Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಹಾನಾಯಕ ಉತ್ತಮ್ ಕುಮಾರ್ ಅವರ ಜನ್ಮ ಶತಮಾನೋತ್ಸವದಂದು ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಂತಕಥೆಯ ನಟ ಮಹಾನಾಯಕ್ ಉತ್ತಮ್ ಕುಮಾರ್ ಅವರ ಜನ್ಮ ಶತಮಾನೋತ್ಸವದಂದು ಅವರಿಗೆ ಗೌರವ ಸಲ್ಲಿಸಿದರು. ಅವರ ಕಾಲಾತೀತ ಕಲಾಪ್ರದರ್ಶನಗಳು ತಲೆಮಾರುಗಳಿಂದ ಜನರೊಂದಿಗೆ ಸಂಪರ್ಕದಲ್ಲಿವೆ ಎಂದು ಪ್ರಧಾನಮಂತ್ರಿಯವರು ಬಣ್ಣಿಸಿದರು. ಇತ್ತೀಚಿನ ಮನ್ ಕಿ ಬಾತ್ ಪ್ರಸಾರದಲ್ಲಿ ಅವರು ದಿಗ್ಗಜ ನಟನ ಬಗ್ಗೆ ತಮ್ಮ ಹೇಳಿಕೆಗಳನ್ನು ಹಂಚಿಕೊಂಡರು. 

ಪ್ರಧಾನಮಂತ್ರಿಯವರು  ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ:

“ಮಹಾನಾಯಕ್ ಉತ್ತಮ್ ಕುಮಾರ್… ಒಬ್ಬ ದಂತಕಥೆಯಾಗಿದ್ದಾರೆ, ಅವರ ಕಾಲಾತೀತ ಪ್ರದರ್ಶನಗಳು ಪೀಳಿಗೆಯ ಜನರೊಂದಿಗೆ ಸದಾ ಸಂಪರ್ಕ ಸಾಧಿಸುತ್ತವೆ.  

ಅವರಿಗೆ ಅವರ ಜನ್ಮ ಶತಮಾನೋತ್ಸವದ ಪ್ರಣಾಮಗಳು.  

ಕಳೆದ ಭಾನುವಾರ #MannKiBaat ಕಾರ್ಯಕ್ರಮದಲ್ಲಿ ನಾನು ಅವರ ಬಗ್ಗೆ ಮಾತನಾಡಿದ್ದನ್ನು ಸಹ ಈ ಸಂದರ್ಭದಲ್ಲಿ ಹಂಚಿಕೊಳ್ಳುತ್ತಿದ್ದೇನೆ.”

মহানায়ক উত্তম কুমার… এক কিংবদন্তি যাঁর কালজয়ী পরিবেশনা প্রজন্মান্তরের মানুষের সঙ্গে সংযোগ স্থাপন করে চলেছে।  

তাঁর জন্মশতবার্ষিকীতে শ্রদ্ধাঞ্জলি।  

গত রবিবার #MannKiBaat অনুষ্ঠানে আমি তাঁর সম্পর্কে যা বলেছিলাম, তাও শেয়ার করছি।”

 

*****