ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಕಾಮನ್ ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಗಳೊಂದಿಗೆ ಸಂವಾದ ನಡೆಸಿದರು. ಕಳೆದ ದಶಕದಲ್ಲಿ ಭಾರತೀಯ ಕ್ರೀಡೆಯ ಪರಿವರ್ತನೆಯನ್ನು ಗಮನಿಸಿದ ಪ್ರಧಾನಮಂತ್ರಿಯವರು, ತಮ್ಮ 12 ರಿಂದ 13 ವರ್ಷಗಳ ಅಧಿಕಾರಾವಧಿಯಲ್ಲಿ ರಾಷ್ಟ್ರೀಯ ಕ್ರೀಡಾಪಟುಗಳನ್ನು ತಮ್ಮ ನಿವಾಸಕ್ಕೆ ಬರಮಾಡಿಕೊಳ್ಳುವುದು ನಿಯಮಿತ ಮತ್ತು ಪ್ರೀತಿಯ ಸಂಪ್ರದಾಯವಾಗಿದೆ ಎಂದು ಒತ್ತಿ ಹೇಳಿದರು. ದೇಶಕ್ಕಾಗಿ ನಿರಂತರ ವಿಜಯಗಳನ್ನು ಸಾಧಿಸುವಲ್ಲಿ ಭಾರತೀಯ ಕ್ರೀಡಾಪಟುಗಳ ಸಮರ್ಪಿತ ಪ್ರಯತ್ನಗಳು ಮತ್ತು ನಿರಂತರ ಯಶಸ್ಸುಗಳು ಯುವ ಶಾಲಾ ವಿದ್ಯಾರ್ಥಿಗಳಿಗೆ ವಾಡಿಕೆಯ ಪ್ರಚಾರ ಸಲಹೆಗಿಂತ ಹೆಚ್ಚು ಪರಿಣಾಮಕಾರಿಯಾಗಿ ಸ್ಫೂರ್ತಿ ನೀಡುತ್ತವೆ ಎಂದು ಅವರು ದೃಢಪಡಿಸಿದರು. “ಶಾಲೆಗಳಿಗೆ ಹೋಗಿ ನಾವು ಹೇಳಬಹುದಾದ ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಪದಕವು ಅವರಿಗೆ ಸ್ಫೂರ್ತಿ ನೀಡುತ್ತದೆ” ಎಂದು ಶ್ರೀ ಮೋದಿ ಹೇಳಿದರು.
ಪ್ರಧಾನಮಂತ್ರಿ ಅವರು ಕ್ರೀಡಪಟುವೊಬ್ಬರ ಜೊತೆ ಸಂವಾದ ನಡೆಸಿದಾಗ ಅವರು ತಮ್ಮ ಹೆಣ್ಣುಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಬಗೆಗೆ ಮಾಡಿದ್ದ ಪೂರ್ವನಿರ್ಧಾರವನ್ನು ನೆನಪಿಸಿಕೊಂಡರಲ್ಲದೆ ತಮ್ಮ ಪ್ರಗತಿಯನ್ನು ಅನುಸರಿಸಿ ಮುಂಬರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ತಮ್ಮ ಹೆಣ್ಣುಮಕ್ಕಳು ಮೂರು ಪದಕಗಳನ್ನು ಮನೆಗೆ ತರುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಅವರು ಆಕೆಯ ಆತ್ಮವಿಶ್ವಾಸವನ್ನು ಆತ್ಮೀಯವಾಗಿ ದೃಢೀಕರಿಸಿದರು ಮತ್ತು ಉತ್ಕೃಷ್ಟತೆಗೆ ಸಂಬಂಧಿಸಿ ಅವರ ಬದ್ಧತೆಯನ್ನು ಪ್ರೋತ್ಸಾಹಿಸಿದರು.
