ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐಐಟಿ ದೆಹಲಿಯ 57ನೇ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಿದರು. ಸಮಾರಂಭದ ಆಳವಾದ ಭಾವನಾತ್ಮಕ ಪ್ರತಿಸ್ಪಂದನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕ್ಯಾಂಪಸ್ ನ ರೋಮಾಂಚಕ, ಕನಸು ತುಂಬಿದ ವಾತಾವರಣವನ್ನು ಪ್ರಮುಖವಾಗಿ ಉಲ್ಲೇಖಿಸಿದರು. ಕೋವಿಡ್ ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಹಿಂದಿನ ವರ್ಚುವಲ್ ಹಾಜರಾತಿಯನ್ನು ನೆನಪಿಸಿಕೊಂಡ ಅವರು, ಪದವಿ ಪಡೆಯುತ್ತಿರುವ ವರ್ಗದ ನಡುವೆ ಭೌತಿಕವಾಗಿ ಹಾಜರಿರುವುದಕ್ಕೆ ತಮ್ಮ ವೈಯಕ್ತಿಕ ತೃಪ್ತಿಯನ್ನು ವ್ಯಕ್ತಪಡಿಸಿದರು. “ಈ ಅದ್ಭುತ ಅನುಭವವನ್ನು ಇಂದು ಈ ಕ್ಯಾಂಪಸ್ ನಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವುದು ನನಗೂ ತುಂಬಾ ವಿಶೇಷ ಸಂಗತಿಯಾಗಿದೆ ” ಎಂದು ಶ್ರೀ ಮೋದಿ ಹೇಳಿದರು.
ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರ ಸ್ಮರಣೀಯ ಶೈಕ್ಷಣಿಕ ಸಾಧನೆಗಳನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಅವರ ಪದವಿಗಳು ಶೈಕ್ಷಣಿಕ ಯಶಸ್ಸಿಗಿಂತ ಹೆಚ್ಚಿನದನ್ನು ಪ್ರತಿನಿಧಿಸುತ್ತವೆ, ರಾಷ್ಟ್ರಕ್ಕೆ ಕೊಡುಗೆ ನೀಡುವ ತೀರ್ಪಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ಒತ್ತಿ ಹೇಳಿದರು. ಅವರು ಪದಕ ಪುರಸ್ಕೃತರನ್ನು ವಿಶೇಷವಾಗಿ ಶ್ಲಾಘಿಸಿದರು ಮತ್ತು ಸಂಸ್ಥೆಯಲ್ಲಿ ಹೊಸ ಕೃತಕ ಬುದ್ಧಿಮತ್ತೆ ಉಪಕ್ರಮಗಳ ಪ್ರಾರಂಭವನ್ನು ಸಂಭ್ರಮದಿಂದ ಉಲ್ಲೇಖಿಸಿದರು. “ದೇಶಕ್ಕಾಗಿ ಬಹಳಷ್ಟು ಕೆಲಸ ಮಾಡುವ ಕನಸಿನೊಂದಿಗೆ ನೀವು ಇಲ್ಲಿಂದ ಹೊರಬರುತ್ತಿದ್ದೀರಿ” ಎಂದು ಶ್ರೀ ಮೋದಿ ದೃಢಪಡಿಸಿದರು.
ವಿದ್ಯಾರ್ಥಿಗಳ ಬಿರುಗಾಳಿಯಂತಹ ತ್ವರಿತಗತಿಯ ಪ್ರಯಾಣವನ್ನು ಪ್ರತಿಬಿಂಬಿಸಿದ ಪ್ರಧಾನಮಂತ್ರಿಯವರು, ಓರಿಯಂಟೇಶನ್ ದಿನದಿಂದ ಘಟಿಕೋತ್ಸವದವರೆಗಿನ ಅವರ ಪರಿವರ್ತನೆಯನ್ನು ಸ್ಪಷ್ಟವಾಗಿ ನೆನಪಿಸಿದರು, ಮೊದಲ ಸಂಬಳವನ್ನು ಪಡೆಯುವುದು ಮತ್ತು ನವೋದ್ಯಮಗಳನ್ನು (ಸ್ಟಾರ್ಟ್ಅಪ್ ಗಳನ್ನು) ನಿರ್ಮಿಸುವುದರಿಂದ ಹಿಡಿದು ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದುವರಿಸುವವರೆಗೆ ವೈವಿಧ್ಯಮಯ ಆಕಾಂಕ್ಷೆಗಳು ಅವರಲ್ಲಿವೆ ಎಂಬುದನ್ನು ಪ್ರಧಾನಮಂತ್ರಿಯವರು ಗುರುತಿಸಿದರು. ಅದು ಅವರ ಮನಸ್ಸನ್ನು ತುಂಬಿದೆ ಎಂದವರು ಹೇಳಿದರು. “ಈ ಗಮನಾರ್ಹ ಪ್ರಯಾಣದಿಂದ ಮತ್ತು ಜೀವನದಲ್ಲಿ ಸಂಪೂರ್ಣವಾಗಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಉತ್ಸಾಹದಿಂದ ನೀವು ಖಂಡಿತವಾಗಿಯೂ ಸಾಕಷ್ಟು ತೃಪ್ತಿಯನ್ನು ಹೊಂದಿರಬಹುದು” ಎಂದು ಶ್ರೀ ಮೋದಿ ಹೇಳಿದರು.
