ಪಿಎಂಇಂಡಿಯಾ
ಕೈಗಾರಿಕಾ ಬೆಳವಣಿಗೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 33,660 ಕೋಟಿ ರೂ. ಹಂಚಿಕೆಯೊಂದಿಗೆ ದೇಶಾದ್ಯಂತ 100 ಪ್ಲಗ್-ಅಂಡ್-ಪ್ಲೇ ಕೈಗಾರಿಕಾ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸಲು ಭಾರತ ಔದ್ಯೋಗಿಕ ವಿಕಾಸ ಯೋಜನೆ (ಭಾವ್ಯ)ಗೆ ಅನುಮೋದನೆ ನೀಡಿದೆ.
ಈ ಯೋಜನೆಯು ವಿಶ್ವ ದರ್ಜೆಯ ಕೈಗಾರಿಕಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು, ಉತ್ಪಾದನಾ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದು ಮತ್ತು ಭಾರತದ ಬೆಳವಣಿಗೆಯ ಯಶೋಗಾಥೆಯನ್ನು ಮುನ್ನಡೆಸುವ ಗುರಿ ಹೊಂದಿದೆ.
ವಿಕಸಿತ ಭಾರತಕ್ಕೆ ಕೈಗಾರಿಕಾ ಬುನಾದಿ ಹಾಕುವುದು:
ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (ಎನ್ ಐಸಿಡಿಪಿ) ಚೌಕಟ್ಟಿನಡಿಯಲ್ಲಿ ಅಭಿವೃದ್ಧಿಪಡಿಸಲಾದ ಕೈಗಾರಿಕಾ ಸ್ಮಾರ್ಟ್ ಸಿಟಿಗಳ ಯಶಸ್ಸಿನ ಮೇಲೆ, ರಾಜ್ಯಗಳು ಮತ್ತು ಖಾಸಗಿ ವಲಯದ ಪಾಲುದಾರರೊಂದಿಗೆ ಭಾವ್ಯ (BHAVYA ) ಅನ್ನು ಜಾರಿಗೊಳಿಸಲಾಗುತ್ತದೆ.
ಅನುಮೋದನೆಗಳಿಂದ ಕಾರ್ಯಾಚರಣೆಗಳವರೆಗೆ: ವ್ಯವಹಾರ ಸುಲಭಗೊಳಿಸಯವ ಹೊಸ ಯುಗ
ರಾಜ್ಯಗಳ ನೇತೃತ್ವದ ಸುವ್ಯವಸ್ಥಿತ ಅನುಮೋದನೆಗಳು, ಪರಿಣಾಮಕಾರಿ ಏಕ-ಗವಾಕ್ಷಿ ವ್ಯವಸ್ಥೆಗಳು ಮತ್ತು ಹೂಡಿಕೆದಾರ ಸ್ನೇಹಿ ಸುಧಾರಣೆಗಳೊಂದಿಗೆ ಭಾವ್ಯದ ಕೇಂದ್ರ ಭಾಗದಲ್ಲಿ ಅನಿಯಂತ್ರಣ ಮತ್ತು ವ್ಯವಹಾರ ಮಾಡುವ ಸುಲಭ ವಾತಾವರಣ ನಿರ್ಮಿಸಲು ಬಲವಾದ ಒತ್ತಡವಿದೆ.
ಈ ಯೋಜನೆಯು ಪ್ಲಗ್-ಅಂಡ್-ಪ್ಲೇ ಕೈಗಾರಿಕಾ ಪರಿಸರ ವ್ಯವಸ್ಥೆಗಳನ್ನು ಒದಗಿಸುತ್ತದೆ, ಇದು ಕೈಗಾರಿಕೆಗಳು ಉದ್ದೇಶದಿಂದ ಉತ್ಪಾದನೆಗೆ ವೇಗ ಮತ್ತು ಖಚಿತತೆಯೊಂದಿಗೆ ಸಾಗಲು ಅನುವು ಮಾಡಿಕೊಡುತ್ತದೆ. ಪೂರ್ವ-ಅನುಮೋದಿತ ಭೂಮಿ, ಸಿದ್ಧ ಮೂಲಸೌಕರ್ಯ ಮತ್ತು ಸಂಯೋಜಿತ ಸೇವೆಗಳೊಂದಿಗೆ ಭಾವ್ಯ ಹೂಡಿಕೆದಾರರಿಗೆ ಅಡೆತಡೆಗಳನ್ನು ಗಮನಾರ್ಹವಾಗಿ ತಗ್ಗಿಸುತ್ತದೆ.
