ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಗವಾನ್ ಮಹಾವೀರ ಜಯಂತಿಯ ಶುಭ ಸಂದರ್ಭದಲ್ಲಿ ಗುಜರಾತ್ನ ಗಾಂಧಿನಗರದ ಕೋಬಾ ತೀರ್ಥದಲ್ಲಿ ಪಾರಂಪರಿಕ ಜೈನ ವಸ್ತುಸಂಗ್ರಹಾಲಯವಾದ ʻಸಾಮ್ರಾಟ್ ಸಂಪ್ರತಿ ಮ್ಯೂಸಿಯಂʼ ಅನ್ನು ಉದ್ಘಾಟಿಸಿದರು. “ಕೋಬಾ ತೀರ್ಥದಲ್ಲಿ ಆಧ್ಯಾತ್ಮಿಕ ಶಾಂತಿ ಆಳವಾಗಿ ಬೇರೂರಿದೆ. ಅನೇಕ ಜೈನ ಮುನಿಗಳು ಮತ್ತು ಸಂತರು ತಮ್ಮ ತಪ್ಪಸ್ಸಿನ ಅಭಿವ್ಯಕ್ತಿಯನ್ನು ಕಂಡುಕೊಂಡ ಈ ಸ್ಥಳದಲ್ಲಿ ಸೃಷ್ಟಿ ಮತ್ತು ಸೇವೆ ಸ್ವಾಭಾವಿಕವಾಗಿ ಅರಳುತ್ತದೆ,” ಎಂದು ಶ್ರೀ ಮೋದಿ ಹೇಳಿದರು.
ಕೋಬಾ ತೀರ್ಥದ ಶಾಶ್ವತ ಸಂಪ್ರದಾಯಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ಪವಿತ್ರ ಸ್ಥಳದಲ್ಲಿ ವರ್ಷಗಳಿಂದ ಅಧ್ಯಯನ, ಸಾಧನೆ ಮತ್ತು ಸ್ವಯಂ ಶಿಸ್ತಿನ ಸಂಪ್ರದಾಯಗಳು ಪ್ರವರ್ಧಮಾನಕ್ಕೆ ಬರುತ್ತಿವೆ ಎಂದರು. ಮೌಲ್ಯಗಳ ಸಂರಕ್ಷಣೆ, ಸಂಸ್ಕಾರಗಳ ಪೋಷಣೆ ಮತ್ತು ಜ್ಞಾನದ ಪೋಷಣೆ ಮೂಲಕ ಭಾರತೀಯ ನಾಗರಿಕತೆಯ ಅಡಿಪಾಯವನ್ನು ರೂಪಿಸುವ ʻತ್ರಿವೇಣಿʼ ಸಂಗಮವಾಗಿದೆ ಎಂದು ಅವರು ಹೇಳಿದರು. “ಈ ʻತ್ರಿವೇಣಿʼಯನ್ನು ಅಡೆತಡೆಯಿಲ್ಲದೆ ಹರಿಯುವಂತೆ ಮಾಡುವುದು ನಮ್ಮೆಲ್ಲರ ಸಮಾನ ಜವಾಬ್ದಾರಿಯಾಗಿದೆ,” ಎಂದು ಶ್ರೀ ಮೋದಿ ದೃಢಪಡಿಸಿದರು.
