ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೆನಡಾದ ಪ್ರಧಾನಮಂತ್ರಿ ಮಾರ್ಕ್ ಕಾರ್ನಿ ಅವರು 2026ರ ಜೂನ್ 16 ರಂದು ಫ್ರಾನ್ಸ್ನ ಎವಿಯನ್ನಲ್ಲಿ ನಡೆದ ಜಿ7 ಶೃಂಗಸಭೆಯ ನೇಪಥ್ಯದಲ್ಲಿ ಭೇಟಿಯಾದರು.
ಭಾರತ-ಕೆನಡಾ ಸಂಬಂಧಗಳಲ್ಲಿನ ಸಕಾರಾತ್ಮಕ ವೇಗವನ್ನು ಇಬ್ಬರೂ ಪ್ರಧಾನಮಂತ್ರಿಗಳು ಸ್ವಾಗತಿಸಿದರು ಮತ್ತು ಮಾರ್ಚ್ 2026ರಲ್ಲಿ ಪ್ರಧಾನಮಂತ್ರಿ ಕಾರ್ನಿ ಅವರ ಭಾರತಕ್ಕೆ ಯಶಸ್ವಿ ಭೇಟಿಯ ನಂತರ ಸಾಧಿಸಿದ ಪ್ರಗತಿಯ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸಿದರು.
ಮುಂದುವರೆಯುವ ಕಾರ್ಯತಂತ್ರದ ಪಾಲುದಾರಿಕೆಯನ್ನು ನಿರ್ಮಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಉಭಯ ನಾಯಕರು, ಭಾರತ ಮತ್ತು ಕೆನಡಾದ ಆರ್ಥಿಕತೆಗಳ ನಡುವಿನ ಪೂರಕ ವಾತಾವರಣವನ್ನು ಒತ್ತಿ ಹೇಳಿದರು ಮತ್ತು ಜಾಗತಿಕ ಇಂಧನ ಮತ್ತು ಆಹಾರ ಭದ್ರತೆಯನ್ನು ಬಲಪಡಿಸುವಲ್ಲಿ ಸ್ಥಿತಿಸ್ಥಾಪಕ ಮತ್ತು ವಿಶ್ವಾಸಾರ್ಹ ಪೂರೈಕೆ ಸರಣಿಗಳ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.
ಎಲ್ಎನ್ಜಿ, ಎಲ್ಪಿಜಿ ಮತ್ತು ಮೆಟಲರ್ಜಿಕಲ್ ಕಲ್ಲಿದ್ದಲಿಗೆ ಸಂಬಂಧಿಸಿದ ವಾಣಿಜ್ಯ ವ್ಯವಸ್ಥೆಗಳಲ್ಲಿನ ಬೆಳವಣಿಗೆಗಳು ಸೇರಿದಂತೆ ದ್ವಿಪಕ್ಷೀಯ ಆರ್ಥಿಕ ಸಹಕಾರದಲ್ಲಿನ ಪ್ರಗತಿಯನ್ನುಇಬ್ಬರೂ ನಾಯಕರು ಪರಿಶೀಲಿಸಿದರು.
ಉಭಯ ದೇಶಗಳ ನಡುವೆ ಉನ್ನತ ಮಟ್ಟದ ಭೇಟಿಗಳ ವಿನಿಮಯದಲ್ಲಿ ನಡೆಯುತ್ತಿರುವ ವೇಗದ ಚಟುವಟಿಕೆಗಳನ್ನು ಪ್ರಧಾನಮಂತ್ರಿಗಳು ಸ್ವಾಗತಿಸಿದರು. ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರ ಇತ್ತೀಚಿನ ಕೆನಡಾ ಭೇಟಿಯನ್ನು ಅವರು ಉಲ್ಲೇಖಿಸಿದರು ಮತ್ತು 2026ರ ನಂತರ ಅಂತಾರಾಷ್ಟ್ರೀಯ ವ್ಯಾಪಾರ ಸಚಿವರ ನೇತೃತ್ವದಲ್ಲಿ ಭಾರತದಲ್ಲಿ ನಡೆಯಲಿರುವ ಕೆನಡಾದ ವ್ಯಾಪಾರ ಕಾರ್ಯಾಚರಣೆಯನ್ನು ಎದುರು ನೋಡಲಾಗುತ್ತಿದೆ ಎಂದರು.
ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ಕುರಿತ ಮಾತುಕತೆಗಳಲ್ಲಿನ ಪ್ರಗತಿಯ ಬಗ್ಗೆ ಎರಡೂ ದೇಶದ ನಾಯಕರು ತೃಪ್ತಿ ವ್ಯಕ್ತಪಡಿಸಿದರು ಮತ್ತು 2026ರಲ್ಲಿ ಮಾತುಕತೆಗಳನ್ನು ಮುಕ್ತಾಯಗೊಳಿಸುವ ತಮ್ಮ ಸಮಾನ ಉದ್ದೇಶವನ್ನು ಪುನರುಚ್ಚರಿಸಿದರು.
ಜಂಟಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯ ಇತ್ತೀಚಿನ ಸಭೆಗಳು ಮತ್ತು ಕಾನ್ಸುಲರ್ ಸಂವಾದ ಸೇರಿದಂತೆ ಎರಡೂ ಸರ್ಕಾರಗಳ ನಡುವಿನ ಸಾಂಸ್ಥಿಕ ಒಳಗೊಳ್ಳುವಿಕೆ ಬಲಪಡಿಸುವುದನ್ನು ಪ್ರಧಾನಮಂತ್ರಿಗಳು ಸ್ವಾಗತಿಸಿದರು. ರಕ್ಷಣೆ, ಹಣಕಾಸು ಮತ್ತು ವಲಸೆ ಕ್ಷೇತ್ರಗಳಲ್ಲಿ ಮುಂಬರುವ ಸಂವಾದಗಳನ್ನು ಸಹ ಅವರು ಎದುರು ನೋಡುತ್ತಿದ್ದರು.
ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಪ್ರಧಾನಮಂತ್ರಿಗಳು ಸಾಮಾನ್ಯ ಭದ್ರತಾ ಮಾಹಿತಿ ಒಪ್ಪಂದ (ಜಿಎಸ್ಒಐಎ) ಕುರಿತು ಮಾತುಕತೆಗಳನ್ನು ಆರಂಭಿಸಲು ಒಪ್ಪಿಕೊಂಡರು. ಕೆನಡಾಕ್ಕೆ ಭಾರತದ ರಾಷ್ಟ್ರೀಯ ರಕ್ಷಣಾ ಕಾಲೇಜಿನ ಭೇಟಿ ಸೇರಿದಂತೆ ರಕ್ಷಣಾ ಸಂಸ್ಥೆಗಳ ನಡುವಿನ ಇತ್ತೀಚಿನ ವಿನಿಮಯಗಳನ್ನು ಸಹ ಅವರು ಸ್ವಾಗತಿಸಿದರು.
ಕೆನಡಾ-ಭಾರತ ಪ್ರತಿಭಾ ಮತ್ತು ನಾವೀನ್ಯತೆ ಕಾರ್ಯತಂತ್ರದ ಅಡಿಯಲ್ಲಿ ಕೌಶಲ್ಯಾಭಿವೃದ್ಧಿ, ನಾವೀನ್ಯತೆ ಪಾಲುದಾರಿಕೆಗಳು ಮತ್ತು ಎರಡೂ ದೇಶಗಳಲ್ಲಿನ ಸಂಸ್ಥೆಗಳ ನಡುವಿನ ಶೈಕ್ಷಣಿಕ ಸಹಕಾರ ಬಲಪಡಿಸುವ ಉಪಕ್ರಮಗಳು ಸೇರಿದಂತೆ ಹಲವು ಕ್ರಮಗಳನ್ನು ಉಭಯ ನಾಯಕರು ಉಲ್ಲೇಖಿಸಿದರು. ಕೆನಡಾವನ್ನು ಹಿಂದೂ ಮಹಾಸಾಗರ ರಿಮ್ ಅಸೋಸಿಯೇಷನ್ (ಐ ಒ ಆರ್ ಎ) ನ ಸಂವಾದ ಪಾಲುದಾರನಾಗಲು ಭಾರತದ ಬೆಂಬಲವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯಕ್ತಪಡಿಸಿದರು.
ಇಬ್ಬರೂ ನಾಯಕರು ಸಂವಾದ, ವಿನಿಮಯ ಮತ್ತು ಸಹಕಾರವನ್ನು ಮತ್ತಷ್ಟು ಬಲಪಡಿಸಲು ವೇದಿಕೆಯಾಗಿ ರೈಸಿನಾ ಅಮೆರಿಕಾಸ್ ಸ್ಥಾಪನೆಯನ್ನು ಘೋಷಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, 2026ರಲ್ಲಿ ಕೆನಡಾಕ್ಕೆ ಭೇಟಿ ನೀಡಲು ಆಹ್ವಾನ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಕಾರ್ನಿ ಅವರಿಗೆ ಧನ್ಯವಾದ ಅರ್ಪಿಸಿದರು. ಭೇಟಿಗಾಗಿ ಪರಸ್ಪರ ಅನುಕೂಲಕರ ದಿನಾಂಕವನ್ನು ನಿಗದಿಪಡಿಸಲು ರಾಜತಾಂತ್ರಿಕ ಮಾರ್ಗಗಳ ಮೂಲಕ ತೊಡಗಿಸಿಕೊಳ್ಳಲು ಎರಡೂ ದೇಶಗಳು ಒಪ್ಪಿಕೊಂಡವು.
*****
It was a delight to meet Prime Minister Carney on the sidelines of the Evian G7 Summit. In less than a year, it is our fourth meeting, indicating our commitment to strong India-Canada ties. We reviewed the full range of relations between our nations, notably the ground covered… pic.twitter.com/lGSURANBfc
— Narendra Modi (@narendramodi) June 16, 2026
We discussed extensive cooperation in the following pillars:
— Narendra Modi (@narendramodi) June 16, 2026
Trade and economy.
Energy.
Technology.
People-to-people ties.
PM @narendramodi and PM @MarkJCarney of Canada met on the sidelines of the @G7 Summit in Evian. The leaders reviewed the progress in India-Canada relations and discussed strengthening cooperation in energy, technology, trade, economic ties and people-to-people exchanges. pic.twitter.com/DGaaFQuasA
— PMO India (@PMOIndia) June 16, 2026