ತಮ್ಮ ಪ್ರಸ್ತುತ ಕ್ಷಣಗಳನ್ನು ಆಳವಾಗಿ ಪ್ರೀತಿಸಿ ನೆನಪಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ಪ್ರಧಾನಮಂತ್ರಿಯವರು, ಕುಮಾವೂನ್, ಅರಾ, ಕಾರಾ, ವಿಂಧಿ, ನೀಲಗಿರಿ, ಕೈಲಾಶ್ ಮತ್ತು ಹಿಮಾದ್ರಿಯಾದ್ಯಂತ ಅಂತರ-ಹಾಸ್ಟೆಲ್ ಪೈಪೋಟಿಗಳು ಸೇರಿದಂತೆ ಪ್ರೀತಿಯ ಕ್ಯಾಂಪಸ್ ನೆನಪುಗಳನ್ನು ಹಾಸ್ಯಮಯವಾಗಿ ಉಲ್ಲೇಖಿಸಿದರು. “ಮುಂಬರುವ ದಿನಗಳಲ್ಲಿ ನೀವು ಬೃಹತ್ ಜವಾಬ್ದಾರಿಗಳನ್ನು ಹೊಂದಿರುವಾಗ, ಈ ಸ್ಥಳದ ನೆನಪುಗಳು ಖಂಡಿತವಾಗಿಯೂ ನಿಮಗೆ ಶಕ್ತಿ ತುಂಬುತ್ತವೆ” ಎಂದು ಶ್ರೀ ಮೋದಿ ಹೇಳಿದರು.
ಸಾಂಸ್ಥಿಕ ಬೆಂಬಲ ವ್ಯವಸ್ಥೆಯ ಬಗ್ಗೆ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಪದವಿ ಪಡೆಯುತ್ತಿರುವ ವರ್ಗದವರು ತಮ್ಮ ಗೆಳೆಯರು, ಪ್ರಾಧ್ಯಾಪಕರು, ಮಾರ್ಗದರ್ಶಕರು ಮತ್ತು ಸಹಾಯಕ ಸಿಬ್ಬಂದಿಯನ್ನು ತಮ್ಮ ಬಾಡಿಗೆ ಕುಟುಂಬಗಳತೆ ಜೀವನಪರ್ಯಂತದ ಆಸ್ತಿ ಎಂದು ಗುರುತಿಸಬೇಕು ಎಂದು ಅಗ್ರಹಿಸಿದರು. “ನಿಮ್ಮ ಭವಿಷ್ಯದ ಪ್ರತಿಯೊಂದು ಯಶಸ್ಸಿನಲ್ಲಿ ನೀವು ಈ ಎಲ್ಲ ವ್ಯಕ್ತಿಗಳನ್ನು ಆಳವಾಗಿ ನೆನಪಿಸಿಕೊಳ್ಳುತ್ತೀರಬೇಕು ಮತ್ತು ಕೃತಜ್ಞರಾಗಿರಬೇಕು” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ವೇಗವಾಗಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಮತ್ತು ವ್ಯೂಹಾತ್ಮಕ ಜಾಗತಿಕ ಭೂದೃಶ್ಯವನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಬೃಹತ್ ಜಾಗತಿಕ ಪರಿವರ್ತನೆಗಳಿಗೆ ತಾಂತ್ರಿಕ ಪ್ರಗತಿಯ ತ್ವರಿತಗತಿಯ ವೇಗವು ಪ್ರಥಮ ವೇಗವರ್ಧಕವಾಗಿದೆ ಎಂದು ಗುರುತಿಸಿದರು. ಕ್ಷಿಪ್ರ ಬದಲಾವಣೆಯ ಈ ಯುಗವನ್ನು ಅವರು ಅಭೂತಪೂರ್ವ ಸವಾಲುಗಳು ಮತ್ತು ವಿಶಾಲವಾದ ಹೊಸ ಅವಕಾಶಗಳ ದ್ವಿಮುಖ ಭೂದೃಶ್ಯವಾಗಿ ಪರಿಗಣಿಸಿದರು. “ಈ ಎಲ್ಲಾ ಕ್ಷಿಪ್ರ ಬದಲಾವಣೆಗಳ ನಡುವೆ, ನನ್ನ ಮಾತುಗಳನ್ನು ನೆನಪಿಡಿ: ನಿರಂತರವಾಗಿ ಕಲಿಯುವವನು ಗೆಲ್ಲುತ್ತಾನೆ” ಎಂದು ಶ್ರೀ ಮೋದಿ ದೃಢವಾಗಿ ನುಡಿದರು.