ಕ್ರೀಡಾಪಟುಗಳ ಆಳವಾದ ಭಾವನಾತ್ಮಕ ಪ್ರಯಾಣವನ್ನು ಗುರುತಿಸಿದ ಪ್ರಧಾನಮಂತ್ರಿಯವರು, ಗುರು ಪೂರ್ಣಿಮೆಯಂದು ಸಾಧಿಸಿದ ವಿಜಯವನ್ನು ತಮ್ಮ ತರಬೇತುದಾರನಿಗೆ ಅರ್ಪಿಸಿದ ಆಟಗಾರನ ಪರಿಶ್ರಮ ಮತ್ತು ನಾಲ್ಕು ವರ್ಷಗಳ ಕಾಲ ನಿರಂತರ ಗಾಯಗಳ ಜೊತೆ ಹೋರಾಡಿದ ಹಾಗು ವೈಯಕ್ತಿಕ ಕಷ್ಟಗಳನ್ನು ಎದುರಿಸಿದ ನಂತರ ರಾಷ್ಟ ಧ್ವಜ ಮೇಲೇರುವುದನ್ನು ನೋಡಿ ವೇದಿಕೆಯಲ್ಲಿ ಆನಂದಭಾಷ್ಪ ಹಾಕಿದ ಮತ್ತೊಬ್ಬ ಕ್ರೀಡಾಪಟುವಿನ ಬಗ್ಗೆ ಪ್ರಸ್ತಾಪಿಸಿದರು. ಅಂತಹ ರಾಷ್ಟ್ರೀಯ ವಿಜಯಗಳು ವೈಯಕ್ತಿಕ ಸಾಧನೆಗಳನ್ನು ಮೀರಿ ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯ ಶಾಶ್ವತ ಮೂಲವಾಗುತ್ತವೆ ಎಂದು ಅವರು ಹೇಳಿದರು. “ನಿಮ್ಮ ಈ ಗೆಲುವು ಮುಂದಿನ ಪೀಳಿಗೆಗೆ ಬಹಳ ದೊಡ್ಡ ಸ್ಫೂರ್ತಿಯಾಗಲಿದೆ” ಎಂದು ಶ್ರೀ ಮೋದಿ ದೃಢಪಡಿಸಿದರು
ಅಂತರರಾಷ್ಟ್ರೀಯ ವಲಯದಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಹೆಚ್ಚುತ್ತಿರುವ ಗೌರವ ಮತ್ತು ಭಯದ ಬಗ್ಗೆ ಚರ್ಚಿಸಿದ ಪ್ರಧಾನಮಂತ್ರಿ, ಭಾರತೀಯ ಎದುರಾಳಿಗಳ ವಿರುದ್ಧ ಸ್ಪರ್ಧಿಸುವಾಗ ಜಾಗತಿಕ ಸ್ಪರ್ಧಿಗಳು ಈಗ ಭಯಭೀತರಾಗುತ್ತಾರೆ ಎಂದು ಹೇಳಿದರು. ಅವರು ನಿರ್ದಿಷ್ಟವಾಗಿ ಭಾರತೀಯ ಬಾಕ್ಸರ್ಗಳ ವರ್ಚಸ್ಸು ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದರು ಮತ್ತು ಖೇಲೋ ಇಂಡಿಯಾ ಯೋಜನೆಯಂತಹ ತಳಮಟ್ಟದ ಉಪಕ್ರಮಗಳು ಹಾಗು ಸರ್ಕಾರವು ಒದಗಿಸಿದ ಬ್ಯಾಕ್-ಟು-ಬ್ಯಾಕ್ ಸ್ಪರ್ಧೆಯ ಬೆಂಬಲವು ವಹಿಸಿದ ಪರಿವರ್ತನಾತ್ಮಕ ಪಾತ್ರದ ಬಗ್ಗೆ ಕ್ರೀಡಾಪಟುಗಳ ಪ್ರತಿಕ್ರಿಯೆಯನ್ನು ಗುರುತಿಸಿದರು. “ವಿಶ್ವ ಆಟಗಾರರು ಈಗ ಈ ಬಾಕ್ಸರ್ಗಳಿಗೆ ಹೆದರಲು ಪ್ರಾರಂಭಿಸಿದ್ದಾರೆ” ಎಂದು ಶ್ರೀ ಮೋದಿ ಹೇಳಿದರು.
