Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಜ್ಯ ಸಭಾ ಉಪ ಸಭಾಧ್ಯಕ್ಷರಾಗಿ ಶ್ರೀ ಹರಿವಂಶ ಅವರ ಆಯ್ಕೆಗೆ ಪ್ರಧಾನ ಮಂತ್ರಿ ಪ್ರತಿಕ್ರಿಯೆ

ರಾಜ್ಯ ಸಭಾ ಉಪ ಸಭಾಧ್ಯಕ್ಷರಾಗಿ ಶ್ರೀ ಹರಿವಂಶ ಅವರ ಆಯ್ಕೆಗೆ ಪ್ರಧಾನ ಮಂತ್ರಿ ಪ್ರತಿಕ್ರಿಯೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಹರಿವಂಶ ಅವರನ್ನು ರಾಜ್ಯ ಸಭಾ ಉಪಸಭಾಪತಿಯಾಗಿ ಆಯ್ಕೆಯಾದುದಕ್ಕಾಗಿ ಅಭಿನಂದಿಸಿದರು.

ಚುನಾವಣೆಯ ಬಳಿಕ ಮೇಲ್ಮನೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಅವರು ಸದನದ ನಾಯಕ ಶ್ರೀ ಅರುಣ್ ಜೈಟ್ಲಿ ಅವರು ಆರೋಗ್ಯ ಸುಧಾರಣೆಗೊಂಡು ಸದನಕ್ಕೆ ಮರಳಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು

ನಾವು ಇಂದು ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಚಳವಳಿಯ ವಾರ್ಷಿಕೋತ್ಸವ ಆಚರಣೆಯನ್ನು ಮಾಡುತ್ತಿದ್ದೇವೆ ಎಂಬುದರತ್ತ ಗಮನ ಸೆಳೆದ ಪ್ರಧಾನ ಮಂತ್ರಿಗಳು 1857 ರ ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದಲೂ ಸ್ವಾತಂತ್ರ್ಯ ಚಳವಳಿಯ ಜೊತೆ ಸೇರಿಕೊಂಡಿದ್ದ ಭೂಮಿಯಾದ ಬಲ್ಲಿಯಾದಿಂದ ಹರಿವಂಶ ಅವರು ಬಂದಿದ್ದಾರೆ ಎಂದು ಶ್ಲ್ಯಾಘಿಸಿದರು. ಶ್ರೀ ಹರಿವಂಶ ಅವರು ಲೋಕನಾಯಕ ಜಯ ಪ್ರಕಾಶ ನಾರಾಯಣ್ ಅವರಿಂದ ಪ್ರಭಾವಿತರಾದುದನ್ನೂ ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಿದರು.

ಮಾಜಿ ಪ್ರಧಾನ ಮಂತ್ರಿ ಚಂದ್ರಶೇಖರ ಜೀ ಅವರ ಜೊತೆಗೂ ಹರಿವಂಶ ಜೀ ಅವರು ಕೆಲಸ ಮಾಡಿದ್ದನ್ನು ಪ್ರಧಾನ ಮಂತ್ರಿಗಳು ನೆನಪು ಮಾಡಿಕೊಂಡರು.

ಚಂದ್ರಶೇಖರ ಜೀ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದ ಹರಿವಂಶ ಜೀ ಅವರಿಗೆ ಚಂದ್ರಶೇಖರ ಜೀ ಅವರು ರಾಜೀನಾಮೆ ನೀಡುತ್ತಾರೆ ಎಂಬುದು ಮುಂಚಿತವಾಗಿ ತಿಳಿದಿತ್ತು. ಅವರು ಈ ವಿಷಯವನ್ನು ತಮ್ಮದೇ ಸುದ್ದಿ ಪತ್ರಿಕೆಗೂ ಬಿಟ್ಟುಕೊಡಲಿಲ್ಲ. ಇದು ಅವರು ನೈತಿಕತೆಗೆ ಮತ್ತು ಸಾರ್ವಜನಿಕ ಸೇವೆಗೆ ಹೊಂದಿರುವ ಬದ್ದತೆಯನ್ನು ತೋರಿಸುತ್ತದೆ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು.

ಹರಿವಂಶ ಜೀ ಅವರು ಬಹಳಷ್ಟು ಓದಿದ್ದಾರೆ ಮತ್ತು ಬರೆದಿದ್ದಾರೆ ಎಂದು ಹೇಳಿದ ಪ್ರಧಾನ ಮಂತ್ರಿಗಳು ಅವರು ಸಮಾಜಕ್ಕೆ ನೀಡಿದ ಕೊಡುಗೆಯೂ ಮಹತ್ವದ್ದು ಎಂದೂ ಹೇಳಿದರು.

ರಾಜ್ಯ ಸಭೆಯ ಉಪ ಸಭಾದ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾಗವಹಿಸಿದುದಕ್ಕಾಗಿ ಶ್ರೀ ಬಿ.ಕೆ. ಹರಿಪ್ರಸಾದ್ ಅವರನ್ನು ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು. ಚುನಾವಣೆಯನ್ನು ಸುಗಮವಾಗಿ ನಡೆಸಿಕೊಟ್ಟದ್ದಕ್ಕಾಗಿ ಅವರು ಸಭಾಧ್ಯಕ್ಷರು ಮತ್ತು ಇತರ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.