ಐಐಟಿ ಪದವಿಯ ನಿಜವಾದ ಮೌಲ್ಯವನ್ನು ಮರುವ್ಯಾಖ್ಯಾನಿಸಿದ ಪ್ರಧಾನಮಂತ್ರಿಯವರು, ಅರ್ಹತೆಯು ಹೆಚ್ಚಿನ ಸಿಜಿಪಿಎ ಅಥವಾ ಲಾಭದಾಯಕ ಉದ್ಯೋಗ ಕೊಡುಗೆಯನ್ನು ಮೀರಿದಂತಹದ್ದು, ಅದು ಸುಧಾರಿತ/ಆಧುನಿಕ ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳ ಖಚಿತ ಜಾಗತಿಕ ಪ್ರಮಾಣೀಕರಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಒತ್ತಿ ಹೇಳಿದರು. “ನಿಮ್ಮ ಪದವಿಯು ಅತ್ಯಂತ ಕಷ್ಟಕರವಾದ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕೆಂದು ನಿಮಗೆ ನಿಖರವಾಗಿ ತಿಳಿದಿದೆ ಎಂದು ಇಡೀ ಜಗತ್ತಿಗೆ ತಿಳಿಸುತ್ತದೆ” ಎಂದು ಶ್ರೀ ಮೋದಿ ಹೇಳಿದರು.
ಶೈಕ್ಷಣಿಕ ಪರಿಶ್ರಮ ಮತ್ತು ಜೀವನಪರ್ಯಂತ ಸ್ಥಿತಿಸ್ಥಾಪಕತ್ವದ ನಡುವೆ ತುಲನಾತ್ಮಕ ಹೋಲಿಕೆ ಮಾಡಿದ ಪ್ರಧಾನಮಂತ್ರಿಯವರು, ಸಂಕೀರ್ಣ ಪ್ರಯೋಗಾಲಯ ಸಿಮ್ಯುಲೇಶನ್ಗಳನ್ನು ಪರಿಹರಿಸುವಂತೆಯೇ ನಿರ್ವಹಿಸಬಹುದಾದ ಘಟಕಗಳಾಗಿ ವಿಭಜಿಸುವ ಮೂಲಕ ಬೃಹತ್ ಜೀವನದ ಸವಾಲುಗಳನ್ನು ಎದುರಿಸುವಂತೆ ಯುವಜನರಿಗೆ ಸಲಹೆ ನೀಡಿದರು. “ಜೀವನದಲ್ಲಿ ಕಷ್ಟಗಳು ಅನಿವಾರ್ಯವಾಗಿ ಬಂದರೆ, ಸಂಪೂರ್ಣವಾಗಿ ಹೊಸ ಅವಕಾಶಗಳು ಸಹ ಹೊರಹೊಮ್ಮುತ್ತವೆ; ನೀವು ಸಂಪೂರ್ಣ ಜಾಗರೂಕರಾಗಿರಬೇಕು” ಎಂದು ಶ್ರೀ ಮೋದಿ ಹೇಳಿದರು.
