Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್ ನ ಬನಸ್ಕಾಂತಜಿಲ್ಲೆಯಲ್ಲಿ ರೈತರನ್ನುದ್ದೇಶಿಸಿ ಪ್ರಧಾನಿ ಭಾಷಣ, ಅಮೂಲ್ ಚೀಸ್ ಘಟಕ ಉದ್ಘಾಟನೆ

ಗುಜರಾತ್ ನ ಬನಸ್ಕಾಂತಜಿಲ್ಲೆಯಲ್ಲಿ ರೈತರನ್ನುದ್ದೇಶಿಸಿ ಪ್ರಧಾನಿ ಭಾಷಣ, ಅಮೂಲ್ ಚೀಸ್ ಘಟಕ ಉದ್ಘಾಟನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ಗುಜರಾತ್ ನ ಬನಸ್ಕಾಂತ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಬನಸ್ ಡೈರಿ) ದೀಸಾದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮವು ಬನಸ್ ಡೈರಿಯ ಸುವರ್ಣ ಮಹೋತ್ಸವ ವರ್ಷಾಚರಣೆಯ ಉದ್ಘಾಟನಾ ಸಮಾರಂಭವೂ ಆಗಿತ್ತು.

ಈ ಸಂದರ್ಭದಲ್ಲಿ ಪಾಲನ್ಪುರದಲ್ಲಿ ಚೀಸ್ ಘಟಕ ಮತ್ತು ಹಾಲೊಡಕು ಒಣಗಿಸುವ ಘಟಕ ಉದ್ಘಾಟಿಸಲು ಪ್ರಧಾನಮಂತ್ರಿಯವರು ರಿಮೋಟ್ ಕಂಟ್ರೋಲ್ ನೆರವಿನಿಂದ ಫಲಕದ ಅನಾವರಣ ಮಾಡಿದರು.

ಬೃಹತ್ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಉತ್ತರ ಗುಜರಾತ್ ನ ರೈತರು ತಾವೆಷ್ಟು ಸಮರ್ಥರು ಎಂಬುದನ್ನು ಜಗತ್ತಿಗೇ ತೋರಿಸಿದ್ದಾರೆ ಎಂದರು.

ಈ ವಲಯದಲ್ಲಿ ಹನಿ ನೀರಾವರಿ ಹೇಗೆ ರೈತರಿಗೆ ನೆರವಾಗಿದೆ ಎಂಬುದನ್ನು ಪ್ರಧಾನಿ ಉಲ್ಲೇಖಿಸಿದರು. ಇಲ್ಲಿನ ರೈತರು ಹೈನುಗಾರಿಕೆ ಮತ್ತು ಪಶು ಸಂಗೋಪನೆಯತ್ತಲೂ ತಿರುಗಿದ್ದಾರೆ, ಇದು ರೈತರಿಗೆ ಲಾಭದಾಯಕವಾಗಿದೆ ಎಂದೂ ಅವರು ತಿಳಿಸಿದರು. ಶ್ವೇತ ಕ್ರಾಂತಿಯ ಜೊತೆಗೆ ಸ್ವೀಟ್ ಕ್ರಾಂತಿ (ಸಿಹಿಯ ಕ್ರಾಂತಿ)ಯೂ ನಡೆಯುತ್ತಿದೆ. ಈಗ ಜನರಿಗೆ ಜೇನಿನ ಉತ್ಪನ್ನಗಳ ತರಬೇಟಿಯನ್ನೂ ನೀಡಲಾಗುತ್ತಿದೆ ಎಂದರು.

ಹೆಚ್ಚಿನ ಮೌಲ್ಯದ ಹಳೆ ನೋಟುಗಳ ಅಮಾನ್ಯದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಮೋದಿ, ಸರ್ಕಾರ ಭಯೋತ್ಪಾದಕರ ಕರವನ್ನು ಮತ್ತು ಖೋಟಾ ನೋಟು ಜಾಲ ಕೃಶಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಬಡ ಜನರ ಕಲ್ಯಾಣಕ್ಕಾಗಿ ಅವಿಶ್ರಾಂತವಾಗಿ ಶ್ರಮಿಸುತ್ತಿದೆ ಎಂದು ಮೋದಿ ಹೇಳಿದರು. ಇ ಬ್ಯಾಂಕಿಂಗ್ ಮತ್ತು ಇ ವ್ಯಾಲೆಟ್ ಬಳಕೆಗೆ ಅವರು ಜನರನ್ನು ಉತ್ತೇಜಿಸಿದರು. ಭಾರತ ಪ್ರಗತಿ ಬಯಸುತ್ತದೆ ಮತ್ತು ಅದಕ್ಕಾಗಿ ಭ್ರಷ್ಟಾಚಾರ ಮತ್ತು ಕಪ್ಪುಹಣದ ಪಿಡುಗು ಕೊನೆಗಾಣಬೇಕು ಎಂದು ಹೇಳಿದರು.

***

AKT/AK