Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಬಾಲ ಪುರಸ್ಕಾರ, 2020 ವಿಜೇತರೊಂದಿಗೆ ಪ್ರಧಾನಿ ಸಂವಾದ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತರೊಂದಿಗೆ ಸಂವಾದ ನಡೆಸಿದರು. ಈ ಪ್ರಶಸ್ತಿಯನ್ನು ಭಾರತದ ರಾಷ್ಟ್ರಪತಿಯವರು 2020ರ ಜನವರಿ 22ರಂದು ಪ್ರದಾನ ಮಾಡಿದ್ದರು. ಈ ಪ್ರಶಸ್ತಿ ಪುರಸ್ಕೃತರು ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗಿಯಾಗಲಿದ್ದಾರೆ.

ಈ 49 ಪ್ರಶಸ್ತಿ ಪುರಸ್ಕೃತರು ಜಮ್ಮು ಮತ್ತು ಕಾಶ್ಮೀರ, ಮಣಿಪುರ ಮತ್ತು ಅರುಣಾಚಲ ಪ್ರದೇಶದ ತಲಾ ಒಬ್ಬರು ಸೇರಿದಂತೆ ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಕಲೆ, ಸಂಸ್ಕೃತಿ, ನಾವಿನ್ಯ, ಪ್ರೌಢಿಮೆ, ಸಮಾಜ ಸೇವೆ, ಕ್ರೀಡೆ ಮತ್ತು ಶೌರ್ಯ ವಿಭಾಗದಲ್ಲಿ ಮಕ್ಕಳು ಪ್ರಶಸ್ತಿ ವಿಜೇತರಾಗಿದ್ದಾರೆ.

ಭಾರತ ಸರ್ಕಾರವು ಮಕ್ಕಳನ್ನು ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾಲುದಾರರೆಂದು ಪರಿಗಣಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿ ವರ್ಷ ನಾವಿನ್ಯತೆ, ಪಾಂಡಿತ್ಯ, ಸಮಾಜ ಸೇವೆ, ಕಲೆ ಮತ್ತು ಸಂಸ್ಕೃತಿ, ಕ್ರೀಡೆ ಹಾಗೂ ಶೌರ್ಯ ವಿಭಾಗದಲ್ಲಿನ ಸಾಧನೆ ಗುರುತಿಸು ಪ್ರಶಸ್ತಿ ನೀಡುತ್ತಾ ಬಂದಿದೆ.

 

ವಿವಿಧ ಕ್ಷೇತ್ರಗಳಲ್ಲಿ ಮಕ್ಕಳು ಮಾಡಿದ ಗಣನೀಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಇಷ್ಟು ಚಿಕ್ಕ ವಯಸ್ಸಿನಲ್ಲೇ ಅವರು ಮಾಡಿರುವ ಸೇವೆ ಅದ್ಭುತವಾದ್ದು ಎಂದು ಬಣ್ಣಿಸಿದರು. “ನೀವು ಸಮಾಜ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದಂತೆ ನಿಮ್ಮ ಕರ್ತವ್ಯಗಳನ್ನು ಪಾಲಿಸುತ್ತಿರುವ ವಿಧಾನವನ್ನು ನೋಡಿ ನನಗೆ ಹೆಮ್ಮೆ ಎನಿಸುತ್ತಿದೆ. ನಮ್ಮ ಯುವ ಸ್ನೇಹಿತರ ಧೈರ್ಯ ಮತ್ತು ಸಾಧನೆಗಳ ಕಥೆಗಳನ್ನು ಕೇಳಿದಾಗ ಅದು ನನಗೆ ಇನ್ನೂ ಹೆಚ್ಚಿನ ಕೆಲಸ ಮಾಡಲು ಮತ್ತಷ್ಟು ಚೈತನ್ಯ ನೀಡುತ್ತದೆ ” ಎಂದು ಅವರು ಹೇಳಿದರು.

 

 

ಬಲವಾಗಿ ಬೇರೂರಿರುವ ವಾಸ್ತವತೆಗಳಿಗೆ ಸಂಬಂಧಿಸಿದಂತೆ ಹೆಚ್ಚು ಶ್ರಮವಹಿಸುವಂತೆ ಪ್ರಶಸ್ತಿ ಪುರಸ್ಕೃತ ಮಕ್ಕಳಿಗೆ ಪ್ರಧಾನಿ ಕೇಳಿದರು. “ಈ ಮನ್ನಣೆ ಹೆಚ್ಚಿನದನ್ನು ಸಾಧಿಸಲು ಒಂದು ಆರಂಭವಾಗಿರಬೇಕೇ ಹೊರತು ಸ್ವತಃ ಒಂದು ಅಂತ್ಯವಾಗಬಾರದು ಎಂಬುದನ್ನು ನೀವು ಅರಿತುಕೊಳ್ಳಬೇಕು. ಮತ್ತು ಇಂತಹ ಪ್ರಶಸ್ತಿಗಳು ನಿಮ್ಮ ಗೆಳೆಯರಿಗೆ ಮತ್ತು ಇತರ ಮಕ್ಕಳಿಗೆ ಸಾಧಕರಾಗಲು ಸ್ಫೂರ್ತಿ ನೀಡಬೇಕು” ಎಂದರು.