ಜೈನ ಧರ್ಮದ ಕಾಲಾತೀತ ಜ್ಞಾನ ಮತ್ತು ಭಾರತದ ಶ್ರೀಮಂತ ಪರಂಪರೆಯನ್ನು ಈಗ ʻಜೈನ್ ಹೆರಿಟೇಜ್ ಮ್ಯೂಸಿಯಂʼ ಮೂಲಕ ಮುಂದಿನ ಶತಮಾನಗಳವರೆಗೆ ಸಂರಕ್ಷಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ಸಂತಸ ವ್ಯಕ್ತಪಡಿಸಿದರು. ಮುಂದಿನ ಪೀಳಿಗೆಗೆ ಪ್ರಾಚೀನ ಜ್ಞಾನವನ್ನು ಹೊಸ ಮತ್ತು ಆಧುನಿಕ ರೂಪಗಳಲ್ಲಿ ಪ್ರಸ್ತುತಪಡಿಸಲು ಸಂತರು ಇದನ್ನು ರೂಪಿಸಿದ್ದಾರೆ. “ಇಂದು, ಜೈನ ತತ್ವಶಾಸ್ತ್ರ, ಭಾರತೀಯ ಸಂಸ್ಕೃತಿ ಮತ್ತು ನಮ್ಮ ಪ್ರಾಚೀನ ಪರಂಪರೆಯ ಪವಿತ್ರ ಕೇಂದ್ರವಾದ ʻಸಾಮ್ರಾಟ್ ಸಂಪ್ರತಿ ವಸ್ತುಸಂಗ್ರಹಾಲಯʼದ ರೂಪದಲ್ಲಿ ಆ ಭವ್ಯ ದೃಷ್ಟಿಕೋನವು ಸಾಕಾರಗೊಂಡಿದೆ,” ಎಂದು ಪ್ರಧಾನಿ ಮೋದಿ ಹೇಳಿದರು.
ಈ ಪ್ರಯತ್ನಕ್ಕೆ ಅಪಾರ ಕೊಡುಗೆ ನೀಡಿದ ಎಲ್ಲಾ ಜೈನ ಮುನಿಗಳು, ಸಂತರು ಮತ್ತು ಸಾವಿರಾರು ಶ್ರದ್ಧಾವಂತ ವ್ಯಕ್ತಿಗಳನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು. ಪರಂಪರೆಯ ಸಂರಕ್ಷಣೆಯಲ್ಲಿ ನಾವೀನ್ಯತೆಯ ಮಹತ್ವವನ್ನು ಒತ್ತಿಹೇಳಿದ ಅವರು, ಪ್ರಾಚೀನ ಜ್ಞಾನವನ್ನು ಹೊಸ ರೀತಿಯಲ್ಲಿ ಪ್ರಸ್ತುತಪಡಿಸಿದಾಗ, ಪರಂಪರೆಯು ಶ್ರೀಮಂತವಾಗುತ್ತದೆ. ಜೊತೆಗೆ ಭವಿಷ್ಯದ ಪೀಳಿಗೆಯು ಹೊಸ ಸ್ಫೂರ್ತಿಯನ್ನು ಕಂಡುಕೊಳ್ಳುತ್ತದೆ ಎಂದು ಹೇಳಿದರು. “ಸಾಮ್ರಾಟ್ ಸಂಪ್ರತಿ ವಸ್ತುಸಂಗ್ರಹಾಲಯವು ಭಾರತದ ಕೋಟ್ಯಂತರ ಜನರಿಗೆ ಸೇರಿದ್ದು ಮತ್ತು ನಮ್ಮ ಭವ್ಯ ಗತಕಾಲಕ್ಕೆ ಅದು ಸಾಕ್ಷಿಯಾಗಿದೆ,” ಎಂದು ಅವರು ಹೇಳಿದರು.
