Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದುರ್ಬಾನ್ನ ಮೇಯರ್ ಆತಿಥ್ಯ ಸಮಾರಂಭದಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ ( 09 ಜುಲೈ , 2016)

ದುರ್ಬಾನ್ನ ಮೇಯರ್ ಆತಿಥ್ಯ ಸಮಾರಂಭದಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ ( 09 ಜುಲೈ , 2016)

ದುರ್ಬಾನ್ನ ಮೇಯರ್ ಆತಿಥ್ಯ ಸಮಾರಂಭದಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ ( 09 ಜುಲೈ , 2016)

ದುರ್ಬಾನ್ನ ಮೇಯರ್ ಆತಿಥ್ಯ ಸಮಾರಂಭದಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣ ( 09 ಜುಲೈ , 2016)


ಝುಲು ರಾಷ್ಟ್ರದ ಗೌರವಾನ್ವಿತ ದೊರೆಯವರೇ
ರಾಜರಾದ ಶ್ರೀ ಜ್ವೆಲಿತಿನಿಕ ಬೆಕುಝುಲು
ಪ್ರಧಾನಮಂತ್ರಿಗಳಾದ ಶ್ರೀ ಕ್ವಾಝುಲು ನತಾ ಪ್ರೋಯಿನ್ಸ್ರವರೇ
ಇಥೇಕ್ವಿನಿ ಮಹಾನಗರ ಪಾಲಿಕೆಯ ಗೌರವಾನ್ವಿತ ಮೇಯರ್ ರವರೇ
ಗೌರವಾನ್ವಿತ ಗಣ್ಯರೇ, ಸೋದರ ಮತ್ತು ಸೋದರಿಯರೇ

ನಮಸ್ತೆ, ವಣಕ್ಕಂ
ಸ್ಯಾನಿಬೋನಾನಿ

ಈ ಸುಂದರವಾದ ನಗರಕ್ಕೆ ನನ್ನನ್ನು ಸ್ವಾಗತಿಸಿರುವುದಕ್ಕೆ ನಾನು ನಿಮಗೆ ಧನ್ಯವಾದಗಳನ್ನು ಹೇಳುತ್ತೇನೆ. ದಕ್ಷಿಣ ಆಫ್ರಿಕಾದಲ್ಲಿ ಇದು ನನ್ನ ಎರಡನೇ ದಿನ. ಕ್ವಾಝುಲು ನತಾಲ್ನಲ್ಲಿರುವುದಂತೂ ನನಗೆ ಅತ್ಯಂತ ಉತ್ಸಾಹದ ಕ್ಷಣ. ಇದು ಝುಲು ಸಾಮ್ರಾಟರ ಪವಿತ್ರ ಭೂಮಿ. ಆಲ್ಬರ್ಟ್ ಲುತುಲಿ ನೆಲೆಸಿದ್ದ ಭೂಮಿ ಇದು. ಗಾಂಧೀಜಿಯವರು ಮಹಾತ್ಮರಾಗಿ ಪರಿವರ್ತನೆಯಾದ ದಿವ್ಯ ಭೂಮಿಯೂ ಇದುವೇ..

ಭಾರತವು ಇದೆಲ್ಲವನ್ನೂ ಪೋಷಿಸಿದ ನೆಲವೂ ಇದುವೇ:
ಬಲಿಷ್ಠವಾದ ಐತಿಹಾಸಿಕ ಕೊಂಡಿ
ಸಂಸ್ಕøತಿಯ ಆಳವಾದ ಬಂಧಗಳು
ಚೇತೋಹಾರಿ ಆರ್ಥಿಕ ಒಡಂಬಡಿಕೆಗಳು ಮತ್ತು
ಬಲಿಷ್ಠವಾದ ಕ್ರೀಡಾ ಸಂಪರ್ಕಗಳು

