Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿಯಲ್ಲಿ ಐತಿಹಾಸಿಕ ಗಿಡ ನೆಡುವ ಮೈಲಿಗಲ್ಲನ್ನು ಸಾಧಿಸಿದ ಉತ್ತರ ಪ್ರದೇಶದ ಜನತೆಗೆ ಪ್ರಧಾನಮಂತ್ರಿ ಅಭಿನಂದನೆ


ಪ್ರತಿಯೊಬ್ಬ ದೇಶವಾಸಿಗೂ ಸ್ಫೂರ್ತಿ ನೀಡುವ ಅದ್ಭುತ ಸಾಧನೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಉತ್ತರ ಪ್ರದೇಶದ ಜನರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನಕ್ಕೆ ಸಂಬಂಧಿಸಿದ ಈ ಅದ್ಭುತ ಯಶಸ್ಸು ಇಂದಿನ ಜನತೆ ಪರಿಸರ ಸಂರಕ್ಷಣೆಗೆ ಸಂಪೂರ್ಣವಾಗಿ ಬದ್ಧರಾಗಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಇಂತಹ ಉದಾತ್ತ ಉಪಕ್ರಮಗಳು ಬಹಳ ಕಾಲ ಕ್ರಮಿಸಿ, ಉತ್ತರ ಪ್ರದೇಶಕ್ಕೆ ಮಾತ್ರವಲ್ಲದೆ ಇಡೀ ರಾಷ್ಟ್ರಕ್ಕೆ ಹಸಿರು ಭವಿಷ್ಯವನ್ನು ಸಾಕಾರಗೊಳಿಸುವಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿವೆ ಎಂದು ಶ್ರೀ ಮೋದಿಯವರು ತಮ್ಮ ದೃಢ ವಿಶ್ವಾಸವನ್ನು ವ್ಯಕ್ತಪಡಿಸಿದರು.

X ನಲ್ಲಿ ಪೋಸ್ಟ್ ಮಾಡಿದ ಪ್ರಧಾನ ಮಂತ್ರಿಯವರು:

“हर देशवासी को प्रेरित करने वाली इस शानदार उपलब्धि के लिए उत्तर प्रदेश के मेरे सभी परिवारजनों को बहुत-बहुत बधाई! ‘एक पेड़ माँ के नाम’ अभियान से जुड़ी यह अद्भुत सफलता बताती है कि आज पर्यावरण संरक्षण के लिए लोग पूरी तरह से प्रतिबद्ध हैं। मुझे पूरा विश्वास है कि इस तरह की पहल उत्तर प्रदेश के साथ ही पूरे देश के हरित भविष्य को साकार करने की दिशा में बहुत मददगार बनेगी।”

 

*****