ಸಾಮ್ರಾಟ್ ಸಂಪ್ರತಿಯ ಐತಿಹಾಸಿಕ ಮಹತ್ವದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಅನೇಕ ನಾಗರಿಕತೆಗಳು ಶ್ರೇಷ್ಠ ಚಿಂತಕರು ಮತ್ತು ದಾರ್ಶನಿಕರನ್ನು ಸೃಷ್ಟಿಸಿವೆಯಾದರೂ, ಪ್ರಪಂಚದ ಹಲವಾರು ಭಾಗಗಳಲ್ಲಿನ ಆಡಳಿತಗಾರರು ಅಧಿಕಾರದ ಪ್ರಶ್ನೆ ಬಂದಾಗ ಆಗಾಗ್ಗೆ ಆದರ್ಶಗಳನ್ನು ತ್ಯಜಿಸಿದ್ದಾರೆ. ಇದು ಚಿಂತನೆ ಮತ್ತು ಆಡಳಿತದ ನಡುವೆ ಕಂದಕವನ್ನು ಸೃಷ್ಟಿಸಿತು ಎಂದು ಹೇಳಿದರು. ಸಾಮ್ರಾಟ್ ಸಂಪ್ರತಿ ಕೇವಲ ಐತಿಹಾಸಿಕ ರಾಜನಲ್ಲ, ಬದಲಿಗೆ ಭಾರತದ ತತ್ವಶಾಸ್ತ್ರ ಮತ್ತು ಆಚರಣೆಯನ್ನು ಸಂಪರ್ಕಿಸುವ ಜ್ಞಾನಸೇತು ಎಂದು ಅವರು ಬಣ್ಣಿಸಿದರು. “ಭಾರತದಲ್ಲಿ, ಸಾಮ್ರಾಟ್ ಸಂಪ್ರತಿಯಂತಹ ಆಡಳಿತಗಾರರು ಅಧಿಕಾರವನ್ನು ಸೇವೆ ಮತ್ತು ಸಾಧನೆ ಎಂದು ಪರಿಗಣಿಸಿದರು, ಸಿಂಹಾಸನದಿಂದ ಅಹಿಂಸೆಯನ್ನು ಪ್ರತಿಪಾದಿಸಿದರು. ಸತ್ಯ, ಅಸ್ತೇಯ (ಕದಿಯದಿರುವುದು) ಮತ್ತು ಅಪರಿಗ್ರಹವನ್ನು (ವ್ಯಾಮೋಹ ತ್ಯಜಿಸುವುದು) ಅತ್ಯಂತ ನಿರ್ಲಿಪ್ತತೆ ಹಾಗೂ ನಿಸ್ವಾರ್ಥತೆಯಿಂದ ಪ್ರಚಾರ ಮಾಡಿದರು,” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ರಾಷ್ಟ್ರದ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುವ ಏಳು ಗ್ಯಾಲರಿಗಳೊಂದಿಗೆ, ಪ್ರತಿ ಹೆಜ್ಜೆಯೂ ಭಾರತದ ಭವ್ಯತೆಯನ್ನು ಸಾರುವಂತೆ ವಸ್ತುಸಂಗ್ರಹಾಲಯವನ್ನು ಚಿಂತನಶೀಲವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ನವಪಾದ, ಅರಿಹಂತ್, ಸಿದ್ಧ, ಆಚಾರ್ಯ, ಉಪಾಧ್ಯಾಯ, ಸಾಧು ಇವುಗಳ ಜೊತೆಗೆ ʻಸಂಯಕ್ (ಸರಿಯಾದ) ದರ್ಶನʼ, ʻಸಂಯಕ್ ಜ್ಞಾನʼ, ʻಸಂಯಕ್ ಚರಿತ್ರೆʼ ಮತ್ತು ʻಸಂಯಕ್ ತಪʼ ಎಂಬ ನಾಲ್ಕು ತತ್ವಗಳನ್ನು ಪ್ರದರ್ಶಿಸುವ ಮೊದಲನೇ ಗ್ಯಾಲರಿ ಬಗ್ಗೆ ಅವರು ಒತ್ತಿ ಹೇಳಿದರು. ತೀರ್ಥಂಕರರ ಕಥೆಗಳು ಮತ್ತು ಬೋಧನೆಗಳನ್ನು ಕಲಾತ್ಮಕವಾಗಿ ಜೀವಂತಗೊಳಿಸುವ ಮೂರನೇ ಗ್ಯಾಲರಿಯ ಬಗ್ಗೆಯೂ ಪ್ರಧಾನಿಯವರು ವಿಶೇಷವಾಗಿ ಪ್ರಸ್ತಾಪಿಸಿದರು. “ಜ್ಞಾನವು ʻಸಮಕ್ʼ (ಸರಿಯಾದ) ಆಗಿದ್ದಾಗ, ಅದು ಸಮಚಿತ್ತತೆ ಮತ್ತು ಸೇವೆಯ ಅಡಿಪಾಯವಾಗುತ್ತದೆ,” ಎಂದು ಪ್ರಧಾನಿ ಮೋದಿ ಹೇಳಿದರು.