ಹೀಗೆ ಈ ರೋಮಾಂಚಕಾರಿ ವೈವಿಧ್ಯತೆಯುಳ್ಳ ಸುಂದರ ದೇಶದ ಹೆಗ್ಗುರುತುಗಳಾಗಿವೆ. ಮತ್ತು ಯಾವುದೇ ನಗರಿಯು ದರ್ಬಾನ್ ಹಾಗೂ ಕ್ವಾಝುಲು ನತಾಲ್ ನಗರಕ್ಕಿಂತಲೂ ವೈವಿಧ್ಯಪೂರ್ಣವಾಗಿ ಯಾವುದೇ ನಗರಿಯು ಇದನ್ನು ಆಚರಿಸಿಕೊಳ್ಳುವುದಿಲ್ಲ. ಇದು ಬಹುತ್ವದ ಸಂಭ್ರಮವಾಗಿದೆ.
-ಉಪಭಾಷೆಗಳು ಮತ್ತು ಭಾಷೆಗಳು
– ನಂಬಿಕೆಯ ಬಹುವಿಧಾನಗಳ ಮೇಲೆ ವಿಶ್ವಾಸ
– ಸಾಂಸ್ಕøತಿಕ ಸಂಪ್ರದಾಯ
ಇವು ಈ ನಗರಿಯ ಆಂತರಿಕ ಅಂಗವೇ ಆಗಿದೆ.

ಒಂದು ಬದಿಯಲ್ಲಿ ಹಿಂದೂ ಮಹಾಸಾಗರದ ಬಿಸಿಯಾದ ನೀರು, ಇನ್ನೊಂದು ಬದಿಯಲ್ಲಿ ಡ್ರಾಕೆನ್ಸ್ಬರ್ಗ್ ಪರ್ವತ ಪ್ರದೇಶ, ಇದರ ನಡುವೆಯೂ ನಿಮ್ಮ ವೈವಿಧ್ಯತೆಗೆ ಈ ಪರಿಸರವು ಸಂತೋಷದಾಯಕವಾಗಿದೆ. ನಿಮ್ಮ ಬಹುತ್ವವನ್ನು ಕಾಪಾಡಿಕೊಳ್ಳು ಮೂಲಕ ಶ್ರೀ ನಲ್ಸನ್ ಮಂಡೇಲಾ ಅವರು ಕಂಡಿದ್ದ ಕಾಮನಬಿಟ್ಟಿನ ರಾಷ್ಟ್ರದ ಕನಸನ್ನು ಉಳಿಸಿಕೊಂಡು ಸುಧಾರಿಸಲು ಸಾಧ್ಯವಾಗಿಸುತ್ತಿದೆ. ನೀವು ನನಗೆ ತೋರಿದ ಗೌರವವು, ದರ್ಬಾನ್ ನಗರಿಯ ಜನರು ನೀಡಿರುವ ಸ್ವಾಗತವು ನನಗೊಂದು ಸವಲತ್ತಿನಂತಿರಬಹುದು. 

ನೀವು ನನ್ನನ್ನು ಕೇವಲ ಗೌರವಿಸಿಲ್ಲ. ನೀವು ನನ್ನ ದೇಶದ 1.25 ಕೋಟಿ ಜನರನ್ನು ಗುರುತಿಸಿದ್ದೀರಿ. ಇದು ಏಕೆಂದರೆ 1860ರಲ್ಲೇ ಪ್ರಥಮವಾಗಿ ಭಾರತೀಯರು ಇಲ್ಲಿಗೆ ಬಂದಿದ್ದರು. 1860ರ ನವೆಂಬರ್ 16ರಂದು 342 ಭಾರತೀಯರನ್ನು ಹೊತ್ತು ಬಂದಿದ್ದ ಟ್ರುರೋ ಹಡಗು ನತಾನ್ ಬಂದರನ್ನು ತಲುಪಿತ್ತು. ಆ ಹಡಗಿನಿಂದ ಕೆಳಗಿಳಿದ ನಾಲ್ವರು ದವರಮ್, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಅವರ ಜತೆಗಿದ್ದರು. 

