Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಲಡಾಖ್‌ನಲ್ಲಿ ನಾವೀನ್ಯತೆ ಮತ್ತು ಸಮೃದ್ಧಿಯನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಲಡಾಖ್‌ನಲ್ಲಿ ಹೊಸ ಅವಕಾಶಗಳು ತೆರೆಯುವುದನ್ನು ಪ್ರಮುಖವಾಗಿ ಬಿಂಬಿಸುವ ಕೇಂದ್ರ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.

ಲಡಾಖ್‌ನ ಸ್ಥಳೀಯ ಬೆರ್ರಿ ಹಣ್ಣು ನಾವೀನ್ಯತೆ ಮತ್ತು ಅವಕಾಶದ ಕಥೆಯನ್ನು ಬರೆಯುತ್ತಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಈ ಲೇಖನವು ಲಡಾಖ್‌ನಲ್ಲಿ ಉದ್ಯಮಶೀಲತೆ ಮತ್ತು ಮೌಲ್ಯವರ್ಧನೆಯು ಹೇಗೆ ಸಮೃದ್ಧಿಯ ಹೊಸ ಮಾರ್ಗಗಳನ್ನು ತೆರೆಯುತ್ತಿದೆ ಎಂಬುದರ ಕುರಿತ ಪ್ರತಿಬಿಂಬವನ್ನು ಪ್ರಸ್ತುತಪಡಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ತಿಳಿಸಿದರು. ಇದು ರಾಷ್ಟ್ರವು ‘ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಧ್ವನಿಯಾಗುವುದನ್ನು’ ಹೇಗೆ ಮುನ್ನಡೆಸುತ್ತಿದೆ ಎಂಬುದರ ಕುರಿತು ಒಳನೋಟವುಳ್ಳ ಓದು ಎಂದು ಬಣ್ಣಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ X ಪೋಸ್ಟ್ ನಲ್ಲಿ  ಹೀಗೆ ಹೇಳಿದ್ದಾರೆ :

“ಲಡಾಖ್‌ನ ಸ್ಥಳೀಯ ಬೆರ್ರಿ ಹಣ್ಣು ನಾವೀನ್ಯತೆ ಮತ್ತು ಅವಕಾಶದ ಕಥೆಯನ್ನು ಬರೆಯುತ್ತಿದೆ.

ಲಡಾಖ್‌ನಲ್ಲಿ ಉದ್ಯಮಶೀಲತೆ ಮತ್ತು ಮೌಲ್ಯವರ್ಧನೆಯು ಸಮೃದ್ಧಿಯ ಹೊಸ ಮಾರ್ಗಗಳನ್ನು ಹೇಗೆ ತೆರೆಯುತ್ತಿದೆ ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ @iChiragPaswan ಅವರ ಲೇಖನದಲ್ಲಿ ಬಲವಾಗಿ ಪ್ರತಿಬಿಂಬಿಸಲಾಗಿದೆ!

ನಾವು ‘ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಧ್ವನಿಯಾಗುವುದನ್ನು’ ಹೇಗೆ ಮುನ್ನಡೆಸುತ್ತಿದ್ದೇವೆ ಎಂಬುದರ ಕುರಿತು ಒಳನೋಟವುಳ್ಳ ಓದು.’’

 

*****