ಈ ವಸ್ತುಸಂಗ್ರಹಾಲಯವು ಜೈನ ಪರಂಪರೆಯ ಜೊತೆಗೆ ವೈದಿಕ, ಬೌದ್ಧ ಮತ್ತು ಭಾರತದ ಇತರ ಧಾರ್ಮಿಕ ಸಂಪ್ರದಾಯಗಳನ್ನು ವೈಭವಯುತವಾಗಿ ಪ್ರತಿನಿಧಿಸುತ್ತದೆ ಎಂದು ಪ್ರಧಾನಮಂತ್ರಿಯವರು ಗಮನಸೆಳೆದರು. ಭಾರತದ ಅತಿದೊಡ್ಡ ಶಕ್ತಿಯೆಂದರೆ ಅದರ ʻವೈವಿಧ್ಯತೆ ಮತ್ತು ವೈವಿಧ್ಯತೆಯಲ್ಲಿ ಏಕತೆʼ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಧರ್ಮ ಮತ್ತು ಪಂಥದ ಹೆಸರಿನಲ್ಲಿ ಜಗತ್ತು ಸಂಘರ್ಷಗಳಿಗೆ ಸಾಕ್ಷಿಯಾಗಿದ್ದರೂ, ಈ ವಸ್ತುಸಂಗ್ರಹಾಲಯವು ಕಾಮನಬಿಲ್ಲು, ವೇದಗಳು, ಪುರಾಣಗಳು, ಆಯುರ್ವೇದ, ಯೋಗ ಮತ್ತು ದರ್ಶನದಂತಹ ಎಲ್ಲಾ ಸಂಪ್ರದಾಯಗಳನ್ನು ಸಾಮರಸ್ಯದಿಂದ ಅಕ್ಕಪಕ್ಕದಲ್ಲಿರಿಸಿದೆ ಎಂದು ಅವರು ಹೇಳಿದರು. “ಇದು ಭಾರತದಲ್ಲಿ ಮಾತ್ರ ಸಾಧ್ಯ” ಎಂದು ಅವರು ಖಚಿತವಾಗಿ ಹೇಳಿದರು.
ಚಾಲ್ತಿಯಲ್ಲಿರುವ ಜಾಗತಿಕ ಅಸ್ಥಿರತೆ ಮತ್ತು ಅಶಾಂತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ವಸ್ತುಸಂಗ್ರಹಾಲಯದಲ್ಲಿ ಸಾಕಾರಗೊಂಡಿರುವ ಪರಂಪರೆ ಮತ್ತು ಸಂದೇಶವು ಭಾರತಕ್ಕೆ ಮಾತ್ರವಲ್ಲದೆ ಇಡೀ ಮನುಕುಲಕ್ಕೆ ಆಳವಾದ ಮಹತ್ವವನ್ನು ಹೊಂದಿದೆ ಎಂದು ಹೇಳಿದರು. ಪ್ರಪಂಚದಾದ್ಯಂತದ ಕುತೂಹಲಕಾರಿ ಸಂದರ್ಶಕರು, ವಿದ್ಯಾರ್ಥಿಗಳು ಮತ್ತು ಸಂಶೋಧಕರ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. “ಇಲ್ಲಿಗೆ ಭೇಟಿ ನೀಡುವವರು ಭಾರತ ಮತ್ತು ಜೈನ ಧರ್ಮದ ಬೋಧನೆಗಳನ್ನು ವಿಶ್ವದ ಮೂಲೆ ಮೂಲೆಗೂ ಕೊಂಡೊಯ್ಯಬೇಕು,” ಎಂದು ಶ್ರೀ ಮೋದಿ ಒತ್ತಾಯಿಸಿದರು.