ಈ ಯೋಜನೆಯಡಿಯಲ್ಲಿ 100 ರಿಂದ 1000 ಎಕರೆಗಳವರೆಗಿನ ಕೈಗಾರಿಕಾ ಉದ್ಯಾನವನಗಳನ್ನು ಅಭಿವೃದ್ಧಿಗಾಗಿ ತೆಗೆದುಕೊಳ್ಳಲಾಗುತ್ತದೆ. ಎಕರೆಗೆ ಒಂದು ಕೋಟಿ ರೂ.ಗಳವರೆಗೆ ಹಣಕಾಸಿನ ನೆರವು ನೀಡಲಾಗುವುದು:
ಹೊರಗಿನ ಮೂಲಸೌಕರ್ಯಕ್ಕೆ ಯೋಜನಾ ವೆಚ್ಚದ ಶೇ.25ರವರೆಗೆ ನೆರವನ್ನು ಒದಗಿಸಲಾಗುವುದು, ಇದು ಹಾಲಿ ಇರುವ ಜಾಲಗಳೊಂದಿಗೆ ತಡೆರಹಿತ ಸಂಪರ್ಕ ಮತ್ತು ಸಂಯೋಜನೆಯನ್ನು ಖಾತ್ರಿಪಡಿಸುತ್ತದೆ.
ಯೋಜನೆಯ ಆಯ್ಕೆಯನ್ನು ಚಾಲೆಂಜ್ ಮೋಡ್ ಮೂಲಕ ಕೈಗೊಳ್ಳಲಾಗುವುದು, ಉತ್ತಮ ಗುಣಮಟ್ಟದ, ಸುಧಾರಣೆ-ಆಧಾರಿತ ಮತ್ತು ಹೂಡಿಕೆ-ಸಿದ್ಧ ಪ್ರಸ್ತಾವನೆಗಳನ್ನು ಮಾತ್ರ ಮುಂದಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಖಚಿತಪಡಿಸುತ್ತದೆ.
ಭವಿಷ್ಯಕ್ಕೆ ಸಿದ್ಧವಾದ, ಸುಸ್ಥಿರ ಮತ್ತು ದಕ್ಷ ಕೈಗಾರಿಕಾ ಪಾರ್ಕ್ ಗಳು:
ಕೈಗಾರಿಕಾ ಪಾರ್ಕ್ ಗಳನ್ನು ಭವಿಷ್ಯದ ಮತ್ತು ಸುಸ್ಥಿರ ಪರಿಸರ ವ್ಯವಸ್ಥೆಗಳಾಗಿ ವಿನ್ಯಾಸಗೊಳಿಸಲಾಗುವುದು:
ಈ ಪಾರ್ಕ್ ಗಳು ಕೈಗಾರಿಕಾ ಮೂಲಸೌಕರ್ಯದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತವೆ, ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತವೆ ಅಸಮರ್ಥತೆಯನ್ನು ಕಡಿಮೆ ಮಾಡುತ್ತವೆ ಮತ್ತು ವಲಯಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುತ್ತವೆ.
ಪ್ರದೇಶಗಳಾದ್ಯಂತ ಉದ್ಯೋಗಗಳು, ಹೂಡಿಕೆ ಮತ್ತು ಆರ್ಥಿಕ ಬೆಳವಣಿಗೆಗೆ ಚಾಲನೆ:
ಭಾವ್ಯವು ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೆ ಚಾಲನೆ ನೀಡುವ ನಿರೀಕ್ಷೆಯಿದೆ, ಉತ್ಪಾದನೆ, ಲಾಜಿಸ್ಟಿಕ್ಸ್ ಮತ್ತು ಸೇವೆಗಳಲ್ಲಿ ಗಣನೀಯ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಗಮನಾರ್ಹ ಹೂಡಿಕೆಗಳನ್ನು ವೇಗವರ್ಧಿಸುತ್ತದೆ/
ಈ ಯೋಜನೆಯು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸುತ್ತದೆ, ದೇಶಾದ್ಯಂತ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ರಾಷ್ಟ್ರವ್ಯಾಪಿ ಕೈಗಾರಿಕಾ ಬೆಳವಣಿಗೆಯನ್ನು ವೇಗಗೊಳಿಸುತ್ತದೆ.
