ಪಿಎಂಇಂಡಿಯಾ
ಘನತೆವೆತ್ತರೇ,
ನೈಸರ್ಗಿಕ ವಿಕೋಪಗಳು ಮಾನವೀಯತೆಗೆ ಪ್ರಮುಖ ಸವಾಲನ್ನು ಒಡ್ಡುತ್ತಲೇ ಇವೆ. ಈ ವರ್ಷವೂ ಅವು ಜಾಗತಿಕ ಜನಸಂಖ್ಯೆಯ ಹೆಚ್ಚಿನ ಭಾಗದ ಮೇಲೆ ಪರಿಣಾಮ ಬೀರಿವೆ. ಪರಿಣಾಮಕಾರಿ ವಿಪತ್ತು ಸಿದ್ಧತೆ ಮತ್ತು ಪ್ರತಿಕ್ರಿಯೆಗಾಗಿ ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸುವ ಅಗತ್ಯವನ್ನು ಈ ಘಟನೆಗಳು ಸ್ಪಷ್ಟವಾಗಿ ಉಲ್ಲೇಖಿಸುತ್ತವೆ.
ಈ ಚಿಂತನೆಯನ್ನು ಬೆಂಬಲಿಸಲು, ಭಾರತವು ತನ್ನ ಜಿ20 ಅಧ್ಯಕ್ಷತೆಯಲ್ಲಿ ವಿಪತ್ತು ಅಪಾಯ ಕಡಿತ ಕಾರ್ಯ ಗುಂಪನ್ನು ರಚಿಸಿತು. ಈ ಪ್ರಮುಖ ಕಾರ್ಯಸೂಚಿಗೆ ಆದ್ಯತೆ ನೀಡಿದ್ದಕ್ಕಾಗಿ ದಕ್ಷಿಣ ಆಫ್ರಿಕಾವನ್ನು ಸಹ ನಾನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ವಿಪತ್ತು ಸ್ಥಿತಿಸ್ಥಾಪಕತ್ವಕ್ಕೆ ನಮ್ಮ ವಿಧಾನವು ‘ಪ್ರತಿಕ್ರಿಯೆ-ಕೇಂದ್ರಿತ’ ದಿಂದ ‘ಅಭಿವೃದ್ಧಿ-ಕೇಂದ್ರಿತ’ ಕ್ಕೆ ಬದಲಾಗಬೇಕು. ಇದು ಭಾರತವು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟವನ್ನು (ಸಿ.ಡಿ.ಆರ್.ಐ.) ಸ್ಥಾಪಿಸುವ ಉಪಕ್ರಮದ ಹಿಂದಿನ ಆಲೋಚನೆಯಾಗಿತ್ತು. ಸಿ.ಡಿ.ಆರ್.ಐ. ಜೊತೆ ಒಟ್ಟಾಗಿ ಕೆಲಸ ಮಾಡುವ ಮೂಲಕ, ಜಿ20 ದೇಶಗಳು ಹಣಕಾಸು, ತಂತ್ರಜ್ಞಾನ ಮತ್ತು ಕೌಶಲ್ಯಗಳನ್ನು ಸಜ್ಜುಗೊಳಿಸಬಹುದು ಮತ್ತು ಸ್ಥಿತಿಸ್ಥಾಪಕತ್ವದ ಭವಿಷ್ಯವನ್ನು ಖಚಿತಪಡಿಸಿಕೊಳ್ಳಬಹುದು.
ಸ್ನೇಹಿತರೇ,
ಬಾಹ್ಯಾಕಾಶ ತಂತ್ರಜ್ಞಾನವು ಎಲ್ಲಾ ಇಡೀ ಮಾನವ ಕುಲಕ್ಕೆ/ಮಾನವೀಯತೆಗೆ ಪ್ರಯೋಜನವನ್ನು ನೀಡಬೇಕು ಎಂದು ಭಾರತವೂ ನಂಬುತ್ತದೆ. ಅದಕ್ಕಾಗಿಯೇ ನಾವು ಜಿ20 ಮುಕ್ತ ಉಪಗ್ರಹ ದತ್ತಾಂಶ ಪಾಲುದಾರಿಕೆಯನ್ನು ಪ್ರಸ್ತಾಪಿಸುತ್ತಿದ್ದೇವೆ. ಈ ಉಪಕ್ರಮವು ಜಿ20 ಬಾಹ್ಯಾಕಾಶ ಸಂಸ್ಥೆಗಳಿಂದ ಉಪಗ್ರಹ ದತ್ತಾಂಶ ಮತ್ತು ವಿಶ್ಲೇಷಣೆಯನ್ನು ಹೆಚ್ಚು ಪ್ರವೇಶಿಸಬಹುದಾದ, ಪರಸ್ಪರ ಕಾರ್ಯನಿರ್ವಹಿಸಬಹುದಾದ ಮತ್ತು ಉಪಯುಕ್ತವಾದ ವ್ಯವಸ್ಥೆಯನ್ನು ರೂಪಿಸುತ್ತದೆ – ಅದರಲ್ಲೂ ವಿಶೇಷವಾಗಿ ಜಾಗತಿಕ ದಕ್ಷಿಣದ ದೇಶಗಳಿಗೆ ಇದು ಹೆಚ್ಚು ಉಪಯುಕ್ತ.
ಸ್ನೇಹಿತರೇ,
ಜಾಗತಿಕ ಬೆಳವಣಿಗೆಗೆ ಸುಸ್ಥಿರತೆ ಮತ್ತು ಶುದ್ಧ ಇಂಧನ ಅತ್ಯಗತ್ಯ. ಇದಕ್ಕೆ ನಿರ್ಣಾಯಕ ಖನಿಜಗಳು ನಿರ್ಣಾಯಕವಾಗಿವೆ ಮತ್ತು ಅವುಗಳನ್ನು ಮಾನವೀಯತೆಗೆ ಹಂಚಿಕೆಯ ಸಂಪನ್ಮೂಲವಾಗಿ ನೋಡಬೇಕು. ಅದಕ್ಕಾಗಿಯೇ ಭಾರತವು ಜಿ20 ಕ್ರಿಟಿಕಲ್ ಮಿನರಲ್ಸ್ ಸರ್ಕ್ಯುಲಾರಿಟಿ ಇನಿಶಿಯೇಟಿವ್ ಅನ್ನು ಪ್ರಸ್ತಾಪಿಸುತ್ತದೆ, ಇದು ಮರುಬಳಕೆ, ನಗರ ಗಣಿಗಾರಿಕೆ ಮತ್ತು ಸೆಕೆಂಡ್-ಲೈಫ್ ಬ್ಯಾಟರಿಗಳಂತಹ ನಾವೀನ್ಯತೆಗಳಿಗೆ ಚಾಲನೆ ನೀಡುತ್ತದೆ.
ಸರ್ಕ್ಯುಲಾರಿಟಿಯಲ್ಲಿ ಹೂಡಿಕೆ ಮಾಡುವುದರಿಂದ ಪ್ರಾಥಮಿಕ ಗಣಿಗಾರಿಕೆಯ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ, ಅದು ಪೂರೈಕೆ ಸರಪಳಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಪರಿಸರಕ್ಕೆ ಪ್ರಯೋಜನವಾಗುತ್ತದೆ. ಈ ಉಪಕ್ರಮವು ಜಾಗತಿಕ ದಕ್ಷಿಣದಲ್ಲಿ ಜಂಟಿ ಸಂಶೋಧನೆ, ಸಾಮಾನ್ಯ ತಂತ್ರಜ್ಞಾನ ಮಾನದಂಡಗಳು ಮತ್ತು ಪೈಲಟ್/ನವೀನ ಮರುಬಳಕೆ ಸೌಲಭ್ಯಗಳನ್ನು ಸಹ ಸಕ್ರಿಯಗೊಳಿಸಬಹುದು.
ಸ್ನೇಹಿತರೇ,
ಹೊಸದಿಲ್ಲಿ ಜಿ20 ಶೃಂಗಸಭೆಯ ಸಂದರ್ಭದಲ್ಲಿ, 2030ರ ವೇಳೆಗೆ ನವೀಕರಿಸಬಹುದಾದ ಇಂಧನವನ್ನು ಮೂರು ಪಟ್ಟು ಹೆಚ್ಚಿಸಲು ಮತ್ತು ಇಂಧನ-ದಕ್ಷತಾ ಪ್ರಮಾಣಗಳನ್ನು ದ್ವಿಗುಣಗೊಳಿಸಲು ನಾವು ಒಪ್ಪಿಕೊಂಡಿದ್ದೇವೆ. ಈ ಗುರಿಯನ್ನು ಸಾಧಿಸಲು, ಅಭಿವೃದ್ಧಿ ಹೊಂದಿದ ದೇಶಗಳು ಕೈಗೆಟುಕುವ ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನವನ್ನು ಸಮಯಕ್ಕೆ ಅನುಗುಣವಾಗಿ ಒದಗಿಸುವ ಬದ್ಧತೆಗಳನ್ನು ಪೂರೈಸಬೇಕಾಗುತ್ತದೆ.
