Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಮನ್ ಕಿ ಬಾತ್’ ನ 136ನೇ ಸಂಚಿಕೆಯಲ್ಲಿ ತಮ್ಮ ಭಾಷಣದ ಮುಖ್ಯಾಂಶಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ ನ 136ನೇ ಸಂಚಿಕೆಯಲ್ಲಿ ತಮ್ಮ ಭಾಷಣದ ಮುಖ್ಯಾಂಶಗಳನ್ನು ಹಂಚಿಕೊಂಡಿದ್ದಾರೆ.

ಶ್ರೀ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣದ ಸರಣಿ X ಪೋಸ್ಟ್‌ಗಳ ಹೀಗೆ ಹೇಳಿದರು;

“ನಮ್ಮ ರಾಷ್ಟ್ರವನ್ನು ರಕ್ಷಿಸುವ ಮತ್ತು ಅದನ್ನು ಮತ್ತಷ್ಟು ಬಲಪಡಿಸುವ ಎಲ್ಲರಿಗೂ ವಂದನೆಗಳು!

#ಮನ್ ಕಿಬಾತ್”

“ಮಳೆ ಹಿಡಿಯಿರಿ’ ಅಭಿಯಾನವು ಸರಳ ಸಂದೇಶವನ್ನು ಹೊಂದಿದೆ… ನೀರನ್ನು ಪರಿಣಾಮಕಾರಿಯಾಗಿ ಸಂರಕ್ಷಿಸುವುದು. ಈ ನಿಟ್ಟಿನಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ಮಾಡಲಾದ ಪ್ರಯತ್ನಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ’’

#ಮನ್ ಕಿಬಾತ್”

“ಕಷ್ಟಪಟ್ಟು ಗಳಿಸಿದ ಗೆಲುವು ವಿಶೇಷವಾಗಿದೆ, ಆದರೆ ಅದು ಒಂದು ಪ್ರತಿಷ್ಠಿತ ಸ್ಥಳದಲ್ಲಿ ಸಂಭವಿಸಿದಾಗ, ಅದು ಸಂತೋಷವನ್ನು ಹೆಚ್ಚಿಸುತ್ತದೆ!

ನಮ್ಮ ಮಹಿಳಾ ಕ್ರಿಕೆಟ್ ತಂಡವು ಲಾರ್ಡ್ಸ್‌ನಲ್ಲಿ ಗೆದ್ದಾಗ ಅದು ನಿಜಕ್ಕೂ ಸಂಭ್ರಮವಾಗಿದೆ! ತಂಡಕ್ಕೆ ತಂಡಕ್ಕೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು.

#ಮನ್ ಕಿಬಾತ್”

“ಕೇರಳಂನ ಎರ್ನಾಕುಲಂನಲ್ಲಿ, ಸಂಸ್ಕೃತದೊಂದಿಗೆ ಫುಟ್‌ಬಾಲ್ ಅನ್ನು ಸುಂದರವಾಗಿ ವಿಲೀನಗೊಳಿಸುವ ಒಂದು ವಿಶಿಷ್ಟ ಪ್ರಯತ್ನ ನಡೆಯಿತು.

#ಮನ್ ಕಿಬಾತ್”
 

 

“ಕಳೆದ ತಿಂಗಳು ವಿಜ್ಞಾನ ಮತ್ತು ಬಾಹ್ಯಾಕಾಶಕ್ಕೆ ಅತ್ಯುತ್ತಮವಾಗಿದೆ. ವಿಕ್ರಮ್ -1 ರ ಯಶಸ್ಸು ಇಡೀ ರಾಷ್ಟ್ರದ ಕಲ್ಪನೆಯನ್ನು ಸೆರೆಹಿಡಿದಿದೆ. ಅದೇ ವೇಳೆ, ವಿವಿಧ ಒಲಿಂಪಿಯಾಡ್‌ಗಳಲ್ಲಿನ ಯಶಸ್ಸುಗಳು ಖಂಡಿತವಾಗಿಯೂ ಹೆಚ್ಚಿನ ಯುವಕರನ್ನು ಈ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸಲು ಪ್ರೇರೇಪಿಸುತ್ತದೆ.

#ಮನ್ ಕಿ ಬಾತ್”

“ವಾಗೂವನ್ನು ಪುನರುಜ್ಜೀವನಗೊಳಿಸಲು ಮತ್ತು ಜನಪ್ರಿಯಗೊಳಿಸಲು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರಯತ್ನದ ಬಗ್ಗೆ ಹೆಮ್ಮೆಯಿದೆ… ನಿಮ್ಮೆಲ್ಲರನ್ನೂ ನಿಮ್ಮ ಮನೆಗಳಲ್ಲಿಯೂ ಒಂದನ್ನು ಪಡೆಯುವಂತೆ ನಾನು ಒತ್ತಾಯಿಸುತ್ತೇನೆ.

