Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಏಕೀಕರಣಕ್ಕಾಗಿ ಸರ್ದಾರ್ ಪಟೇಲ್ ಪ್ರಶಸ್ತಿಯನ್ನು ಪ್ರಧಾನಮಂತ್ರಿ ಘೋಷಿಸಿದರು


ಕೆವಾಡಿಯಾದಲ್ಲಿ ನಿನ್ನೆ ಜರುಗಿದ ಡಿಜಿಪಿ/ಐಜಿಪಿಗಳ ಸಮಾವೇಶದಲ್ಲಿ ರಾಷ್ಟ್ರೀಯ ಏಕೀಕರಣಕ್ಕಾಗಿ ವಾರ್ಷಿಕ ಸರ್ದಾರ್ ಪಟೇಲ್ ಪ್ರಶಸ್ತಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘೋಷಿಸಿದರು. ರಾಷ್ಟ್ರೀಯ ಏಕೀಕರಣದ ನಿಟ್ಟಿನಲ್ಲಿ ಮಹತ್ವಪೂರ್ಣ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

“ಸರ್ದಾರ್ ಪಟೇಲ್ ಅವರು ತಮ್ಮ ಪೂರ್ತಿ ಜೀವನವನ್ನು ಭಾರತದ ಒಗ್ಗೂಡುವಿಕೆಗಾಗಿ ಸಮರ್ಪಿಸಿದ್ದಾರೆ. ರಾಷ್ಟ್ರೀಯ ಏಕೀಕರಣಕ್ಕಾಗಿ ವಾರ್ಷಿಕ ಸರ್ದಾರ್ ಪಟೇಲ್ ಪ್ರಶಸ್ತಿಯನ್ನು ನೀಡುವುದು ಅವರಿಗೆ ನೀಡುವ ಗೌರವ ನಮನವಾಗಿದೆ ಮತ್ತು ಈ ಮೂಲಕ ಹಲವರಿಗೆ ಭಾರತದ ಏಕತೆ ಮತ್ತು ರಾಷ್ಟ್ರೀಯ ಏಕೀಕರಣದ ನಿಟ್ಟಿನಲ್ಲಿ ಇನ್ನೂ ಹೆಚ್ಚು ಕೆಲಸಮಾಡಲು ಪ್ರಶಸ್ತಿಯು ಪ್ರೇರಣೆ ನೀಡುತ್ತದೆ. “ ಎಂದು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

***