ಭಾರತದ ಪ್ರಾಚೀನ ವಿಶ್ವವಿದ್ಯಾಲಯಗಳಾದ ತಕ್ಷಶಿಲಾ ಮತ್ತು ನಳಂದ ಒಂದು ಕಾಲದಲ್ಲಿ ಲಕ್ಷಾಂತರ ಹಸ್ತಪ್ರತಿಗಳಿಂದ ತುಂಬಿದ್ದವು, ಅವುಗಳನ್ನು ಧಾರ್ಮಿಕ ಸಂಕುಚಿತ ಮನಸ್ಥಿತಿಯಿಂದ ಪ್ರೇರಿತವಾದ ವಿದೇಶಿ ಆಕ್ರಮಣಕಾರರು ನಾಶಪಡಿಸಿದರು ಎಂದು ಪ್ರಧಾನಿ ಸ್ಮರಿಸಿದರು. ಆ ಕಷ್ಟದ ಸಮಯದಲ್ಲಿ, ಸಾಮಾನ್ಯ ಜನರು ಉಳಿದ ಹಸ್ತಪ್ರತಿಗಳನ್ನು ಪೀಳಿಗೆಯಿಂದ ಪೀಳಿಗೆಗೆ ಸಂರಕ್ಷಿಸಿದ್ದಾರೆ ಎಂದು ಹೇಳಿದ ಮೋದಿ ಅವರು, ಆಚಾರ್ಯ ಭಗವಂತ ಶ್ರೀ ಪದ್ಮಸಾಗರ್ ಸುರೀಶ್ವರ್ಜೀ ಮಹಾರಾಜ್ ಸಾಹೇಬ್ ಅವರ ಅಸಾಧಾರಣ ಸಮರ್ಪಣೆಯನ್ನು ಶ್ಲಾಘಿಸಿದರು. ಸುರೀಶ್ವರ್ ಜೀ ಅವರು ಅರವತ್ತು ವರ್ಷಗಳನ್ನು ಹಳ್ಳಿಯಿಂದ ಹಳ್ಳಿಗೆ ಮತ್ತು ನಗರದಿಂದ ನಗರಕ್ಕೆ ಪ್ರಯಾಣಿಸಿ, ದೇಶದ ಉದ್ದಗಲಕ್ಕೂ ಹಸ್ತಪ್ರತಿಗಳನ್ನು ಹುಡುಕಿದರು. “ನೂರಾರು ವರ್ಷಗಳಷ್ಟು ಹಳೆಯದಾದ ತಾಳೆಗರಿ ಮತ್ತು ಬರ್ಚ್ ತೊಗಟೆಯ ಮೇಲೆ ಕೆತ್ತಲಾದ ಮೂರು ಲಕ್ಷಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಇಂದು ಕೋಬಾದಲ್ಲಿ ಸುರಕ್ಷಿತವಾಗಿ ಸಂಕಲಿಸಲಾಗಿದೆ. ಇದು ಭಾರತದ ಭೂತ, ವರ್ತಮಾನ ಮತ್ತು ಭವಿಷ್ಯಕ್ಕೆ ಒಂದು ಸ್ಮರಣೀಯ ಸೇವೆಯನ್ನು ಸೂಚಿಸುತ್ತದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ಹಸ್ತಪ್ರತಿಗಳ ಸಂರಕ್ಷಣೆಗೆ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಹಿಂದಿನ ಸರ್ಕಾರಗಳ ನಿರ್ಲಕ್ಷ್ಯವನ್ನು ಸರಿಪಡಿಸಲು, ಡಿಜಿಟಲೀಕರಣ, ವೈಜ್ಞಾನಿಕ ಸಂರಕ್ಷಣೆ, ಸ್ಕ್ಯಾನಿಂಗ್, ರಾಸಾಯನಿಕ ಸಂಸ್ಕರಣೆ ಹಾಗೂ ಪ್ರಾಚೀನ ಹಸ್ತಪ್ರತಿಗಳ ಡಿಜಿಟಲ್ ಸಂಗ್ರಹಾಗಾರ ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ʻಜ್ಞಾನ ಭಾರತಂ ಮಿಷನ್ʼ ಅನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ತಮ್ಮ ಇತ್ತೀಚಿನ ʻಮನ್ ಕಿ ಬಾತ್ʼ ಸಂಚಿಕೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಅಲ್ಲಿ ನಾಗರಿಕರು ತಾವು ಸಂರಕ್ಷಿಸಲಾದ ಹಸ್ತಪ್ರತಿಗಳನ್ನು ಅಪ್ಲೋಡ್ ಮಾಡಲು ಅನುವು ಮಾಡಿಕೊಡುವ ರಾಷ್ಟ್ರವ್ಯಾಪಿ ಸಮೀಕ್ಷೆಯ ಬಗ್ಗೆ ಮಾತನಾಡಿದ್ದರು. ದೇಶದ ಮೂಲೆ ಮೂಲೆಗಳಲ್ಲಿ ಹರಡಿರುವ ಹಸ್ತಪ್ರತಿಗಳನ್ನು ಸಂಗ್ರಹಿಸುವಲ್ಲಿ ಈ ಅಭಿಯಾನವು ಮಹತ್ವದ ಪಾತ್ರ ವಹಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರದ ಮಟ್ಟದಲ್ಲಿ ʻಜ್ಞಾನ ಭಾರತಂ ಮಿಷನ್ʼನ ಜಂಟಿ ಪ್ರಯತ್ನಗಳು ಮತ್ತು ಕೋಬಾ ತೀರ್ಥದ ಅಸಾಧಾರಣ ಕೊಡುಗೆಯನ್ನು ಭಾರತದ ಹೊಸ ಸಾಂಸ್ಕೃತಿಕ ಪುನರುಜ್ಜೀವನದ ಸಂಕೇತಗಳು ಎಂದು ಪ್ರಧಾನಿ ಬಣ್ಣಿಸಿದರು. ಇಂದು, ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ ಮತ್ತು ಯಾತ್ರಾ ಸ್ಥಳಗಳ ಅಭಿವೃದ್ಧಿಯಿಂದ ಹಿಡಿದು ಆಯುರ್ವೇದ ಮತ್ತು ಯೋಗದ ಪ್ರಚಾರದವರೆಗೆ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ, ಅರ್ಥಮಾಡಿಕೊಳ್ಳುವ ಮತ್ತು ಪ್ರದರ್ಶಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಲೋಥಾಲ್ನಲ್ಲಿರುವ ಭವ್ಯವಾದ ಕಡಲ ವಸ್ತುಸಂಗ್ರಹಾಲಯ, ವಡ್ನಗರದ ವಸ್ತುಸಂಗ್ರಹಾಲಯ ಮತ್ತು ದೆಹಲಿಯಲ್ಲಿ ಮುಂಬರುವ ʻಯುಗೆ ಯುಗೀನ್ ಭಾರತ್ʼ ವಸ್ತುಸಂಗ್ರಹಾಲಯ ಸೇರಿದಂತೆ ಈ ನಿಟ್ಟಿನಲ್ಲಿ ನಡೆಯುತ್ತಿರುವ ಹೆಗ್ಗುರುತಿನ ಯೋಜನೆಗಳನ್ನು ಅವರು ಪ್ರಸ್ತಾಪಿಸಿದರು. ಮೊದಲ ಬಾರಿಗೆ, ರಾಜಕೀಯ ಪಕ್ಷಪಾತದಿಂದ ಮುಕ್ತವಾದ ಭಾರತದ ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸವನ್ನು ಹೊರತರಲು ಅರ್ಥಪೂರ್ಣ ಮತ್ತು ಸಮಗ್ರ ಕೆಲಸವನ್ನು ಮಾಡಲಾಗುತ್ತಿದೆ ಎಂದು ಒತ್ತಿ ಹೇಳಿದರು. “ನಾವು ಪರಂಪರೆಯನ್ನು ರಾಜಕೀಯ ಕನ್ನಡಕದ ಮೂಲಕ ನೋಡುವ ಮನಸ್ಥಿತಿಯನ್ನು ಕೊನೆಗೊಳಿಸಿದ್ದೇವೆ ಮತ್ತು ʻವಿಕಸಿತ ಭಾರತʼ ದೃಷ್ಟಿಕೋನದ ಆತ್ಮವಾದ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರದೊಂದಿಗೆ ಮುಂದುವರಿಯುತ್ತಿದ್ದೇವೆ,” ಎಂದು ಅವರು ಪ್ರತಿಪಾದಿಸಿದರು.
