮತ್ತು ಡಿಜಿಟಲ್ ಆರೋಗ್ಯ ಮಿಷನ್ನಂತಹ ಸಮಗ್ರ ಆರೋಗ್ಯ ರಕ್ಷಣಾ ಮಧ್ಯಸ್ಥಿಕೆಗಳ ಮೂಲಕ ಸಮಾಜದ ಅಂಚಿನಲ್ಲಿರುವ ಸಮುದಾಯಗಳು, ಬಡವರು, ಬುಡಕಟ್ಟು ಜನಾಂಗದವರು ಮತ್ತು ಮಧ್ಯಮ ವರ್ಗದವರಿಗೆ ಸಂಪೂರ್ಣ ಆದ್ಯತೆ ನೀಡುವುದನ್ನು ಒತ್ತಿ ಹೇಳಿದರು. ”ಇಂದು, ಬಡವರಲ್ಲಿ ಕಡು ಬಡವರು ಸಹ ಆಯುಷ್ಮಾನ್ ಕಾರ್ಡ್ ಸೌಲಭ್ಯವನ್ನು ಹೊಂದಿದ್ದಾರೆ ಮತ್ತು 5 ಲಕ್ಷ ರೂಪಾಯಿಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯ ಬಲವಾದ ಭರವಸೆಯನ್ನು ಹೊಂದಿದ್ದಾರೆ,” ಎಂದು ಶ್ರೀ ಮೋದಿ ದೃಢಪಡಿಸಿದರು.
ಈ ಉದ್ದೇಶಿತ ಕಲ್ಯಾಣ ಯೋಜನೆಗಳಿಂದ ಸಾಧ್ಯವಾಗಿರುವ ಬೃಹತ್ ಆರ್ಥಿಕ ಪರಿಹಾರವನ್ನು ಪರಿಮಾಣೀಕರಿಸುತ್ತಾ, ಪ್ರಧಾನ ಮಂತ್ರಿಯವರು ಸರಾಸರಿ ಮನೆಗಳಿಗೆ ಲಭ್ಯವಾಗುತ್ತಿರುವ ಆರ್ಥಿಕ ಪ್ರಯೋಜನಗಳನ್ನು ವಿವರಿಸಿದರು. “ಆಯುಷ್ಮಾನ್ ಕಾರ್ಡ್ ಮತ್ತು ಜನೌಷಧಿ ಕೇಂದ್ರಗಳ ಮೂಲಕವೇ, ಬಡವರು ಮತ್ತು ಮಧ್ಯಮ ವರ್ಗದ ಸುಮಾರು ಎರಡೂಕಾಲು ಲಕ್ಷ ಕೋಟಿ ರೂಪಾಯಿಗಳನ್ನು ಯಶಸ್ವಿಯಾಗಿ ಉಳಿಸಲಾಗಿದೆ” ಎಂಬುದರತ್ತ ಶ್ರೀ ಮೋದಿ ಗಮನ ಸೆಳೆದರು.
ಹಿಂದಿನ ಕೊರತೆಗಳೊಂದಿಗೆ ಪ್ರಸ್ತುತ ವೈದ್ಯಕೀಯ ಮೂಲಸೌಕರ್ಯವನ್ನು ಹೋಲಿಸಿದ ಅವರು ಸಿಲ್ವಾಸ್ಸಾದಲ್ಲಿನ ನಮೋ ಆಸ್ಪತ್ರೆಯ ಕಾರ್ಯಾಚರಣೆಯ ಯಶಸ್ಸನ್ನು ಮತ್ತು ದಮನ್ನಲ್ಲಿ ಅದರ ಇನ್ನೊಂದು ಘಟಕದ ಉದ್ಘಾಟನೆಯನ್ನು ಸಂಭ್ರಮದಿಂದ ಉಲ್ಲೇಖಿಸಿದರು, ಇದರಿಂದ ಸ್ಥಳೀಯ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದ ಅವಕಾಶ ಲಭ್ಯವಾಗಿರುವುದನ್ನೂ ಅವರು ಪ್ರಸ್ತಾಪಿಸಿದರು. “ಈ ಪ್ರದೇಶದ ಜನರು ಈಗ ಇನ್ನೂ ಉತ್ತಮ ಮತ್ತು ಹೆಚ್ಚು ಮುಂದುವರಿದ ಆರೋಗ್ಯ ರಕ್ಷಣೆಯ ಅಪಾರ ಪ್ರಯೋಜನವನ್ನು ಪಡೆಯುತ್ತಾರೆ” ಎಂದು ಶ್ರೀ ಮೋದಿ ದೃಢವಾಗಿ ಹೇಳಿದರು.