ರಚನಾತ್ಮಕ ಶೈಕ್ಷಣಿಕ ಪರಿಸರವನ್ನು ಅನಿರೀಕ್ಷಿತ ನೈಜ-ಪ್ರಪಂಚದ ಸನ್ನಿವೇಶಗಳೊಂದಿಗೆ ಹೋಲಿಸಿದ ಪ್ರಧಾನಮಂತ್ರಿಯವರು, ವಿಶ್ವವಿದ್ಯಾಲಯ ಪರೀಕ್ಷೆಗಳಿಗಿಂತ ಭಿನ್ನವಾಗಿ, ಜೀವನದ ಅತ್ಯಂತ ನಿರ್ಣಾಯಕ ಸವಾಲುಗಳು ಸಂಪೂರ್ಣವಾಗಿ ‘ಪಠ್ಯಕ್ರಮದಿಂದ ಹೊರಗೆ ನಿಂತು ‘ ಕಾರ್ಯನಿರ್ವಹಿಸುತ್ತವೆ ಎಂದು ಪದವೀಧರರಿಗೆ ಎಚ್ಚರಿಕೆ ನೀಡಿದರು. ನಿಜವಾದ ಯಶಸ್ಸು ಕೇವಲ ಪೂರ್ವನಿರ್ಧರಿತ ಪ್ರಶ್ನೆಗಳಿಗೆ ಉತ್ತರಿಸುವುದರಲ್ಲಿ ಮಾತ್ರವಲ್ಲ, ಸಮಾಜವು ಸ್ವೀಕರಿಸಿದ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸುವಲ್ಲಿ ಅಡಗಿದೆ ಎಂದು ಅವರು ಒತ್ತಿ ಹೇಳಿದರು. “ಅನೇಕ ಹಳೆಯ ವಿದ್ಯಾರ್ಥಿಗಳ ಯಶಸ್ಸಿಗೆ ಮೂಲಭೂತ ಕಾರಣವೆಂದರೆ ನಿರ್ಣಾಯಕ ಪ್ರಶ್ನೆಗಳನ್ನು ಅವರು ಧೈರ್ಯದಿಂದ ಗುರುತಿಸಿದ್ದಾರೆ ಮತ್ತು ಜಗತ್ತು ಅವುಗಳನ್ನು ಪ್ರಶ್ನೆಗಳಾಗಿ ಪರಿಗಣಿಸುವುದನ್ನು ನಿಲ್ಲಿಸಿದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ಹಿಂದಿನ ಪೀಳಿಗೆಗಳು ಹೊತ್ತ ಐತಿಹಾಸಿಕ ಹೊರೆಗಳನ್ನು ಪ್ರತಿಬಿಂಬಿಸಿದ ಪ್ರಧಾನಮಂತ್ರಿಯವರು, ಸ್ವಾತಂತ್ರ್ಯವನ್ನು ಸಾಧಿಸುವ ಏಕೈಕ ಗುರಿಯು ಅಪಾರ ತ್ಯಾಗ ಮತ್ತು ತಪಸ್ಸಿನಿಂದ ಗುರುತಿಸಲ್ಪಟ್ಟ ಇಡೀ ಯುಗವನ್ನು ಹೇಗೆ ವ್ಯಾಖ್ಯಾನಿಸಿದೆ ಎಂಬುದನ್ನು ಸ್ಮರಿಸಿದರು. ಮುಂದಿನ ಮೂರು ದಶಕಗಳಲ್ಲಿ ರಾಷ್ಟ್ರದ ಅಭಿವೃದ್ಧಿ ಗುರಿಗಳೊಂದಿಗೆ ನೇರವಾಗಿ ತಮ್ಮ ವೃತ್ತಿಜೀವನದ ಪಥಗಳನ್ನು ಹೊಂದಿಸುವ ಮೂಲಕ ತಮ್ಮದೇ ಆದ ಪರಂಪರೆಯನ್ನು ವ್ಯಾಖ್ಯಾನಿಸಲು ಅವರು ಪ್ರಸ್ತುತ ಪೀಳಿಗೆಗೆ ಸಲಹೆ ಮಾಡಿದರು. “ನಿಮ್ಮ ಪ್ರತಿಯೊಂದು ನಿರ್ಧಾರದ ಆಧಾರವು ದೇಶಕ್ಕೆ ಏನು ಪ್ರಯೋಜನ ಮತ್ತು ಯಾವ ರಾಷ್ಟ್ರೀಯ ಅಗತ್ಯವನ್ನು ಪೂರೈಸಲಾಗುತ್ತದೆ ಎಂಬುದಾಗಿರಬೇಕು” ಎಂದು ಶ್ರೀ ಮೋದಿ ದೃಢಪಡಿಸಿದರು.