ಕ್ರೀಡಾ ಉತ್ತೇಜನದ ಹಿಂದಿನ ಪ್ರಮುಖ ತತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಖೇಲೋ ಇಂಡಿಯಾ ಉಪಕ್ರಮದ ಘನತೆಯನ್ನು ವಿಸ್ತರಿಸುವ ರೀತಿಯಲ್ಲಿ ಕ್ರೀಡಾಪಟುಗಳು ಯುವ ವಿದ್ಯಾರ್ಥಿಗಳಂತೆ ವಿನಮ್ರ ಮನೋಭಾವವನ್ನು ಕಾಪಾಡಿಕೊಳ್ಳುವುದನ್ನು ಮುಂದುವರಿಸಬೇಕು ಎಂದು ಹೇಳಿದರು. ನಿಜವಾದ ರಾಷ್ಟ್ರೀಯ ಕ್ರೀಡಾ ಯಶಸ್ಸು ಕೇವಲ ಭೌತಿಕ ಮೂಲಸೌಕರ್ಯದ ಮೇಲೆ ಅವಲಂಬಿತವಾಗಿಲ್ಲ, ಬದಲು ರಾಷ್ಟ್ರದಾದ್ಯಂತ ಸಮಗ್ರ ಕ್ರೀಡಾ ಸಂಸ್ಕೃತಿಯನ್ನು ನಿರ್ಮಿಸುವುದರ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದರು. “ಕ್ರೀಡಾ ಮೂಲಸೌಕರ್ಯವು ಒಂದು ಸಂಗತಿಯಷ್ಟೇ, ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ನಿರ್ಮಿಸಿದಾಗ ದೇಶವು ಪದಕಗಳನ್ನು ಗೆಲ್ಲುತ್ತದೆ” ಎಂದು ಶ್ರೀ ಮೋದಿ ಹೇಳಿದರು.
ಕಾರ್ಗಿಲ್ ವಿಜಯ್ ದಿವಸ್ ದಂದು ಪಾಕಿಸ್ತಾನದ ಎದುರಾಳಿಯನ್ನು 5-0 ಗೋಲುಗಳಿಂದ ಸೋಲಿಸಿದ ಮತ್ತು ತಮ್ಮ ವಿಜಯವನ್ನು ಭಾರತೀಯ ಸೇನೆಯ ವೀರರಿಗೆ ಅರ್ಪಿಸಿದ ಭಾರತೀಯ ಸೇನಾ ಕ್ರೀಡಾಪಟುವಿನ ದೇಶಭಕ್ತಿಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು, ಇಂತಹ ಆಳವಾದ ರಾಷ್ಟ್ರೀಯ ಹೆಮ್ಮೆಯು ಅಥ್ಲೆಟಿಕ್ ವಿಜಯಗಳಿಗೆ ಅಸಾಧಾರಣ ಹೊಳಪನ್ನು ನೀಡುತ್ತದೆ ಎಂದು ಹೇಳಿದರು. ಅವರು ತಮ್ಮ ಸೇನಾ ತರಬೇತುದಾರ ನರೇಂದ್ರ ರಾಣಾ ಮತ್ತು ತಮ್ಮ “ನರೇಂದ್ರ” ಎಂಬ ಹೆಸರಿನ ಬಗ್ಗೆ ಹಾಸ್ಯಮಯ ಎಳೆಯನ್ನು ವಿವರಿಸುವ ಕ್ರೀಡಾಪಟುವಿನೊಂದಿಗೆ ಲಘಪ್ರಸಂಗದ ಕ್ಷಣಗಳನ್ನು ಹಂಚಿಕೊಂಡರು. “ನೀವು ಕೇವಲ ಪದಕಗಳ ಸಂಖ್ಯೆಯನ್ನು ಹೆಚ್ಚಿಸಿದ್ದು ಮಾತ್ರವಲ್ಲ; ನೀವು ಒಂದು ಪೀಳಿಗೆಯನ್ನು ಸಿದ್ಧಪಡಿಸಿದ್ದೀರಿ” ಎಂದು ಶ್ರೀ ಮೋದಿ ಹೇಳಿದರು.