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಸಮಗ್ರ ದತ್ತಾಂಶವನ್ನು ಉಲ್ಲೇಖಿಸಿ, ಸಾಂಸ್ಥಿಕ ಹೆರಿಗೆಗಳು ಮತ್ತು ಮಕ್ಕಳ ರೋಗನಿರೋಧಕ ಶಕ್ತಿಗಳಲ್ಲಿನ ಅಗಾಧವಾದ ಜಿಗಿತವನ್ನು ಪ್ರಧಾನಮಂತ್ರಿ ವಿವರಿಸಿದರು, ಇದು ಮಿಷನ್ ಇಂದ್ರಧನುಷ್ನಂತಹ ಉಪಕ್ರಮಗಳ ವ್ಯವಸ್ಥಿತ ವಿಜಯವನ್ನು ಸಾಬೀತುಪಡಿಸುತ್ತದೆ. “ಇಂದು ಆಯುಷ್ಮಾನ್ ಭಾರತ್ ಆ ಅಂಕಿಅಂಶಗಳನ್ನು ಮೂಲಭೂತವಾಗಿ ಬದಲಾಯಿಸಿದೆ, ಮತ್ತು ಈಗ ಶೇಕಡಾ 60 ಕ್ಕೂ ಹೆಚ್ಚು ಕುಟುಂಬಗಳು ಈ ಪ್ರಮುಖ ಭದ್ರತೆಯನ್ನು ಪಡೆಯುತ್ತಿವೆ” ಎಂದು ಶ್ರೀ ಮೋದಿ ನುಡಿದರು.
ಸರ್ಕಾರದ ಸಮಗ್ರ ಆರೋಗ್ಯ ಸೇವೆಯ ಮೂಲಕ ಹೆಚ್ಚಿನ ಲಾಭವನ್ನು ಪಡೆದ ಜನಸಂಖ್ಯಾಶಾಸ್ತ್ರವನ್ನು ಪ್ರತ್ಯೇಕವಾಗಿ ಉಲ್ಲೇಖಿಸುತ್ತಾ, ಪ್ರಧಾನಮಂತ್ರಿಯವರು ದೇಶದ ಮಹಿಳೆಯರ ಕಡೆಗೆ ತಮ್ಮ ಗಮನ ಹರಿಸಿದರು. ”ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರದ ಪ್ರಾಮಾಣಿಕ ಪ್ರಯತ್ನಗಳಿಂದ ಯಾರಾದರೂ ಹೆಚ್ಚಿನ ಪ್ರಯೋಜನ ಪಡೆದಿದ್ದರೆ, ಅದು ನಿರ್ವಿವಾದವಾಗಿ ದೇಶದ ನಾರಿ ಶಕ್ತಿಯಾಗಿದೆ” ಎಂದು ಶ್ರೀ ಮೋದಿ ಹೇಳಿದರು.
ಕೇಂದ್ರಾಡಳಿತ ಪ್ರದೇಶದಲ್ಲಿ ಶೈಕ್ಷಣಿಕ ಪುನರುಜ್ಜೀವನವನ್ನು ಪ್ರಸ್ತಾಪಿಸಿ ಮಾತನಾಡಿದ ಪ್ರಧಾನಮಂತ್ರಿ, ಉನ್ನತ ವ್ಯಾಸಂಗಕ್ಕಾಗಿ ಯುವಜನರ ಬಲವಂತದ ವಲಸೆಯನ್ನು ನಿಲ್ಲಿಸುವುದರ ಬಗ್ಗೆ, ಸ್ಮಾರ್ಟ್ ತರಗತಿ ಕೊಠಡಿಗಳು ಮತ್ತು ಸ್ವಾಮಿ ವಿವೇಕಾನಂದ ಶಿಕ್ಷಣ ಕೇಂದ್ರದ ತ್ವರಿತ ಸ್ಥಾಪನೆಯನ್ನು ಸಂಭ್ರಮಿಸುವ ಬಗ್ಗೆ ಗಮನ ಸೆಳೆದರು. ”ಕೇಂದ್ರಾಡಳಿತ ಪ್ರದೇಶವು ಅತ್ಯಂತ ನಿರ್ಣಾಯಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಮೇಣ ಮತ್ತು ದೃಢವಾಗಿ ಮುಂದೆ ಬರುತ್ತಿದೆ ಎಂದು ನನಗೆ ಸಂತೋಷವಾಗಿದೆ,” ಎಂದು ಶ್ರೀ ಮೋದಿ ಹೇಳಿದರು.