ಭಾರತದ ಪರಂಪರೆಯನ್ನು ಸಂರಕ್ಷಿಸುವಲ್ಲಿ ಸಂತರ ದಣಿವರಿಯದ ಪ್ರಯತ್ನಗಳನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು ಮತ್ತು ದೆಹಲಿಯಲ್ಲಿ ನಡೆದ ಐತಿಹಾಸಿಕ ʻನವಕಾರ ಮಹಾಮಂತ್ರ ದಿವಸ್ʼ ಕಾರ್ಯಕ್ರಮವನ್ನು ನೆನಪಿಸಿಕೊಂಡರು. ಅಲ್ಲಿ ಎಲ್ಲಾ ನಾಲ್ಕು ಜೈನ ಪಂಥಗಳು ಒಗ್ಗೂಡಿದ್ದವು. ಆ ಸಂದರ್ಭದಲ್ಲಿ ಅವರು ವಿವರಿಸಿದ ಹತ್ತು ಸಂಕಲ್ಪಗಳನ್ನು ಪ್ರಧಾನಿ ಪುನರುಚ್ಚರಿಸಿದರು, ಅವುಗಳೆಂದರೆ: ನೀರನ್ನು ಉಳಿಸುವುದು; ತಾಯಿ ಹೆಸರಲ್ಲಿ ಒಂದು ಗಿಡ ನೆಡುವುದು; ಸ್ವಚ್ಛತಾ ಮಿಷನ್; ವೋಕಲ್ ಫಾರ್ ಲೋಕಲ್; ದೇಶ ದರ್ಶನ; ನೈಸರ್ಗಿಕ ಕೃಷಿ; ಆರೋಗ್ಯಕರ ಜೀವನಶೈಲಿ; ಯೋಗ ಮತ್ತು ಕ್ರೀಡೆ; ಬಡವರಿಗೆ ಸಹಾಯ ಮಾಡುವುದು; ಮತ್ತು ಹತ್ತನೇ ಸಂಕಲ್ಪವನ್ನು ಸಮುದಾಯವು ಸೇರಿಸಿದೆ, ಭಾರತದ ಪರಂಪರೆಯ ಸಂರಕ್ಷಣೆ. “ಇಂದಿನ ಕಾರ್ಯಕ್ರಮವು ಈ ಸಂಕಲ್ಪಗಳ ಜೀವಂತ ಪ್ರತಿಬಿಂಬವಾಗಿದೆ” ಎಂದು ಅವರು ಹೇಳಿದರು.
ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಭಾರತದ ಏಕತೆ ಮತ್ತು ಸಾಂಸ್ಕೃತಿಕ ಶಕ್ತಿಯು ರಾಷ್ಟ್ರದ ದೊಡ್ಡ ಗುರಿಗಳನ್ನು ಸಾಧಿಸುವಲ್ಲಿ ಪ್ರೇರಕ ಶಕ್ತಿಯಾಗಲಿದೆ ಎಂದು ಹೇಳಿದರು. ಜನರು ವೈಯಕ್ತಿಕ ಆಕಾಂಕ್ಷೆಗಳನ್ನು ಮೀರಿ ಸಮಾಜ ಮತ್ತು ರಾಷ್ಟ್ರದ ಗುರಿಗಳಿಗಾಗಿ ಕೆಲಸ ಮಾಡಿದಾಗ, ಅಭಿವೃದ್ಧಿಯ ವೇಗವು ವೇಗಗೊಳ್ಳುತ್ತದೆ ಎಂದು ಅವರು ಹೇಳಿದರು. “ಸಾಮ್ರಾಟ್ ಸಂಪ್ರತಿ ವಸ್ತುಸಂಗ್ರಹಾಲಯವು ಜ್ಞಾನ, ಸಾಧನೆ ಮತ್ತು ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತದೆ, ಹೊಸ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಮತ್ತು ಮುಂದಿನ ದಿನಗಳಲ್ಲಿ ಸಮಾಜವನ್ನು ಶಕ್ತಿಯುತಗೊಳಿಸುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಶ್ರೀ ಮೋದಿ ಹೇಳಿದರು.
