Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಛತ್ತೀಸಗಢದ ರಾಜ್ಯಪಾಲ ಶ್ರೀ ಬಲರಾಮ್ ಜೀ ದಾಸ್ ಟಂಡನ್ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನ ಮಂತ್ರ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಛತ್ತೀಸಗಢದ ರಾಜ್ಯಪಾಲ ಶ್ರೀ ಬಲರಾಮ್ ಜೀ ದಾಸ್ ಟಂಡನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

“ಛತ್ತೀಸಗಢದ ರಾಜ್ಯಪಾಲಶ್ರೀ ಬಲರಾಮ್ ಜೀ ದಾಸ್ ಟಂಡನ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ನಾವು ವ್ಯಾಪಕ ಗೌರವಕ್ಕೆ ಪಾತ್ರರಾಗಿದ್ದ ಸಾರ್ವಜನಿಕ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರು ಸಮಾಜಕ್ಕೆ ಮಾಡಿರುವ ಸೇವೆ ಸದಾ ಸ್ಮರಣೆಯಲ್ಲಿರುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬದವರೊಂದಿಗೆ ಮತ್ತು ಅವರ ಹಿತೈಷಿಗಳೊಂದಿಗೆ ನನ್ನ ಸಂವೇದನೆ ಇದೆ.

ಶ್ರೀ ಬಲರಾಮ್ ಜೀ ದಾಸ್ ಟಂಡನ್ ಅವರು ಪಂಜಾಬ್ ನಲ್ಲಿ ಶಾಂತಿ ಮತ್ತು ಪ್ರಗತಿಗಾಗಿ ದಶಕಗಳ ಕಾಲ ಶ್ರಮಿಸಿದ್ದರು. ಕೈಗಾರಿಕೆ ಮತ್ತು ಕಾರ್ಮಿಕ ಕಲ್ಯಾಣ ಕ್ಷೇತ್ರಗಳ ಬಗ್ಗೆ ಭಾವುಕರಾಗಿದ್ದ ಅವರ ಆಡಳಿತಾತ್ಮಕ ಅನುಭವ ರಾಜ್ಯಕ್ಕೆ ಹೆಚ್ಚಿನ ಮೌಲ್ಯ ಸೇರಿಸಿತು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಅವರ ಧೈರ್ಯಕ್ಕೆ ಅವರು ಸದಾ ಸ್ಮರಣೀಯರು “ಎಂದು ಪ್ರಧಾನಿ ಹೇಳಿದ್ದಾರೆ.

***

AKT/SH