ಪ್ರಸ್ತುತ ಸಾಗುತ್ತಿರುವ ಶೈಕ್ಷಣಿಕ ಕ್ರಾಂತಿಯೊಳಗೆ ಲಿಂಗ ಸಮಾನತೆಗೆ ಸರ್ಕಾರದ ಅಚಲ ಬದ್ಧತೆಯನ್ನು ಪುನರುಚ್ಚರಿಸುತ್ತಾ, ಯುವತಿಯರನ್ನು ಉನ್ನತೀಕರಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಥಳೀಯ ಉಪಕ್ರಮಗಳನ್ನು ಅವರು ಶ್ಲಾಘಿಸಿದರು. ”ಸರಸ್ವತಿ ಸೈಕಲ್ ಯೋಜನೆ ಮತ್ತು ಸರಸ್ವತಿ ವಿದ್ಯಾ ಯೋಜನೆಯಂತಹ ಯೋಜನೆಗಳು ಇಲ್ಲಿನ ಹೆಣ್ಣುಮಕ್ಕಳಿಗೆ ಬಹಳಷ್ಟು ಸಹಾಯ ಮಾಡುತ್ತಿವೆ,” ಎಂಬುದರತ್ತ ಶ್ರೀ ಮೋದಿ ಗಮನ ಸೆಳೆದರು.
ಶೈಕ್ಷಣಿಕ ಪದವಿಗಳನ್ನು ಪ್ರಾಯೋಗಿಕ ಜಾಗತಿಕ ಅವಕಾಶಗಳೊಂದಿಗೆ ಅಡೆ್-ತಡೆ ರಹಿತವಾಗಿ ಜೋಡಿಸುವ ರಾಷ್ಟ್ರೀಯ ಕಾರ್ಯತಂತ್ರವನ್ನು ವಿವರಿಸಿದ ಪ್ರಧಾನಮಂತ್ರಿ, ಡ್ರೋನ್ಗಳು, ಐಟಿ ಮತ್ತು ನವೀಕರಿಸಬಹುದಾದ ಇಂಧನದಂತಹ ಕ್ಷೇತ್ರಗಳಲ್ಲಿ ವಿಶೇಷ ಶಿಕ್ಷಣದ ಮೂಲಕ ಕಾರ್ಯಪಡೆಯನ್ನು ಆಧುನೀಕರಿಸುವ ಅಗತ್ಯವನ್ನು ಒತ್ತಿ ಹೇಳಿದರು. ‘”ವೃತ್ತಿಪರ ವಲಯಗಳಲ್ಲಿ ನಮ್ಮ ಪ್ರಸ್ತುತ ಗುರಿ ಸಿದ್ಧತೆಯು ಭಾರತದ ಭವಿಷ್ಯದ ಕಾರ್ಯಪಡೆಯನ್ನು ಮೂಲಭೂತವಾಗಿ ಬಲಪಡಿಸುತ್ತದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ಹದಿನೆಂಟನೇ ಎನ್.ಐ.ಎಫ್.ಟಿ. (NIFT) ಕ್ಯಾಂಪಸ್ನ ಅಡಿಪಾಯ ಮತ್ತು ಐಟಿಐ ದಮನ್ನಲ್ಲಿ ಆಧುನಿಕ ತಾಂತ್ರಿಕ ಕೋರ್ಸ್ಗಳ ಅಳವಡಿಕೆಯನ್ನು ಘೋಷಿಸಿದ ಪ್ರಧಾನಮಂತ್ರಿ, ಈ ಸಂಸ್ಥೆಗಳನ್ನು ಜಗತ್ತಿಗೆ ನಿರ್ಣಾಯಕ ಹೆಬ್ಬಾಗಿಲುಗಳು ಎಂದು ಬಣ್ಣಿಸಿದರು. ‘”ಈ ಪ್ರಮುಖ ಸಂಸ್ಥೆಯು ಇಲ್ಲಿನ ಯುವಜನರನ್ನು ಅಮೂಲ್ಯವಾದ ಜಾಗತಿಕ ಮಾನ್ಯತೆಯೊಂದಿಗೆ ಜೋಡಿಸುತ್ತದೆ” ಎಂದು ಶ್ರೀ ಮೋದಿ ದೃಢಪಡಿಸಿದರು.