ಕ್ಲಸ್ಟರ್ ಆಧಾರಿತ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ ಮತ್ತು ಕೈಗಾರಿಕೆಗಳು, ಪೂರೈಕೆದಾರರು ಮತ್ತು ಸೇವಾ ಪೂರೈಕೆದಾರರ ಸಹ-ಸ್ಥಳವನ್ನು ಸಕ್ರಿಯಗೊಳಿಸುವ ಮೂಲಕ ಭಾವ್ಯವು ದೇಶೀಯ ಪೂರೈಕೆ ಸರಣಿಯನ್ನು ಬಲಪಡಿಸುತ್ತದೆ, ಪ್ರಾದೇಶಿಕ ಕೈಗಾರಿಕೀಕರಣವನ್ನು ಉತ್ತೇಜಿಸುತ್ತದೆ ಮತ್ತು ಲಕ್ಷಾಂತರ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.
ಈ ಯೋಜನೆಯು ಪ್ರಯೋಜನಗಳನ್ನು ಒದಗಿಸುತ್ತದೆ:
ಭಾವ್ಯದ ಅನುಮೋದನೆಯು ಆತ್ಮನಿರ್ಭರ ಭಾರತದ ಕಡೆಗೆ ಭಾರತದ ಪಯಣದಲ್ಲಿ ಒಂದು ಪರಿವರ್ತನೆಯ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ ಹಾಗೂ ದೇಶದ ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ. ರಫ್ತುಗಳನ್ನು ಹೆಚ್ಚಿಸುತ್ತದೆ ಮತ್ತು ಸ್ಥಿತಿಸ್ಥಾಪಕ, ಅಂತರ್ಗತ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಆರ್ಥಿಕತೆಗೆ ಬುನಾದಿ ಹಾಕುತ್ತದೆ.
ಎನ್ ಐ ಸಿ ಡಿ ಸಿ ಕುರಿತು:
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ)ಯಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ ಲಿಮಿಟೆಡ್ (ಎನ್ ಐ ಸಿ ಡಿ ಸಿ), ಉತ್ಪಾದನಾ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು, ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಉದ್ಯೋಗ ಸೃಷ್ಟಿಸಲು ವಿಶ್ವ ದರ್ಜೆಯ ಗ್ರೀನ್ ಫೀಲ್ಡ್ ಕೈಗಾರಿಕಾ ಸ್ಮಾರ್ಟ್ ನಗರಗಳ ಅಭಿವೃದ್ಧಿಯನ್ನು ಮುನ್ನಡೆಸುತ್ತಿದೆ. ಎನ್ ಐಸಿಡಿಸಿ ಸದ್ಯ 13 ರಾಜ್ಯಗಳಲ್ಲಿ 20 ಯೋಜನೆಗಳನ್ನು ಜಾರಿಗೊಳಿಸುತ್ತಿದೆ.
ಎನ್ ಐಸಿಡಿಸಿ ನೇತೃತ್ವದ ಉಪಕ್ರಮಗಳು ಪ್ಲಗ್-ಅಂಡ್-ಪ್ಲೇ ಕೈಗಾರಿಕಾ ಪಾರ್ಕ್ ಗಳ ಪರಿಕಲ್ಪನೆಯ ಮೇಲೆ ನಿರ್ಮಿಸಲ್ಪಟ್ಟಿವೆ – ಭೂಮಿ, ಸವಲತ್ತುಗಳು, ಅನುಮೋದನೆಗಳು ಮತ್ತು ಮೂಲಸೌಕರ್ಯಗಳನ್ನು ಪೂರ್ವ-ಅಭಿವೃದ್ಧಿಪಡಿಸಿದ ಬಳಕೆಗೆ ಸಿದ್ಧ ಪೂರಕ ವ್ಯವಸ್ಥೆಗಳು, ಭೂಸ್ವಾಧೀನ ಅಥವಾ ಮೂಲಸೌಕರ್ಯಕ್ಕೆ ಸಂಬಂಧಿಸಿದ ವಿಳಂಬವಿಲ್ಲದೆ ಕೈಗಾರಿಕೆಗಳು ಕಾರ್ಯಾಚರಣೆಯನ್ನು ತ್ವರಿತವಾಗಿ ಆರಂಭಿಸಲು ಅನುವು ಮಾಡಿಕೊಡುತ್ತದೆ.
*****