ಆರ್ಥಿಕ, ತಾಂತ್ರಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಸಮಗ್ರ ಸ್ವಾವಲಂಬನೆಯತ್ತ ಸರ್ಕಾರದ ಆಕ್ರಮಣಕಾರಿ ಪ್ರಯತ್ನವನ್ನು ವಿವರಿಸಿದ ಪ್ರಧಾನಮಂತ್ರಿಯವರು, ಯುವ ಸಬಲೀಕರಣವು ವಿಕಸಿತ ಭಾರತದ ಅಡಿಪಾಯವಾಗಿದೆ ಎಂದು ಒತ್ತಿ ಹೇಳಿದರು. ಸಾಂಪ್ರದಾಯಿಕವಾಗಿ ನಿರ್ಬಂಧಿತ ಕ್ಷೇತ್ರಗಳನ್ನು ಯುವ ನವೋದ್ಯಮಿಗಳಿಗೆ ಪ್ರಜಾಸತ್ತಾತ್ಮಕಗೊಳಿಸಲು ಮತ್ತು ಮುಕ್ತಗೊಳಿಸಲು ಆಡಳಿತದ ಕಾರ್ಯತಂತ್ರದ ನೀತಿ ನಿರ್ಧಾರಗಳನ್ನು ಅವರು ಉತ್ಸಾಹದಿಂದ ಉಲ್ಲೇಖಿಸಿದರು. “ದೇಶದ ಯುವಜನರು ಹೆಚ್ಚು ಸಶಕ್ತರಾದಷ್ಟೂ, ಇಡೀ ದೇಶವು ಹೆಚ್ಚು ಸಶಕ್ತವಾಗುತ್ತದೆ” ಎಂದು ಶ್ರೀ ಮೋದಿ ಹೇಳಿದರು.
ಸರ್ಕಾರದ ಕಾರ್ಯತಂತ್ರದ ಸುಧಾರಣೆಗಳ ನಂತರ ಬಾಹ್ಯಾಕಾಶ ಕ್ಷೇತ್ರದ ಸ್ಫೋಟಕ ಬೆಳವಣಿಗೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಯುವ ಎಂಜಿನಿಯರ್ಗಳ ಸ್ಮರಣೀಯ ಸಾಧನೆಗಳನ್ನು ಸಂಭ್ರಮದಿಂದ ಉಲ್ಲೇಖಿಸಿದರು, ಅವರು ಈಗ ತಮ್ಮದೇ ಆದ ರಾಕೆಟ್ಗಳನ್ನು ಸಕ್ರಿಯವಾಗಿ ವಿನ್ಯಾಸಗೊಳಿಸುತ್ತಿದ್ದಾರೆ ಮತ್ತು ಉಡಾವಣೆ ಮಾಡುತ್ತಿದ್ದಾರೆ, ಈ ಸಾಧನೆಯು ಈ ಹಿಂದೆ ಬೆರಳೆಣಿಕೆಯಷ್ಟು ರಾಷ್ಟ್ರಗಳಿಗೆ ಸೀಮಿತವಾಗಿತ್ತು. “ಇಂದು, ಅದೇ ಬಾಹ್ಯಾಕಾಶ ಕ್ಷೇತ್ರವು ನಮ್ಮ ಸಾವಿರಾರು ಯುವಜನರಿಗೆ ಹೊಸ ಸುಂದರ ಅವಕಾಶಗಳ ಆಕಾಶವಾಗಿ ಮಾರ್ಪಟ್ಟಿದೆ” ಎಂದು ಶ್ರೀ ಮೋದಿ ಹೇಳಿದರು.
ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ತ್ವರಿತ ದೇಶೀಯ ಪ್ರಗತಿಯತ್ತ ಬೆಟ್ಟು ಮಾಡಿದ ಪ್ರಧಾನಮಂತ್ರಿಯವರು, ಈ ಬಗ್ಗೆ ಹಿಂದೆ ಇದ್ದ ಸಂದೇಹವನ್ನು ತಳ್ಳಿಹಾಕಿದರು, ಆರಂಭಿಕ ಉತ್ಪಾದನಾ ಘಟಕಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಮತ್ತು ರಾಷ್ಟ್ರೀಯ ವಿಶ್ವಾಸವನ್ನು ಹೆಚ್ಚಿಸುತ್ತಿವೆ ಎಂದು ಹೆಮ್ಮೆಯಿಂದ ಹೇಳಿದರು. “ಎಲ್ಲೋ ಯುವಕನೊಬ್ಬ ಪೂರ್ಣ ಆತ್ಮವಿಶ್ವಾಸದಿಂದ ಹೆಮ್ಮೆಯಿಂದ ಹೇಳುತ್ತಿದ್ದಾನೆ: ‘ಭಾರತದಲ್ಲಿ ಚಿಪ್ ತಯಾರಿಸುವುದು ನನ್ನ ತಲೆಮಾರಿನ ಕ್ರಾಂತಿಕಾರಿ ಸಂಗತಿ’ ಎಂದು ಶ್ರೀ ಮೋದಿ ಹೇಳಿದರು