ಇವತ್ತು, ಒಂದೂವರೆ ಶತಮಾನಗಳ ನಂತರ ದರ್ಬಾನ್ ನಗರವು ಭಾರತದ ಹೊರಗೆ ಭಾರತೀಯರು ಇರುವ ದೊಡ್ಡ ನಗರಿ ಎನಿಸಿಕೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಮೂಲದವರಿರುವ ಹೆಚ್ಚು ಜನಸಂಖ್ಯೆಯ ನಗರ ಇದಾಗಿದೆ. ಭಾರತದ ಆರಂಭಿಕ ಪೀಳಿಗೆಯು ವರ್ಣಭೇದ ನೀತಿ ಮತ್ತು ವಸಾಹತುಶಾಹಿ ಆಡಳಿತದಿಂದ ಬಾಧಿತವಾಗಿತ್ತು ಎನ್ನುವುದು ಎಲ್ಲರಿಗೂ ತಿಳಿದಿರುವುದೇ. ಆದರೆ ಇದೆಲ್ಲಾ ಅಡ್ಡಿಗಳ ನಡುವೆಯೂ ಭಾರತೀಯ ಮೂಲದವರು ತಮ್ಮ ಸಂಸ್ಕøತಿ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡಿದ್ದಾರೆ.

ಮತ್ತು ಇವತ್ತು, ಈ ದೇಶದ ಹೆಮ್ಮೆಯ, ಯಶಸ್ವಿ ಮತ್ತು ನಿಷ್ಟ ನಾಗರಿಕರಾಗಿ ಬದುಕುತ್ತಿದ್ದಾರೆ. ಅವರು ತಮ್ಮ ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. 

– ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನೆಗಳಲ್ಲಿ
– ಉದ್ಯಮಶೀಲರು ಮತ್ತು ವ್ಯವಹಾರದ ನಾಯಕರಂತೆ
– ವಕೀಲರು ಮತ್ತು ನ್ಯಾಯಾದೀಶರಂತೆ
– ಬ್ಯಾಂಕರ್ಗಳಾಗಿ, ವೈದ್ಯರಾಗಿ ಮತ್ತು ಎಂಜಿನಿಯರ್ಗಳಾಗಿ
ಆದರೆ, ಅವರು ತಮ್ಮಷ್ಟಕ್ಕೆ ತಾವೇ ಬದುಕುತ್ತಿಲ್ಲ.

ತಾವೇ ಮತ್ತು ಸಾಮುದಾಯಿ ಸಂಘಗಳ ಮೂಲಕ ಬಡವರನ್ನು ಮತ್ತು ದುರ್ಬಲರು, ಸಂಕಷ್ಟಕ್ಕೆ ಸಿಲುಕಿದ ಮತ್ತು ಹಿರಿಯ ಜೀವಗಳನ್ನು ಮೇಲೆತ್ತುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರು ವಯೋವೃದ್ಧಯ ಆಶ್ರಮಗಳನ್ನು ಮುನ್ನಡೆಸುತ್ತಿದ್ದಾರೆ. ಅನಾರೋಗ್ಯಪೀಡಿತರಿಗೆ ಕೇಂದ್ರಗಳನ್ನು ನಿರ್ಮಿಸಿದ್ದಾರೆ. 
 
ಏಯ್ಡ್ಸ್ ಮತ್ತು ಕ್ಯಾನ್ಸರ್ ಪೀಡಿತರು ಮತ್ತು ಅನಾಥಾಶ್ರಮಗಳನ್ನು ಆರಂಭಿಸಿದ್ದಾರೆ. ಸ್ನೇಹಿತರೇ, ಜನರಿಂದ ಜನರನ್ನು ಸಂಪರ್ಕಿಸುವ ನಮ್ಮ ಇತಿಹಾಸವು ಆಧುನಿಕ ಯುಗದ ನಮ್ಮ ಪಾಲುದಾರಿಕೆಯನ್ನು ಗಟ್ಟಿಗೊಳಿಸುತ್ತದೆ. ಇವತ್ತು, ಭಾರತವು ಆರ್ಥಿಕ ಬದಲಾವಣೆಗೆ ಒಳಗಾಗಿದೆ. ಮತ್ತು ದಕ್ಷಿಣ ಆಫ್ರಿಕಾವು ಆಫ್ರಿಕಾ ಖಂಡದ ಒಂದು ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಇದರ ಜತೆಗೆ ನಮ್ಮ ವ್ಯಾಪಾರಿ ಮತ್ತು ಹೂಡಿಕೆ ಪಾಲುದಾರಿಕೆಯು ಈಗಾಗಲೇ ಗಣನೀಯವಾಗಿದೆ.

