Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಧೈರ್ಯ ಮತ್ತು ಪರಿಶ್ರಮದ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ  ಅವರು ಅದೃಷ್ಟ ಅನುಕೂಲಕರವಾಗಿದ್ದಾಗಲೂ ಧೈರ್ಯವನ್ನು ಕಳೆದುಕೊಳ್ಳಬಾರದು, ಏಕೆಂದರೆ ತಾಳ್ಮೆ ಮತ್ತು ಪರಿಶ್ರಮವು ಕಳೆದುಹೋದ ನೆಲೆಯನ್ನು ಮರಳಿ ಪಡೆಯಲು ವ್ಯಕ್ತಿಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಸಾಗರದ ಮಧ್ಯದಲ್ಲಿ ತನ್ನ ಹಡಗು ಮುರಿದು ಬಿದ್ದಾಗ ಭರವಸೆ ಕಳೆದುಕೊಳ್ಳದೆ, ಈಜುವ ಮೂಲಕ ಬದುಕುಳಿಯಲು ಶ್ರಮಿಸುತ್ತಿರುವ ನುರಿತ ನಾವಿಕನಂತೆ, ಕಷ್ಟಗಳನ್ನು ನಿವಾರಿಸುವ ಕುರಿತ ಸಂಸ್ಕೃತ ಸುಭಾಷಿತವನ್ನು ಪ್ರಧಾನಿ ಹಂಚಿಕೊಂಡಿದ್ದಾರೆ-

ಪ್ರಧಾನಮಂತ್ರಿ ಅವರು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.

“त्याज्यं न धैर्यं विधुरेऽपि दैवे धैर्यात्कदाचित्स्थितिमाप्नुयात्सः।

याते समुद्रेऽपि च पोतभङ्गे सांयात्रिको वाञ्छति कर्म एव।। ”

ಸುಭಾಷಿತವು ಅದೃಷ್ಟ ಪ್ರತಿಕೂಲವಾಗಿದ್ದರೂ ಸಹ ತಾಳ್ಮೆಯನ್ನು ಕಳೆದುಕೊಳ್ಳಬಾರದು ಎಂದು ತಿಳಿಸುತ್ತದೆ, ಏಕೆಂದರೆ ತಾಳ್ಮೆಯ ಮೂಲಕ ಕಳೆದುಹೋದ ಅನುಕೂಲಕರ ಪರಿಸ್ಥಿತಿಯನ್ನು ಸದಾ  ಮರಳಿ ಪಡೆಯಬಹುದು. ಒಬ್ಬ ನುರಿತ ನಾವಿಕನಂತೆ, ಸಮುದ್ರದ ಮಧ್ಯದಲ್ಲಿ ತನ್ನ ಹಡಗು ಒಡೆದು ಹೋದಾಗಲೂ, ಧೈರ್ಯ ಕಳೆದುಕೊಳ್ಳದೆ ತನ್ನ ಕಾರ್ಯಗಳ ಮೇಲೆ ಅಂದರೆ ಬದುಕುಳಿಯುವ ಮತ್ತು ಈಜುವ ಪ್ರಯತ್ನದ ಮೇಲೆ ಮಾತ್ರ ಗಮನಹರಿಸುತ್ತಾನೆ.

ಪ್ರಧಾನಮಂತ್ರಿ ಅವರು ತಮ್ಮ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;

“त्याज्यं न धैर्यं विधुरेऽपि दैवे धैर्यात्कदाचित्स्थितिमाप्नुयात्सः।

याते समुद्रेऽपि च पोतभङ्गे सांयात्रिको वाञ्छति कर्म एव ।।”

 

*****