ಡ್ರೋನ್ ವಲಯದ ಪರಿವರ್ತನಾತ್ಮಕ ಪರಿಣಾಮವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಯುವ ನವೋದ್ಯಮಿಗಳು ಕೃಷಿ ಮತ್ತು ವೈದ್ಯಕೀಯ ವಿತರಣೆಯಿಂದ ಹಿಡಿದು ರಾಷ್ಟ್ರೀಯ ರಕ್ಷಣೆಯವರೆಗಿನ ಕ್ಷೇತ್ರಗಳಲ್ಲಿ ಹೇಗೆ ಕ್ರಾಂತಿಯನ್ನುಂಟು ಮಾಡುತ್ತಿದ್ದಾರೆ ಎಂಬುದನ್ನು ವಿವರಿಸಿದರು. “ಇಂದು, ಈ ವಲಯದಲ್ಲಿ ಹೆಚ್ಚು ಪ್ರೇರಿತ ಯುವಜನರು ನಂಬಲಾಗದ ಹೊಸ ಸಾಧ್ಯತೆಗಳನ್ನು ಸಕ್ರಿಯವಾಗಿ ಸೃಷ್ಟಿಸುತ್ತಿದ್ದಾರೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ಭಾರತದ ಸ್ಟಾರ್ಟ್ಅಪ್ ಕ್ರಾಂತಿಗೆ ಶಕ್ತಿ ತುಂಬಿದ ಕೀರ್ತಿ ಪ್ರಸ್ತುತ ಪೀಳಿಗೆಗೆ ಸಲ್ಲುತ್ತದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಯೂನಿಕಾರ್ನ್ ಗಳು, ಡಿಜಿಟಲ್ ಪಾವತಿಗಳು ಮತ್ತು ಫಿನ್ಟೆಕ್ ಉತ್ಕರ್ಷವು ಲಕ್ಷಾಂತರ ಜನರಿಗೆ ಅಭೂತಪೂರ್ವ ಉದ್ಯಮಶೀಲತಾ ವೇದಿಕೆಗಳನ್ನು ಒದಗಿಸಿದ ಬೃಹತ್ ಆರ್ಥಿಕ ವೇಗವನ್ನು ಅದ್ಭುತ ಎಂದೂ ಬಣ್ಣಿಸಿದರು. “ಈ ಎಲ್ಲಾ ಕ್ರಾಂತಿಗಳು ದೇಶದ ಲಕ್ಷಾಂತರ ಯುವಜನರಿಗೆ ಮೊದಲ ಬಾರಿಗೆ ಸಂಪೂರ್ಣವಾಗಿ ಹೊಸದನ್ನು ಮಾಡಲು ನಂಬಲಾಗದ ರೋಮಾಂಚಕ ಅವಕಾಶವನ್ನು ನೀಡಿವೆ” ಎಂದು ಶ್ರೀ ಮೋದಿ ದೃಢಪಡಿಸಿದರು.
ಭವಿಷ್ಯದ ತಾಂತ್ರಿಕ ಪ್ರಾಬಲ್ಯದ ವಿಸ್ತರಿಸುತ್ತಿರುವ ಗಡಿಗಳನ್ನು ಗುರುತಿಸಿದ ಪ್ರಧಾನಮಂತ್ರಿಯವರು, ಕೃತಕ ಬುದ್ಧಿಮತ್ತೆ, ದತ್ತಾಂಶ ಕೇಂದ್ರಗಳು, ನಿರ್ಣಾಯಕ ಖನಿಜಗಳು, ಆಳ ಸಮುದ್ರ ಪರಿಶೋಧನೆ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಇಂಧನ ಭದ್ರತೆಯಂತಹ ನಿರ್ಣಾಯಕ ಉದಯೋನ್ಮುಖ ಕ್ಷೇತ್ರಗಳನ್ನು ಎತ್ತಿ ತೋರಿಸಿದರು. “ಇಂತಹ ಅನೇಕ ಅತ್ಯಾಧುನಿಕ ಕ್ಷೇತ್ರಗಳು ನಿಮ್ಮ ಅಪಾರ ಪ್ರತಿಭೆ, ನಿಮ್ಮ ದಿಟ್ಟ ನಾವೀನ್ಯತೆ ಮತ್ತು ನಿಮ್ಮ ಬಲವಾದ ನಾಯಕತ್ವಕ್ಕಾಗಿ ಕುತೂಹಲದಿಂದ ಕಾಯುತ್ತಿವೆ” ಎಂದು ಶ್ರೀ ಮೋದಿ ಹೇಳಿದರು.
