Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್ ಗೆ ಪ್ರಧಾನಮಂತ್ರಿ ಭೇಟಿ, ಸೌರಾಷ್ಟ್ರ ನರ್ಮದಾ ನೀರಾವರಿ ಯೋಜನೆ ಉದ್ಘಾಟನೆ

ಗುಜರಾತ್ ಗೆ ಪ್ರಧಾನಮಂತ್ರಿ ಭೇಟಿ, ಸೌರಾಷ್ಟ್ರ ನರ್ಮದಾ ನೀರಾವರಿ ಯೋಜನೆ ಉದ್ಘಾಟನೆ

ಗುಜರಾತ್ ಗೆ ಪ್ರಧಾನಮಂತ್ರಿ ಭೇಟಿ, ಸೌರಾಷ್ಟ್ರ ನರ್ಮದಾ ನೀರಾವರಿ ಯೋಜನೆ ಉದ್ಘಾಟನೆ

ಗುಜರಾತ್ ಗೆ ಪ್ರಧಾನಮಂತ್ರಿ ಭೇಟಿ, ಸೌರಾಷ್ಟ್ರ ನರ್ಮದಾ ನೀರಾವರಿ ಯೋಜನೆ ಉದ್ಘಾಟನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಸೌರಾಷ್ಟ್ರ ನರ್ಮದಾ ನೀರಾವರಿ (ಸವುನಿ) ಯೋಜನೆಯನ್ನು ಉದ್ಘಾಟಿಸುವ ಸಲುವಾಗಿ ಗುಜರಾತ್ ನ ಸನೋಸರದಲ್ಲಿ ಫಲಕದ ಅನಾವರಣ ಮಾಡಿದರು.

ಪ್ರಧಾನಮಂತ್ರಿಯವರು ಎ.ಜೆ.ಐ-3 ಜಲಾಶಯ ಪ್ರದೇಶಕ್ಕೆ ಭೇಟಿ ನೀಡಿದರು ಮತ್ತು ಜಲಾಶಯದ ಗೇಟ್ ಗಳ ಮೂಲಕ ನೀರು ಬಿಡುಗಡೆ ಮಾಡುವುದನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೂಡ ರೈತರಿಗೆ ನೀರು ಅತ್ಯಂತ ಮಹತ್ವದ್ದು ಎಂಬ ದೃಢ ನಂಬಿಕೆ ಹೊಂದಿದ್ದನ್ನು ಸ್ಮರಿಸಿದರು. ರಾಜ್ಯದಲ್ಲಿ ಅಂತರ್ಜಲಮಟ್ಟ ಏರಿಕೆಯಾಗಲು ಆರಂಭಿಸಿದೆ ಎಂದು ಅವರು ಹೇಳಿದರು. ಒಡ್ಡುಗಳನ್ನು ಕೂಡ ದೊಡ್ಡ ಸಂಖ್ಯೆಯಲ್ಲಿ ನಿರ್ಮಿಸಲಾಗಿದೆ ಎಂದೂ ಅವರು ಹೇಳಿದರು.
ಒಂದು ಕಾಲದಲ್ಲಿ ನಮ್ಮ ಯೋಧರಿಗೆ ಕೂಡ ಸಾಕಷ್ಟು ಪ್ರಮಾಣದ ನೀರು ಸಿಗದಿದ್ದ ಕಚ್ ನ ಪರಿಸ್ಥಿತಿ ಹೇಗೆ ಬದಲಾಗಿದೆ ಎಂಬುದನ್ನು ಪ್ರಧಾನಿ ಉಲ್ಲೇಖಿಸಿದರು.

ಸೌರಾಷ್ಟ್ರದ ಶಾಸಕರನ್ನು ತಾವು ಮೊದಲು ಭೇಟಿ ಮಾಡಿದ್ದು ತಮಗಿನ್ನೂ ನೆನಪಿದೆ ಮತ್ತು ಆಗ ಸವುನಿ ಯೋಜನೆಯ ಬಗ್ಗೆ ಚರ್ಚಿಸಲಾಗಿತ್ತು ಎಂದು ಪ್ರಧಾನಿ ಸ್ಮರಿಸಿದರು. ಈ ಉಪಕ್ರಮವು ಪ್ರತಿಯೊಬ್ಬ ಗುಜರಾತಿಯೂ ಹೆಮ್ಮೆ ಪಡುವಂತೆ ಮಾಡಿದೆ ಎಂದರು.

ಜಲ ಸಂರಕ್ಷಣೆಯ ಅಗತ್ಯವನ್ನೂ ಪ್ರತಿಪಾದಿಸಿದ ನರೇಂದ್ರ ಮೋದಿಯವರು, ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳ ಬಗ್ಗೆ ಅದರಲ್ಲೂ ಬೆಳೆ ವಿಮೆಯ ಬಗ್ಗೆ ಪ್ರಸ್ತಾಪಿಸಿದರು.

ಅಡುಗೆ ಅನಿಲ ಸಂಪರ್ಕಕ್ಕೆ ಉಜ್ವಲ ಹಾಗೂ ಎಲ್.ಇ.ಡಿ. ಬಲ್ಬ್ ವಿತರಣೆ ಯೋಜನೆಗಳು ಹೇಗೆ ಜನರ ಜೀವನ ಮಟ್ಟ ಸುಧಾರಿಸುತ್ತಿವೆ ಎಂದು ಪ್ರಧಾನಿ ವಿವರಿಸಿದರು.

*****

AKT/AK-