******
Speaking at the inauguration of the Samrat Samprati Museum in Gandhinagar. It showcases the deep-rooted traditions of the Jain culture and its timeless values for humanity. https://t.co/yo1XszOIza
— Narendra Modi (@narendramodi) March 31, 2026
मैं भगवान महावीर के चरणों में प्रणाम करता हूँ।
— PMO India (@PMOIndia) March 31, 2026
मैं कोबातीर्थ से सभी देशवासियों को भगवान महावीर जयंती की शुभकामनाएँ देता हूँ: PM @narendramodi
सम्राट संप्रति संग्रहालय...
— PMO India (@PMOIndia) March 31, 2026
ये भारत के कोटि-कोटि लोगों की धरोहर है।
ये भारत के गौरवशाली अतीत की धरोहर है: PM @narendramodi
सम्राट संप्रति ने सिंहासन पर बैठकर अहिंसा का विस्तार किया।
— PMO India (@PMOIndia) March 31, 2026
उन्होंने सत्य, अस्तेय और अपरिग्रह का प्रचार प्रसार किया: PM @narendramodi
भारत में ज्ञान हमेशा से एक मुक्त प्रवाह रहा है।
— PMO India (@PMOIndia) March 31, 2026
हर युग में तीर्थंकरों और ऋषियों-मनीषियों का अवतार हुआ।
ज्ञान का संकलन बढ़ता चला गया।
समय के साथ बहुत कुछ नया जुड़ता गया: PM @narendramodi
The Samrat Samprati Museum is a must visit for all those passionate about history and culture. The Museum is a commendable effort to popularise Jain history, culture and teachings. pic.twitter.com/LNlmQ9hwX9
— Narendra Modi (@narendramodi) March 31, 2026
Today, I had the opportunity to visit a few galleries such as Adinath-Neminath Gallery, Parshvanath Gallery, a gallery dedicated to Bhagwan Mahavir and a gallery showing exhibits from Raja Kumarpal to the Simhsuri Period. The attention to detail, aesthetic beauty and aspects from… pic.twitter.com/oqDrkfKfW1
— Narendra Modi (@narendramodi) March 31, 2026
सत्ता को सेवा और साधना मानकर कार्य करने की जो प्रेरणा हमें अपने इतिहास से मिलती है, उसी अमूल्य विरासत को गांधीनगर के कोबा तीर्थ में सम्राट संप्रति संग्रहालय में सहेजकर प्रस्तुत किया गया है। pic.twitter.com/LWyWg6wMAr
— Narendra Modi (@narendramodi) March 31, 2026
आज जब पूरा विश्व अस्थिरता और अशांति की आग में झुलस रहा है, ऐसे समय में सम्राट संप्रति संग्रहालय का संदेश केवल भारत के लिए ही नहीं, बल्कि समस्त मानवता के लिए बहुत अहम है। pic.twitter.com/NsAXIG82FX
— Narendra Modi (@narendramodi) March 31, 2026
ताड़पत्र और भोजपत्र पर अंकित सैकड़ों वर्ष पुराना दुर्लभ ज्ञान कोबा तीर्थ में संरक्षित और संकलित किया गया है। यह प्रयास केवल हमारे अतीत और वर्तमान को जोड़ने वाला नहीं, बल्कि हमारे भविष्य के लिए भी बहुत उपयोगी है। pic.twitter.com/Z3iUiCQPax
— Narendra Modi (@narendramodi) March 31, 2026
नवकार महामंत्र दिवस पर दिल्ली में हुए ऐतिहासिक कार्यक्रम में मैंने नौ संकल्पों की बात की थी। आज उनमें इस दसवें संकल्प को भी आप सभी ने जोड़ लिया है… pic.twitter.com/bqxVaCyd0P
— Narendra Modi (@narendramodi) March 31, 2026