ಸ್ನೇಹಿತರೇ,
ಹವಾಮಾನ ಬದಲಾವಣೆ ಮತ್ತು ಇತರ ಸವಾಲುಗಳಿಂದಾಗಿ, ನಮ್ಮ ಕೃಷಿ ವಲಯ ಮತ್ತು ಆಹಾರ ಭದ್ರತೆಗೆ ಬೆದರಿಕೆ ಹೆಚ್ಚು ತೀವ್ರವಾಗುತ್ತಿದೆ. ಅನೇಕ ದೇಶಗಳಲ್ಲಿ, ರಸಗೊಬ್ಬರಗಳು, ತಂತ್ರಜ್ಞಾನ, ಸಾಲ, ವಿಮೆ ಮತ್ತು ಮಾರುಕಟ್ಟೆಗಳನ್ನು ಪ್ರವೇಶಿಸುವಲ್ಲಿ ರೈತರಿಗೆ ಅಡ್ಡಿಗಳು –ತೊಂದರೆಗಳು ಹೆಚ್ಚುತ್ತಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ಭಾರತ ತನ್ನದೇ ಆದ ಪ್ರಯತ್ನಗಳನ್ನು ಮಾಡುತ್ತಿದೆ.
ಭಾರತದಲ್ಲಿ, ನಾವು ವಿಶ್ವದ ಅತಿದೊಡ್ಡ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ ಬೆಂಬಲ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ನಾವು ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಕಾರ್ಯಕ್ರಮ ಮತ್ತು ಅತಿದೊಡ್ಡ ಬೆಳೆ ವಿಮಾ ಯೋಜನೆಯನ್ನು ಸಹ ನಡೆಸುತ್ತಿದ್ದೇವೆ. ಪೌಷ್ಟಿಕಾಂಶ ಮತ್ತು ಪರಿಸರ ಎರಡಕ್ಕೂ ಸೂಪರ್ಫುಡ್ಗಳಾದ ಶ್ರೀ ಅನ್ನ ಅಥವಾ ಸಿರಿ ಧಾನ್ಯಗಳಿಗೆ ನಾವು ಒತ್ತು ನೀಡುತ್ತಿದ್ದೇವೆ.
ದೆಹಲಿ ಜಿ20 ಸಮಯದಲ್ಲಿ, ಈ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಾವು ಡೆಕ್ಕನ್ ತತ್ವಗಳನ್ನು ಒಪ್ಪಿಕೊಂಡಿದ್ದೇವೆ. ಈಗ, ಈ ತತ್ವಗಳ ಆಧಾರದ ಮೇಲೆ, ನಾವು ಜಿ20 ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಬೇಕು.
ಸ್ನೇಹಿತರೇ,
ಸ್ಥಿತಿಸ್ಥಾಪಕತ್ವವನ್ನು ಆಹಾರ ದಾಸ್ತಾನು ಮಾಡುವ ಮೂಲಕ ಅಥವಾ ಸ್ಥಾಗಿತ್ಯದಿಂದ ನಿರ್ಮಿಸಲಾಗದು.
ಪೌಷ್ಠಿಕಾಂಶ, ಸಾರ್ವಜನಿಕ ಆರೋಗ್ಯ, ಸುಸ್ಥಿರ ಕೃಷಿ ಮತ್ತು ವಿಪತ್ತು ಸಿದ್ಧತೆಯನ್ನು ಜೋಡಿಸುವ ಮೂಲಕ ಜಾಗತಿಕ ಭದ್ರತೆಯನ್ನು ಬಲಪಡಿಸುವ ಸಮಗ್ರ ತಂತ್ರಗಳನ್ನು ಜಿ20 ಉತ್ತೇಜಿಸಬೇಕು.
ತುಂಬಾ ಧನ್ಯವಾದಗಳು.
ಘೋಷಣೆ: ಇದು ಪ್ರಧಾನಮಂತ್ರಿ ಅವರ ಹೇಳಿಕೆಯ ಸರಿಸುಮಾರಾದ ಅನುವಾದವಾಗಿದೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.
****
During the second session at the G20 Summit in Johannesburg, PM @narendramodi highlighted India's proposal of the G20 Open Satellite Data Partnership. It aims to make satellite data more accessible and interoperable, especially to support the Global South with space-based data. pic.twitter.com/TSQH8WB8aj
— PMO India (@PMOIndia) November 22, 2025
In Johannesburg, during the second G20 Summit session, PM @narendramodi proposed the G20 Critical Minerals Circularity Initiative. It aims to strengthen clean energy transitions by boosting recycling, easing supply chain pressures and advancing joint research on critical… pic.twitter.com/pRhmPyk2sT
— PMO India (@PMOIndia) November 22, 2025
The second session at the G20 Summit in Johannesburg focussed on building a resilient world in the face of disasters, climate change and ensuring energy transitions that are just as well as robust food systems. India has been actively working on all these fronts, building a… pic.twitter.com/Iqvh81CxUj
— Narendra Modi (@narendramodi) November 22, 2025
India is fully committed to sustainability and clean energy, which is why we propose a G20 Critical Minerals Circularity Initiative to promote recycling, urban mining, second-life batteries and related innovations.
— Narendra Modi (@narendramodi) November 22, 2025
One of the most adverse effects of climate change is on our agriculture sector, thus impacting food security. In this regard, highlighted how India is addressing these challenges through the world’s largest food security and nutrition support programme, the world’s largest health…
— Narendra Modi (@narendramodi) November 22, 2025