ತಮಗೆ ನಿರ್ಣಾಯಕ ತರಬೇತಿ ಸೌಲಭ್ಯಗಳನ್ನು ಒದಗಿಸಿದ್ದಕ್ಕಾಗಿ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಕ್ರೀಡಾಪಟುವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು, ಇದು ಸ್ಥಳೀಯ ಕ್ರೀಡಾ ಕೇಂದ್ರಗಳಿಂದ ಅಂತರರಾಷ್ಟ್ರೀಯ ಪೋಡಿಯಂ ಫಿನಿಶ್ ಗೆ ಪರಿವರ್ತನೆಯಾಗಲು ಅನುವು ಮಾಡಿಕೊಟ್ಟಿತು. “ಇದು ನನಗೆ ಬಹಳ ಗೌರವದ ವಿಷಯವಾಗಿದೆ. ನೀವು ಕಠಿಣ ಪರಿಶ್ರಮ ಮಾಡಿದ್ದೀರಿ ಮತ್ತು ನನ್ನನ್ನು ನೆನಪಿಸಿಕೊಂಡಿದ್ದೀರಿ ಮತ್ತು ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ” ಎಂದು ಶ್ರೀ ಮೋದಿ ಹೇಳಿದರು.
ವಾರಣಾಸಿ ಮತ್ತು ಭೋಪಾಲ್ ಸೇರಿದಂತೆ ವಿವಿಧ ಪ್ರಾದೇಶಿಕ ಕೇಂದ್ರಗಳಲ್ಲಿ ನವೀಕರಿಸಿದ ಆಧುನಿಕ ಕ್ರೀಡಾ ಮೂಲಸೌಕರ್ಯಗಳ ಬಗ್ಗೆ ಪ್ರಧಾನಮಂತ್ರಿ ವಿಚಾರಿಸಿದರು, ಅಲ್ಲಿ ಕ್ರೀಡಾಪಟುಗಳು ತರಬೇತಿ ಮತ್ತು ಉಜ್ಜಯಿನಿಯ ಕಾಶಿ ವಿಶ್ವನಾಥ ಮತ್ತು ಮಹಾಕಾಲೇಶ್ವರದಂತಹ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. 2018 ರಲ್ಲಿ ಪ್ರಾರಂಭವಾದಾಗಿನಿಂದ ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಖೇಲೋ ಇಂಡಿಯಾ ಚೌಕಟ್ಟು ಒದಗಿಸಿದ ನಿರಂತರ ಬೆಂಬಲವನ್ನು ಅವರು ಶ್ಲಾಘಿಸಿದರು, ಇದು ಯುವ ಪ್ರತಿಭೆಗಳು ಗಣ್ಯ ಸ್ಪರ್ಧಾತ್ಮಕ ಮಟ್ಟಕ್ಕೆ ಸರಾಗವಾಗಿ ಪರಿವರ್ತನೆಗೊಳ್ಳಲು ಸಹಾಯ ಮಾಡಿದೆ. “ಭವಿಷ್ಯದಲ್ಲಿಯೂ ನೀವು ವಿಜಯಶಾಲಿಯಾಗುತ್ತೀರಿ ಮತ್ತು ಮತ್ತೊಮ್ಮೆ ನಾವು ಇಲ್ಲಿಯೇ ಭೇಟಿಯಾಗುತ್ತೇವೆ” ಎಂದು ಶ್ರೀ ಮೋದಿ ಹೇಳಿದರು.
ಸಂವಾದದ ಸಮಯದಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿದ ಬಹು ಕಾಲದ ಪದಕ ವಿಜೇತೆಗೆ ಪ್ರಧಾನಮಂತ್ರಿಯವರು ತಮ್ಮ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರಲ್ಲದೆ ಆಶೀರ್ವಾದಗಳನ್ನು ನೀಡಿದರು, ಈ ಸಂದರ್ಭದಲ್ಲಿ ಅವರು ವೈಯಕ್ತಿಕವಾಗಿ ಸಿಹಿತಿಂಡಿಗಳನ್ನು ನೀಡಿದರು ಮತ್ತು ಎಲ್ಲಾ ಕ್ರೀಡಾಪಟುಗಳೂ ಸಕಾರಾತ್ಮಕ ದೃಷ್ಟಿಕೋನದಿಂದ ತಮ್ಮ ಗೆಲುವಿನ ವೇಗವನ್ನು ಕಾಪಾಡಿಕೊಳ್ಳಲು ಪ್ರೋತ್ಸಾಹಿಸಿದರು. ಅವರು ಮುಗುಳ್ನಕ್ಕು ಸತತ ಮೂರನೇ ಪದಕ ಗೆದ್ದ ತಂಡಕ್ಕೆ ಆಶೀರ್ವದಿಸಿದರು. “ಯಾರು ಆಡುತ್ತಾರೋ ಅವರು ಅರಳುತ್ತಾರೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
*****