ದೇಶದ ಕ್ರೀಡಾ ಸಂಸ್ಕೃತಿಯ ಆಮೂಲಾಗ್ರ ಪ್ರಜಾಪ್ರಭುತ್ವೀಕರಣದತ್ತ ಗಮನ ಸೆಳೆದ ಪ್ರಧಾನಮಂತ್ರಿ, ಖೇಲೋ ಇಂಡಿಯಾದಂತಹ ಉಪಕ್ರಮಗಳು ಮಹಾನಗರ ಕ್ರೀಡಾಂಗಣಗಳಿಂದ ಸ್ಥಳೀಯ ಕ್ರೀಡಾಂಗಣಗಳಿಗೆ ಗಮನವನ್ನು ಬದಲಾಯಿಸಿವೆ ಎಂದೂ ಶ್ಲಾಘಿಸಿದರು, ನಿರ್ದಿಷ್ಟವಾಗಿ ದಿಯು ಪ್ರಮುಖ ಬೀಚ್ ಕ್ರೀಡಾ ತಾಣವಾಗಿ ಬೆಳೆದಿರುವುದನ್ನು ಎತ್ತಿ ತೋರಿಸಿದರು. “ಖೇಲೋ ಇಂಡಿಯಾದಂತಹ ಪ್ರಯತ್ನಗಳು ಸಣ್ಣ ಪ್ರದೇಶಗಳ ಯುವಜನರಿಗೆ ತಮ್ಮ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಲು ಸಂಪೂರ್ಣವಾಗಿ ಹೊಸ ವೇದಿಕೆಯನ್ನು ನೀಡಿವೆ” ಎಂದು ಶ್ರೀ ಮೋದಿ ಹೇಳಿದರು.
ಭಾರತದ ಸಾಂಸ್ಕೃತಿಕ ಮತ್ತು ಭೌಗೋಳಿಕ ವೈವಿಧ್ಯತೆಯನ್ನು ಬಳಸಿಕೊಳ್ಳುವ ಕಾರ್ಯತಂತ್ರದ ವಿಧಾನವನ್ನು ವಿವರಿಸಿದ ಪ್ರಧಾನಮಂತ್ರಿ, ‘ದೇಖೋ ಅಪ್ನಾ ದೇಶ್’ನಂತಹ ಅಭಿಯಾನಗಳು ಪರಂಪರೆ, ಪರಿಸರ ಮತ್ತು ಸಾಹಸ ಪ್ರವಾಸೋದ್ಯಮ ಕ್ಷೇತ್ರಗಳನ್ನು ಹೇಗೆ ಸಕ್ರಿಯವಾಗಿ ಪುನರುಜ್ಜೀವನಗೊಳಿಸುತ್ತಿವೆ ಎಂಬುದನ್ನು ವಿವರಿಸಿದರು. “ಪ್ರವಾಸೋದ್ಯಮವು ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ನಿರಂತರವಾಗಿ ಉತ್ತೇಜಿಸುವಂತೆ ಮಾಡುವುದು ಮತ್ತು ಸಣ್ಣ ಸ್ಥಳಗಳನ್ನು ಬೃಹತ್ ಅವಕಾಶಗಳೊಂದಿಗೆ ಜೋಡಿಸುವುದು ನಮ್ಮ ಪರಮೋಚ್ಛ ಗುರಿಯಾಗಿದೆ “ಎಂದೂ ಶ್ರೀ ಮೋದಿ ಪ್ರತಿಪಾದಿಸಿದರು.