#ಮನ್ ಕಿ ಬಾತ್”

“ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿನ ಗಮನಾರ್ಹ ಪ್ರಯತ್ನಗಳು ನಾವು ಪ್ರಕೃತಿಗೆ ನೀಡುವ ಪ್ರಾಮುಖ್ಯತೆಯನ್ನು ಪ್ರದರ್ಶಿಸುತ್ತವೆ.

#ಮನ್ ಕಿ ಬಾತ್”

“ಡಾ. ರೊನಾಲ್ಡೊ ಲೈಶ್ರಾಮ್ ಅವರ ಈ ನಡೆ ಯಶಸ್ಸು ಮತ್ತು ಸಾಧನೆಗಳ ಹೊರತಾಗಿಯೂ, ಒಬ್ಬರು ಸದಾ ತಮ್ಮ ಬೇರುಗಳೊಂದಿಗೆ ಸಂಪರ್ಕ ಹೊಂದಿರುತ್ತಾರೆ ಎಂಬುದನ್ನು ತೋರಿಸಿದೆ.

#ಮನ್ ಕಿಬಾತ್”

 “ಖಾದಿ ಗಮನಾರ್ಹವಾದ ಪುನರುಜ್ಜೀವನಕ್ಕೆ ಸಾಕ್ಷಿಯಾಗುತ್ತಿದೆ, ಕಳೆದ 12 ವರ್ಷಗಳಲ್ಲಿ ಅದರ ಮಾರಾಟ ಗಮನಾರ್ಹವಾಗಿ ಹೆಚ್ಚುತ್ತಿದೆ. ಈ ಬೆಳೆಯುತ್ತಿರುವ ಜನಪ್ರಿಯತೆಯು ಸ್ಥಳೀಯ ಉದ್ಯಮವನ್ನು ಬಲಪಡಿಸುತ್ತಿದೆ ಮತ್ತು ಲೆಕ್ಕವಿಲ್ಲದಷ್ಟು ಕುಶಲಕರ್ಮಿಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಮುಂಬರುವ ಹಬ್ಬದ ಋತುವಿನಲ್ಲಿ, ನಾವು ಕನಿಷ್ಠ ಒಂದು ಖಾದಿ ಉತ್ಪನ್ನವನ್ನು ಖರೀದಿಸೋಣ ಮತ್ತು ‘ಸ್ಥಳೀಯ ಉತ್ಪನ್ನಗಳಿಗೆ ಧನಿಯಾಗೋಣ (ವೋಕಲ್ ಫಾರ್ ಲೋಕಲ್ )  ಮತ್ತಷ್ಟು ಆವೇಗವನ್ನು ನೀಡೋಣ.

 #ಮನ್ ಕಿಬಾತ್”

“ಚೋಂಗ್‌ಪ್ರೆಂಗ್ ಅನ್ನು ಜನಪ್ರಿಯಗೊಳಿಸುವಲ್ಲಿ ತ್ರಿಪುರಾದ ಶ್ರೀ ಸುರ್ಜಾ ಕುಮಾರ್ ದೆಬ್ಬರ್ಮಾ ಜಿ ಅವರ ಕೆಲಸ ಶ್ಲಾಘನೀಯ. ಮತ್ತುಇದು ನಮ್ಮ ಸಂಗೀತ ಸಂಪ್ರದಾಯಗಳು ಹಲವಾರು ವರ್ಷಗಳಿಂದ ಹೇಗೆ ಚೈತನ್ಯಶೀಲವಾಗಿವೆ ಎಂಬುದನ್ನು ಪ್ರಮುಖವಾಗಿ ಬಿಂಬಿಸುತ್ತದೆ.

#ಮನ್ ಕಿಬಾತ್”

 

“उत्तर प्रदेश में बिजनौर जिले के सेल्फ हेल्प ग्रुप से जुड़ी महिलाओं ने एक ऐसी स्वदेशी हर्बल टी तैयार की है, जिसने कई माताओं-बहनों के जीवन में आत्मनिर्भरता की नई खुशबू घोल दी है। अपने अनोखे स्वाद और गुणों की वजह से उनके ब्रांड ने बहुत कम समय में ही लोगों के बीच खास पहचान बना ली है।

#MannKiBaat”

“बिहार के सीतामढ़ी में सिंगल यूज प्लास्टिक के कचरे से आकर्षक और टिकाऊ बेंच बनाई जा रही है। Waste to Wealth का यह अनोखा प्रयास बताता है कि Reduce, Reuse और Recycle आज केवल एक नारा नहीं, बल्कि जीवन का हिस्सा बनता जा रहा है।

#MannKiBaat”
 

“मुझे इस बात की बहुत प्रसन्नता है कि गणेश उत्सव पर मिट्टी की प्रतिमा बनाने के मेरे आग्रह पर देशवासियों ने बहुत सकारात्मक रुख दिखाया है। उन्होंने मुझे जो संदेश भेजे हैं, उनसे गणपति की भक्ति के साथ-साथ प्रकृति के प्रति उनके समर्पण भाव का पता चलता है।

#MannKiBaat”
 

 

*****