Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಡಾ. ಪೃಥ್ವೀಂದ್ರ ಮುಖರ್ಜಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಡಾ. ಪೃಥ್ವೀಂದ್ರ ಮುಖರ್ಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಡಾ. ಮುಖರ್ಜಿ ಅವರು ಬಹುಮುಖ ವ್ಯಕ್ತಿತ್ವ ಹೊಂದಿದ್ದರು. ಸಂಗೀತ ಮತ್ತು ಕಾವ್ಯದ ಬಗ್ಗೆಯೂ ಒಲವು ಹೊಂದಿದ್ದರು ಎಂದು ಪ್ರಧಾನಮಂತ್ರಿ ಮೋದಿ ಸ್ಮರಿಸಿಕೊಂಡಿದ್ದಾರೆ.

ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:

“ಡಾ. ಪೃಥ್ವೀಂದ್ರ ಮುಖರ್ಜಿ ಅವರು ಬಹುಮುಖ ವ್ಯಕ್ತಿತ್ವ ಹೊಂದಿದ್ದರು, ಬೌದ್ಧಿಕ ಜಗತ್ತಿನಲ್ಲಿ ಬಲವಾದ ಛಾಪು ಮೂಡಿಸಿದ್ದರು. ಅವರು ಸಂಗೀತ ಮತ್ತು ಕಾವ್ಯದ ಬಗ್ಗೆಯೂ ಒಲವು ಹೊಂದಿದ್ದರು. ಅವರ ಕೃತಿಗಳು ಮತ್ತು ಸಂಯೋಜನೆಗಳು ಮುಂಬರುವ ವರ್ಷಗಳಲ್ಲಿ ಮೆಚ್ಚುಗೆ ಪಡೆಯುತ್ತಲೇ ಇರುತ್ತವೆ. ಭಾರತದ ಇತಿಹಾಸವನ್ನು, ವಿಶೇಷವಾಗಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮತ್ತು ಭಾರತ-ಫ್ರಾನ್ಸ್ ಸಂಬಂಧಗಳನ್ನು ಗಾಢವಾಗಿಸಲು ಅವರು ಮಾಡಿದ ಪ್ರಯತ್ನಗಳು ಅಷ್ಟೇ ಗಮನಾರ್ಹವಾಗಿವೆ. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ.”

****