ಕಳೆದ ಕೆಲವು ವರ್ಷಗಳಲ್ಲಿ ಪ್ರವಾಸಿಗಳ ಸಂಖ್ಯೆಯಲ್ಲಿ ಹತ್ತು ಪಟ್ಟು ಹೆಚ್ಚಳವಾಗಿದೆ ಎಂದು ಬಹಿರಂಗಪಡಿಸಿದ ಅವರು, ಈ ಆರ್ಥಿಕ ಉತ್ಕರ್ಷಕ್ಕೆ ಸ್ಥಳೀಯ ಕಡಲತೀರಗಳ ಸ್ವಚ್ಛ ನಿರ್ವಹಣೆ ಮತ್ತು ಆಧುನೀಕರಿಸಿದ ಸಮುದ್ರ ತೀರಗಳು ಮತ್ತು ಪಾರಂಪರಿಕ ಸಂಕೀರ್ಣಗಳ ತ್ವರಿತ ಅಭಿವೃದ್ಧಿ ಕಾರಣ ಎಂದು ಹೇಳಿದರು. “ದಮನ್ ರಾತ್ರಿ ಮಾರುಕಟ್ಟೆ ಮತ್ತು ನಮೋ ಪಾತ್ ಸಮುದ್ರ ತೀರದಂತಹ ಹಲವಾರು ತಾಣಗಳು ಇಂದು ಈ ಇಡೀ ಪ್ರದೇಶಕ್ಕೆ ಹೊಸ ಗುರುತನ್ನು ಸಕ್ರಿಯವಾಗಿ ರೂಪಿಸುತ್ತಿವೆ” ಎಂದು ಶ್ರೀ ಮೋದಿ ಹೇಳಿದರು.
ಈ ಪ್ರದೇಶದ ಕೈಗಾರಿಕಾ ಸಾಹಸವನ್ನು, ವಿಶೇಷವಾಗಿ ದಾದ್ರಾ ಮತ್ತು ನಗರ ಹವೇಲಿಯ ರಾಷ್ಟ್ರೀಯ ಮಾನವ ನಿರ್ಮಿತ ನಾರು ರಾಜಧಾನಿ ಸ್ಥಾನಮಾನವನ್ನು ಗುರುತಿಸಿದ ಪ್ರಧಾನಮಂತ್ರಿ, ಸ್ಥಳೀಯ ಎಂಎಸ್ಎಂಇಗಳಿಗೆ ನೀಡಲಾಗುವ ನಿರಂತರ ಆರ್ಥಿಕ ಬೆಂಬಲವನ್ನು ಒತ್ತಿ ಹೇಳಿದರು. “ಮುಂದಿನ ದಿನಗಳಲ್ಲಿ ಈ ಪ್ರದೇಶವು ಉತ್ಪಾದನೆಗೆ ಪ್ರಮುಖ ಕೇಂದ್ರವಾಗಲಿದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ” ಎಂದು ಶ್ರೀ ಮೋದಿ ದೃಢಪಡಿಸಿದರು.
ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವಾಗ ಪ್ರಧಾನಮಂತ್ರಿ ಅವರು ಸೂಕ್ಷ್ಮ ಆಡಳಿತವನ್ನು ವೇಗವರ್ಧಿತ ತಳಮಟ್ಟದ ಪರಿವರ್ತನೆಯೊಂದಿಗೆ ಜೋಡಿಸಿರುವುದನ್ನು ಉಲ್ಲೇಖಿಸಿದರು. ಮುಂದಿನ ಹಂತದ ಅಭಿವೃದ್ಧಿಯನ್ನು ಮುನ್ನಡೆಸಲು ಸ್ಥಳೀಯ ಯುವಜನರು, ರೈತರು ಮತ್ತು ಉದ್ಯಮಿಗಳ ಮೇಲೆ ತಮಗಿರುವ ಅಚಲ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು. “ನಿಮ್ಮ ಕನಸುಗಳನ್ನು ನನಸಾಗಿಸಲು ಕೇಂದ್ರ ಸರ್ಕಾರ ಸದಾ ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ” ಎಂದು ಶ್ರೀ ಮೋದಿ ದೃಢವಾಗಿ ಹೇಳಿದರು.