ಸುಧಾರಿತ ಸಂಶೋಧನೆಯತ್ತ ಬೃಹತ್ ರಾಷ್ಟ್ರೀಯ ಆದ್ಯತೆಯ ಬೆಂಬಲವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಪ್ರಧಾನಮಂತ್ರಿಗಳ ಸಂಶೋಧನಾ ಫೆಲೋಶಿಪ್ ಮತ್ತು ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಶನ್ ಸ್ಥಾಪನೆ ಸೇರಿದಂತೆ ದೃಢವಾದ ಬೆಂಬಲ ಕಾರ್ಯವಿಧಾನಗಳನ್ನು ವಿವರಿಸಿದರು, ಇದು ಒಂದು ಲಕ್ಷ ಕೋಟಿ ರೂಪಾಯಿಗಳವರೆಗಿನ ಅಭೂತಪೂರ್ವ ನಿಧಿಯ ಗುರಿಯನ್ನು ಹೊಂದಿದೆ. “ಇಂದು ದೇಶಕ್ಕೆ ಹೊಸ ಸಂಶೋಧನೆಯ ತೀವ್ರ ಅಗತ್ಯವಿದೆ ಮತ್ತು ಸಂಶೋಧನೆಯ ಮೇಲೆ ನಮ್ಮ ಆಡಳಿತಾತ್ಮಕ ಗಮನವು ಸಮಾನವಾಗಿ ಮತ್ತು ದೃಢವಾಗಿ ಇದೆ” ಎಂದು ಶ್ರೀ ಮೋದಿ ಹೇಳಿದರು.
ಶೈಕ್ಷಣಿಕ ಸಂಪನ್ಮೂಲಗಳನ್ನು ಪ್ರಜಾಸತ್ತಾತ್ಮಕಗೊಳಿಸುವ ಉಪಕ್ರಮಗಳನ್ನು ವಿವರಿಸಿದ ಪ್ರಧಾನಮಂತ್ರಿಯವರು, ‘ಒಂದು ರಾಷ್ಟ್ರ ಒಂದು ಚಂದಾದಾರಿಕೆ’ ಕಾರ್ಯಕ್ರಮವನ್ನು ಉಲ್ಲೇಖಿಸಿದರು, ಇದು ಪ್ರತಿಷ್ಠಿತ ಜಾಗತಿಕ ಸಂಶೋಧನಾ ನಿಯತಕಾಲಿಕಗಳು ಸಣ್ಣ ನಗರಗಳಲ್ಲಿಯೂ ಸಹ ಹೆಚ್ಚುವರಿ ವೆಚ್ಚವಿಲ್ಲದೆ ಲಭ್ಯವಾಗುವುದನ್ನು ಖಚಿತಪಡಿಸುತ್ತದೆ. ಈ ಸಂಶೋಧನಾ ಪುನರುಜ್ಜೀವನಕ್ಕೆ ಚಾಲನೆ ನೀಡುವ ಯುವಜನರ ಬದ್ಧತೆಯ ಮೇಲೆ ಸಂಪೂರ್ಣ ನಂಬಿಕೆ ವ್ಯಕ್ತಪಡಿಸಿದ ಅವರು ಎದುರು ದೀರ್ಘ ಪ್ರಯಾಣವಿದೆ ಎಂಬುದನ್ನೂ ಉಲ್ಲೇಖಿಸಿದರು. “ಸಂಶೋಧನೆಗೆ ಸಂಬಂಧಿಸಿದ ಈ ಸ್ಮರಣೀಯ ಕೆಲಸವು ನಿಮ್ಮೆಲ್ಲರ ಅಚಲ ಬದ್ಧತೆಯಿಂದ ಮಾತ್ರ ಸಾಧ್ಯವಾಗುತ್ತದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ಸಾಮಾಜಿಕ ಮಾಧ್ಯಮ ಯುಗದ ವಿಷಕಾರಿ ಗೊಂದಲಗಳ ಬಗ್ಗೆ ಪದವೀಧರರಿಗೆ ಎಚ್ಚರಿಕೆ ನೀಡಿದ ಪ್ರಧಾನಮಂತ್ರಿಯವರು, ತಮ್ಮ ಸಂಬಳ, ಉದ್ಯೋಗಗಳು ಅಥವಾ ಸ್ಟಾರ್ಟ್ಅಪ್ ಮೈಲಿಗಲ್ಲುಗಳನ್ನು ತಮ್ಮ ಗೆಳೆಯರೊಂದಿಗೆ ಹೋಲಿಕೆ ಮಾಡುವುದನ್ನು ಸಂಪೂರ್ಣವಾಗಿ ತ್ಯಜಿಸುವಂತೆ ಒತ್ತಾಯಿಸಿದರು. ಸ್ವಯಂ ಸುಧಾರಣೆಯ ಮೇಲೆ ಕಟ್ಟುನಿಟ್ಟಾಗಿ ಗಮನ ಹರಿಸುವಾಗ ಅವರ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವಂತೆ ಅವರು ಸಲಹೆ ನೀಡಿದರು. “ನೆನಪಿಡಿ, ಜೀವನವು ಸಂಪೂರ್ಣವಾಗಿ ಲೀಡರ್-ಬೋರ್ಡ್ ಅಲ್ಲ; ನಿಮ್ಮ ನಿಜವಾದ ಸ್ಪರ್ಧೆ ಬೇರೆಯವರೊಂದಿಗೆ ಅಲ್ಲ, ಅದು ನಿಮ್ಮೊಂದಿಗಿದೆ” ಎಂದು ಶ್ರೀ ಮೋದಿ ದೃಢಪಡಿಸಿದರು.
ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತ ಪ್ರಧಾನಮಂತ್ರಿಯವರು, ವಿದ್ಯಾರ್ಥಿಗಳು ಮತ್ತು ಅವರು ಈ ಮೈಲಿಗಲ್ಲಿಗೆ ತಲುಪಲು ಮಾರ್ಗದರ್ಶನ ನೀಡಿದ ಅವರ ಪೋಷಕರು, ಅವರ ಶಿಕ್ಷಕರು ಮತ್ತು ಅವರಿಗೆ ಮಾರ್ಗದರ್ಶನ ನೀಡಿದ ಇಡೀ ಸಾಂಸ್ಥಿಕ ಬೆಂಬಲ ಜಾಲಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. “ನಿಮ್ಮ ಭವಿಷ್ಯವು ರೊಮಾಂಚಕ ಎನ್ನುವಷ್ಟು ಉಜ್ವಲವಾಗಿರಲಿ, ಮತ್ತು ನೀವು ನಿರಂತರವಾಗಿ ಹಾಗು ಧೈರ್ಯದಿಂದ ಹೊಸ ಎತ್ತರವನ್ನು ತಲುಪುವಂತಾಗಲಿ” ಎಂದು ಶ್ರೀ ಮೋದಿ ಹೇಳಿದರು.
*****
Delighted to join the Convocation Ceremony of IIT Delhi. My best wishes to all the graduating students.@iitdelhi https://t.co/Lhuq4yUzJW
— Narendra Modi (@narendramodi) August 8, 2026
Those who learn, win! pic.twitter.com/lWCEzFLeNL
— PMO India (@PMOIndia) August 8, 2026
Keep your curiosity alive in life... Keep your learning instinct alive. pic.twitter.com/nsPmpNlRfk
— PMO India (@PMOIndia) August 8, 2026
Today, India is working towards becoming self-reliant in every sector. pic.twitter.com/D3a2CSPHWY
— PMO India (@PMOIndia) August 8, 2026
Today, new sectors are emerging in the country for our youth. pic.twitter.com/NRWRmP9YXf
— PMO India (@PMOIndia) August 8, 2026
Delighted to attend the Convocation Ceremony at IIT Delhi. My best wishes to the graduating students as they begin a new chapter. May they dream big, embrace challenges and contribute to building a Viksit Bharat. @iitdelhi pic.twitter.com/u5WUbPGVZP
— Narendra Modi (@narendramodi) August 8, 2026
At IIT Delhi, spoke about the special journey from orientation to convocation. From hostel memories and friendships to favourite campus addas, these are experiences that will remain for a lifetime.
— Narendra Modi (@narendramodi) August 8, 2026
As our young graduates step into a new chapter, I urged them to cherish everyone… pic.twitter.com/RetE9wbz8F
It is important to prepare for a world that is changing at an unprecedented pace. Technology is transforming industries, professions and a lot more.
— Narendra Modi (@narendramodi) August 8, 2026
Challenges will come, but those who have the courage to find new solutions will turn challenges into opportunities! pic.twitter.com/5PWTBTYqU2
Among the things I told the IIT Delhi students was…exams have a syllabus, life does not. Life is often completely out of syllabus!@iitdelhi pic.twitter.com/UzBgjferdV
— Narendra Modi (@narendramodi) August 8, 2026
An earlier generation devoted itself to the struggle for India’s freedom. The responsibility before today’s youth is different, but equally significant. From economic and technological self-reliance to industrial strength, they have a vital role in building a Viksit Bharat. pic.twitter.com/ejW5pThLjq
— Narendra Modi (@narendramodi) August 8, 2026
A lot of youngsters are saying…First in my bloodline to build a rocket, a chip and a drone! pic.twitter.com/HJOoybv6H8
— Narendra Modi (@narendramodi) August 8, 2026