Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೃಷಿ ಕ್ಷೇತ್ರ ಮತ್ತು ಪೂರಕ ವಲಯದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಪೋಲ್ಯಾಂಡ್ ನಡುವೆ ಒಪ್ಪಂದಕ್ಕೆ ಅಂಕಿತ ಹಾಕಲು ಸಚಿವ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೃಷಿ ಕ್ಷೇತ್ರ ಮತ್ತು ಪೂರಕ ವಲಯದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಪೋಲ್ಯಾಂಡ್ ನಡುವೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಈ ಒಪ್ಪಂದವು, ಪ್ರಸಕ್ತ ಕೃಷಿ ಸನ್ನಿವೇಶ, ಬೆಳೆಗಳ ಆರೋಗ್ಯದ ಸ್ಥಿತಿ, ಅಪಾಯಕಾರಿ ಜೀವಿಗಳಿಂದ ಎದುರಾಗುವ ಅಪಾಯ ಮತ್ತು ಪ್ರಾಣಿಗಳ ಸೋಂಕಿನ ಕಾಯಿಲೆಗಳಿಂದ ಎದುರಾಗುವ ಅಪಾಯ ಕುರಿತ ಮಾಹಿತಿಯ ವಿನಿಮಯ ಸೇರಿದಂತೆ ಕೃಷಿ ಮತ್ತು ಪೂರಕ ವಲಯದ ವಿವಿಧ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಕೃಷಿ ಮತ್ತು ಕೃಷಿ -ಆಹಾರ ಸಂಸ್ಕರಣೆ ಕುರಿತ ಮೇಳಗಳು, ವಸ್ತುಪ್ರದರ್ಶನ, ವಿಚಾರ ಸಂಕಿರಣ ಮತ್ತು ಸಮಾವೇಶಗಳಲ್ಲಿ ಪಾಲ್ಗೊಳ್ಳುವುದು; ಒಪ್ಪಂದ ಮಾಡಿಕೊಂಡ ಪಕ್ಷಕಾರರ ರಾಷ್ಟ್ರಗಳ ನಡುವೆ ಕೃಷಿ ಆಹಾರ ವ್ಯಾಪಾರ ಅಥವಾ ಬೆಂಬಲದ ಉಪಕ್ರಮ ಸೇರಿದಂತೆ ಜಂಟಿ ಆರ್ಥಿಕ ಪಕ್ರಮಗಳ ಅಭಿವೃದ್ಧಿಯನ್ನೂ ಇದು ಒಳಗೊಂಡಿರುತ್ತದೆ.

ಎರಡೂ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಕಾರ್ಯ ಪಡೆ (ಜೆ.ಡಬ್ಲ್ಯು.ಜಿ.) ಸ್ಥಾಪನೆಗೂ ಈ ಒಪ್ಪಂದ ಅವಕಾಶ ನೀಡುತ್ತದೆ. ಈ ಜೆಡಬ್ಲ್ಯುಜಿಯು ಒಪ್ಪಂದದ ಜಾರಿಯ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರವನ್ನೂ ಒದಗಿಸುತ್ತದೆ ಮತ್ತು ಸಹಕಾರದ ಯೋಜನೆಗಳನ್ನು ರೂಪಿಸುತ್ತದೆ.

***