*****
A new development push for Daman with the launch of projects across healthcare, aviation, tourism and infrastructure. These initiatives will transform lives across the Union Territory. https://t.co/KWFCZYEjHc
— Narendra Modi (@narendramodi) June 5, 2026
आज जो आंकड़े आए हैं, उन आंकड़ों से साफ है कि भारत की अर्थव्यवस्था की नींव कितनी मजबूत है।
— PMO India (@PMOIndia) June 5, 2026
वर्ष 2025-26 में भारत ने 7.7% की growth rate हासिल की है।
और पिछला quarter... जो 31 मार्च को खत्म हुआ, उसमें भी भारत की growth 7.8% रही है: PM @narendramodi
वैश्विक संकट के इस बुरे दौर में भी 140 करोड़ देशवासियों के सामूहिक प्रयासों से भारत, खुद को संभाल भी रहा है... लेकिन साथ-साथ सबसे आगे रहने में प्रयास सफल होते जा रहे हैं: PM @narendramodi
— PMO India (@PMOIndia) June 5, 2026
हमारी सरकार कैसे स्वास्थ्य को प्राथमिकता देते हुए चल रही है... इसका एक प्रमाण नेशनल फैमिली हेल्थ सर्वे के नतीजों में भी मिलता है।
— PMO India (@PMOIndia) June 5, 2026
एक समय, भारत में ज़्यादातर बच्चों की डिलिवरी अस्पताल में नहीं होती थी।
आज देश में 90 प्रतिशत से अधिक डिलिवरी अस्पतालों में हो रही है: PM…
मिशन इंद्रधनुष की वजह से बच्चों के टीकाकरण के क्षेत्र में भी भारत ने अच्छी प्रगति की है।
— PMO India (@PMOIndia) June 5, 2026
2014 से पहले केवल 60 प्रतिशत बच्चों का पूर्ण टीकाकरण हो पाता था।
आज यह आंकड़ा बढ़कर करीब 90 प्रतिशत तक पहुंच गया है: PM @narendramodi
I am honoured by the special welcome in Daman. The NDA Government has devoted significant resources for the development of Daman and Diu. Various projects have improved the quality of life for the people. pic.twitter.com/iavFDcDvJS
— Narendra Modi (@narendramodi) June 5, 2026
I would like to compliment the people of Daman for the outstanding Swachhata related endeavours in the run-up to today’s programme. When cleanliness is furthered, it boosts diverse sectors ranging from healthcare to tourism.
— Narendra Modi (@narendramodi) June 5, 2026
Here are some more glimpses from today’s welcome. pic.twitter.com/3xpEj5v8Gy
वैश्विक संकट के इस दौर में 140 करोड़ देशवासियों के सामूहिक प्रयासों से भारत खुद को संभाल भी रहा है और सबसे आगे रहने के उसके प्रयास सफल भी हो रहे हैं। देश की विकास गति को लेकर आज आए आंकड़े भी इसके गवाह हैं। pic.twitter.com/ZjCB0ikiuY
— Narendra Modi (@narendramodi) June 5, 2026
दादरा और नगर हवेली के साथ-साथ दमन और दीव में विकास की अनंत संभावनाएं हैं। यहां की जनता-जनार्दन प्रगति के जिस सपने को देख रही है, उसे साकार करने में हमारी सरकार निरंतर जुटी हुई है। pic.twitter.com/zn87TdQE7z
— Narendra Modi (@narendramodi) June 5, 2026
नेशनल फैमिली हेल्थ सर्वे के नतीजे इस बात के प्रत्यक्ष प्रमाण हैं कि आयुष्मान भारत सहित हेल्थ सेक्टर की हमारी योजनाएं देशवासियों के बहुत काम आ रही हैं। pic.twitter.com/aKQwD1mSSW
— Narendra Modi (@narendramodi) June 5, 2026
हमारी सरकार की कोशिश है कि देश के युवाओं को डिग्री के साथ-साथ सही दिशा भी मिले। इसलिए हर क्षेत्र में उन्हें नई अप्रोच के साथ ऐसे तैयार किया जा रहा है, ताकि लोकल टैलेंट के लिए ग्लोबल संभावनाएं भी बनें। pic.twitter.com/S24I8MJPq1
— Narendra Modi (@narendramodi) June 5, 2026