Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪರೋಪಕಾರಿ ಕಾರ್ಯಚಟುವಟಿಗಳ ಮತ್ತು ಇತರರ ಕಲ್ಯಾಣದ ಮಹತ್ವವನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಮಾನವ ಜೀವನದ ನಿಜವಾದ ಸಾರ್ಥಕತೆಯು ಇತರ ಜೀವಿಗಳ ಕಲ್ಯಾಣ ಮತ್ತು ಯೋಗಕ್ಷೇಮಕ್ಕಾಗಿ ನಿರಂತರವಾಗಿ ಶ್ರಮಿಸುವುದರಲ್ಲಿ ಅಡಗಿದೆ ಎಂದು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ. 

ಪ್ರಧಾನಮಂತ್ರಿ ಅವರು ಹಂಚಿಕೊಂಡಿರುವ ಸಂಸ್ಕೃತ ಸುಭಾಷಿತ –

“एतावज्जन्मसाफल्यं देहिनामिह देहिषु।
प्राणैरर्थैर्धिया वाचा श्रेय एवाचरेत्सदा॥”

ಈ ಜಗತ್ತಿನಲ್ಲಿ ಮಾನವ ಜೀವನದ ಅಂತಿಮ ಸಾರ್ಥಕತೆಯು ಒಬ್ಬರ ದೈಹಿಕ ಸಾಮರ್ಥ್ಯಗಳು, ಸಂಪತ್ತು, ಬುದ್ಧಿಶಕ್ತಿ ಮತ್ತು ಮಾತಿನ ಮೂಲಕ ಇತರ ಜೀವಿಗಳ ಕಡೆಗೆ ನಿರಂತರವಾಗಿ ದಾನಶೀಲತೆ ಮತ್ತು ಕಲ್ಯಾಣ-ಆಧಾರಿತ ಕ್ರಿಯಾತ್ಮಕ ಕಾರ್ಯಚಟುವಟಿಕೆಗಳನ್ನು ಮಾಡುವುದರಲ್ಲಿ ಅಡಗಿದೆ ಎಂದು ಸುಭಾಷಿತವು ತಿಳಿಸುತ್ತದೆ.

ಎಕ್ಸ್ ತಾಣದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಬರೆದಿದ್ದಾರೆ;

“एतावज्जन्मसाफल्यं देहिनामिह देहिषु।

प्राणैरर्थैर्धिया वाचा श्रेय एवाचरेत्सदा॥”
 

 

*****