ನಿನ್ನೆ ಪ್ರಿಟೋರಿಯಾದಲ್ಲಿ, ಅಧ್ಯಕ್ಷರಾದ ಶ್ರೀ ಝುಮಾ ಮತ್ತು ನಾನು ಸಾಮಾಜಿಕ-ಆರ್ಥಿಕ 
– ವ್ಯಾಪಾರ ಮತ್ತು ಹೂಡಿಕೆ
– ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅಭಿವೃದ್ಧಿ
– ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಮತ್ತು
– ಸಾಂಸ್ಥಿಕ ರಚನೆಯ ಸಾಮಥ್ರ್ಯ
ಕ್ಷೇತ್ರಗಳಲ್ಲಿ ರಚನಾತ್ಮಕ ಒಪ್ಪಂದಗಳನ್ನು ಮಾಡಿಕೊಳ್ಳಲು ಒಪ್ಪಿದ್ದೇವೆ.

ಕ್ವಾಜುಲು ನತಾಲ್ಗೆ ಇವುಗಳಲ್ಲಿ ಹಲವು ದೊಡ್ಡ ಮಟ್ಟದ ಬಲ ಎನಿಸಿವೆ. ದರ್ಬಾನ್ ಜತೆಗಿನ ನಮ್ಮ ಸಾಂಪ್ರದಾಯಿಕ ಒಪ್ಪಂದಗಳನ್ನು ಪುನರ್ವರ್ಧಿಸುತ್ತಿದೆ. ನಾವು ಸದೃಢವಾದ ಭದ್ರತೆ ಮತ್ತು ರಕ್ಷಣಾ ಸಂಬಂಧಗಳಲ್ಲಿ ಒಟ್ಟಾಗಿ ಕೆಲಸ ಮಾಡಲು ಒಪ್ಪಿದ್ದೇವೆ. ಸ್ನೇಹಿತರೇ, ದಕ್ಷಿಣ ಆಫ್ರಿಕಾದವರಾಗಿ, ವಿಶೇಷವಾಗಿ ದರ್ಬಾನ್ನಲ್ಲಿ. ನಾನು ಕ್ರಿಕೆಟ್ ಬಗ್ಗೆ ಮಾತನಾಡದೇ ಹೋದರೆ ಅದು ನೋಬಾಲ್ ಇದ್ದಂತೆ. ನಮ್ಮ ಸಮಾಜಗಳಲ್ಲಿ ಈ ಆಟದ ಭಾವನೆ ಮತ್ತು ಪ್ರೀತಿಯು ವಿಸ್ತಾರ ಮತ್ತು ಆಳವಾಗಿ ಹಾಸುಹೊಕ್ಕಾಗಿದೆ.  ನಮ್ಮ ಸಂಬಂಧದ ಪ್ರಮುಖವಾಗಿ ಕ್ರಿಕೆಟ್ ಗುರುತಿಸಿಕೊಂಡಿದೆ. ಕಿಂಗ್ಸ್ಮೇಡ್ ಕ್ರೀಡಾಂಗಣವು ಅತ್ಯಂತ ಸ್ಮರಣೀಯ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ಕೆಲವು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆಯೇ ನಡೆದಿವೆ.

