Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೋಮನಾಥ ದೇವಾಲಯದ ಸ್ಥಿತಿಸ್ಥಾಪಕತ್ವ ಮತ್ತು ನಾಗರಿಕತೆಯ ಮಹತ್ವ ಬಿಂಬಿಸುವ ಲೇಖನ ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಸೋಮನಾಥ ದೇವಾಲಯದ ಸ್ಥಿತಿಸ್ಥಾಪಕತ್ವ ಮತ್ತು ಕಾಲಾತೀತ ನಾಗರಿಕತೆಯ ಮಹತ್ವವನ್ನು ಪ್ರಮುಖವಾಗಿ ಬಿಂಬಿಸುವ ಕೇಂದ್ರ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರ ಲೇಖನವನ್ನು ಹಂಚಿಕೊಂಡಿದ್ದಾರೆ.

ಸೋಮನಾಥ ದೇಗುಲವು ದೇವಾಲಯಕ್ಕಿಂತ ಮಿಗಿಲಾಗಿದ್ದು, ಭಾರತದ ನಿರಂತರ ಚೈತನ್ಯಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿಉಲ್ಲೇಖಿಸಿದರು. ವಿನಾಶದಿಂದ ನವೀಕರಣದವರೆಗಿನ ಅದರ ಪಯಣವು ರಾಷ್ಟ್ರದ ಅಜೇಯ ಪರಂಪರೆ ಮತ್ತು ಧೈರ್ಯಶಾಲಿ ವೈಭವವನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ  ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ. :

“ದೇವಾಲಯಕ್ಕಿಂತ ಹೆಚ್ಚಾಗಿ, ಸೋಮನಾಥವು ಭಾರತದ ನಿರಂತರ ಚೈತನ್ಯಕ್ಕೆ ಸಾಕ್ಷಿಯಾಗಿದೆ. ವಿನಾಶದಿಂದ ನವೀಕರಣದವರೆಗಿನ ಅದರ ಪ್ರಯಾಣವು ಭಾರತದ ಅಜೇಯ ಪರಂಪರೆ ಮತ್ತು ಅದರ ಧೈರ್ಯಶಾಲಿ ವೈಭವತೆಯನ್ನು ಪ್ರತಿಬಿಂಬಿಸುತ್ತದೆ!

ಕೇಂದ್ರ ಸಚಿವರಾದ ಶ್ರೀ @gssjodhpur  ಅವರು ತಮ್ಮ ಲೇಖನದಲ್ಲಿ ಸೋಮನಾಥದ ಸ್ಥಿತಿಸ್ಥಾಪಕತ್ವ ಮತ್ತು ಅದರ ಕಾಲಾತೀತ ನಾಗರಿಕತೆಯ ಮಹತ್ವವವನ್ನು ಪ್ರತಿಬಿಂಬಿಸುವ ಬಗ್ಗೆ ಬೆಳೆಕು ಚೆಲ್ಲಿದ್ದಾರೆ. ಓದಿ..!

*****