ಸ್ನೇಹಿತರೇ,
ಕೊನೆಯಲ್ಲಿ ನನಗೆ ಈ ಮಾತನ್ನು ಹೇಳಲು ಸಂತಸವಾಗುತ್ತದೆ, ನಮ್ಮ ಪರಸ್ಪರ ಅವಲಂಬನೆಯ ಪ್ರಪಂಚದಲ್ಲಿ ಭಾರತದ ಬೆಳವಣಿಗೆಯ ಕಥಾನಕವು ಒಂದು ಹೊಳಪಿನದ್ದಾಗಿದೆ. ಆದರೆ ಭಾರತದ ಆರ್ಥಿಕ ಸುಧಾರಣೆಗಳು ನಮ್ಮ ಸಮಾಜಕ್ಕಷ್ಟೇ ಅನುಕೂಲವಾಗುತ್ತಿಲ್ಲ. ನಮ್ಮ ಪಾಲುದಾರಿಕೆಯು ಆಫ್ರಿಕಾದ ಉನ್ನತಿಗೆ ಮತ್ತು ವಿಶೇಷವಾಗಿ ನಮ್ಮ ಸ್ನೇಹಿತರಾದ ದಕ್ಷಿಣ ಆಫ್ರಿಕಾದ ಒಳಿತಿಗೆ ಪೂರಕವಾಗಿದೆ. ನಾನು ಇವತ್ತು ಇದಕ್ಕೂ ಮೊದಲು ಫಿಯೋನಿಕ್ಸ್ ನಗರಕ್ಕೆ ಭೇಟಿ ನೀಡಿದ್ದೆ, ದಕ್ಷಿಣ ಆಫ್ರಿಕಾದಲ್ಲಿ ಉಳಿದುಕೊಂಡಿದ್ದ ಸಂದರ್ಭದಲ್ಲಿ ಫಿಯೋನಿಕ್ಸ್ ನಗರವು ಗಾಂಧೀಜಿಯವರ ವಾಸಸ್ಥಳವಾಗಿತ್ತು.  

ಅವರ ಸಾಕಷ್ಟು ಅನುಯಾಯಿಗಳು ಗಾಂಧಿಜಿಯವರ ವ್ಯಕ್ತಿತ್ವದಂತೆಯೇ ಇದ್ದಾರೆ. 21ನೇ ಶತಮಾನದಲ್ಲಿ ನಮ್ಮ ಸವಾಲುಗಳು ಬದಲಾಗಿವೆ. ಆದರೆ ಅಭಿವೃದ್ಧಿ ಆದ್ಯತೆಗಳು ಮಾತ್ರ ಒಂದೇ ರೀತಿಯಲ್ಲಿವೆ.  ಅದು ನನ್ನ ಪ್ರಯತ್ನವಾಗಿದೆ. ನಮ್ಮ ಸಮಾಜದಲ್ಲಿ ಅಗತ್ಯ ಇದ್ದವರು, ಅದರಲ್ಲೂ ವಿಶೇಷವಾಗಿ ಯುವಕರಿಗೆ ನಮ್ಮ ಬೆಳವಣಿಗೆ ಪಾಲುದಾರಿಕೆಯ ಲಾಭಗಳು ದೊರೆಯಬೇಕಿದೆ.

ಬನ್ನಿ, ನಾವು ಪರಸ್ಪರ ಪಾಲುದಾರರಾಗೋಣ ಮತ್ತು ಉಜ್ವಲ ಭವಿಷ್ಯಕ್ಕಾಗಿ ಅಮೂಲ್ಯವಾದ ಅವಕಾಶಗಳ ಲಾಭವನ್ನು ಪಡೆದುಕೊಳ್ಳೋಣ. 

ಈ ಅದ್ಭುತ ಸ್ವಾಗತ ಮತ್ತು ಸತ್ಕಾರಕ್ಕಾಗಿ ಮತ್ತೊಮ್ಮೆ ನಿಮಗೆಲ್ಲರಿಗೂ ಧನ್ಯವಾದಗಳು.

ಧನ್ಯವಾದಗಳು, ನಿಮಗೆಲ್ಲರಿಗೂ ಶುಭಕಾಮನೆಗಳು…