ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ಕೈಗೊಂಡರು; ಪುರ್ನಿಯಾದಲ್ಲಿ ರಾಜ್ಯದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಶ್ರೀ ಸುಶೀಲ್ ಮೋದಿ ಹಾಗೂ ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಪ್ರಧಾನಮಂತ್ರಿ ಪರಿಹಾರ, ಪುನರ್ವಸತಿ ಮತ್ತು ಪರಿಹಾರ ಕ್ರಮಗಳ ಬಗ್ಗೆ ಸವಿವರವಾದ ಮಾಹಿತಿ ಪಡೆದರು. ತತ್ ಕ್ಷಣದ ಪರಿಹಾರವಾಗಿ 500 ಕೋಟಿ ರೂಪಾಯಿಗಳನ್ನು ಪ್ರಕಟಿಸಿದ ಪ್ರಧಾನಮಂತ್ರಿಯವರು, ಎಲ್ಲ ಸಾಧ್ಯ ನೆರವು ಒದಗಿಸುವ ಭರವಸೆಯನ್ನೂ ನೀಡಿದರು. ಶೀಘ್ರವೇ ಕೇಂದ್ರದ ತಂಡ ರಾಜ್ಯಕ್ಕೆ ಭೇಟಿ ನೀಡಲಿದ್ದು, ಆಗಿರುವ ಹಾನಿ ಮತ್ತು ಪರಿಹಾರದ ಅಧ್ಯಯನ ನಡೆಸಲಿದೆ ಎಂದೂ ಪ್ರಧಾನಿ ತಿಳಿಸಿದರು. ರೈತರು ಸಲ್ಲಿಸಿರುವ ಬೆಳೆ ವಿಮೆ ಪರಿಹಾರದ ಕ್ಲೇಮುಗಳನ್ನು ಇತ್ಯರ್ಥಪಡಿಸಲು ಕೂಡಲೇ ತಮ್ಮ ವೀಕ್ಷಕರನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸುವಂತೆ ವಿಮಾ ಕಂಪನಿಗಳಿಗೆ ನಿರ್ದೇಶಿಸಿದ ಪ್ರಧಾನಮಂತ್ರಿಯವರು, ಆದಷ್ಟು ಬೇಗ ರೈತರಿಗೆ ಪರಿಹಾರ ನೀಡುವಂತೆ ಸೂಚಿಸಿದರು. ಪ್ರವಾಹದಿಂದ ಹಾನಿಗೊಳಗಾಗಿರುವ ರಸ್ತೆಗಳ ದುರಸ್ತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ರಸ್ತೆ ಮತ್ತು ಭೂ ಸಾರಿಗೆ ಸಚಿವಾಲಯಕ್ಕೆ ನಿರ್ದೇಶನ ನೀಡಿದರು. ಪ್ರವಾಹದಿಂದ ಹಾನಿಯಾಗಿರುವ ವಿದ್ಯುತ್ ಮೂಲಸೌಕರ್ಯ ಪುನರ್ ಸ್ಥಾಪನೆಗೆ ಕೇಂದ್ರ ಸರ್ಕಾರ ಎಲ್ಲ ಸಾಧ್ಯ ನೆರವು ಒದಗಿಸಲಿದೆ ಎಂದೂ ಹೇಳಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಆರ್ಥಿಕ ನೆರವು ಒದಗಿಸಲಾಗುವುದುಎಂದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಮಂತ್ರಿ ಶ್ರೀ ಶೇರ್ ಬಹಾದ್ದೂರ್ ದೇವೂಬಾ ಅವರು ಸಪ್ತಕೋಶಿ ಹೈ ಡ್ಯಾಂ ಯೋಜನೆ ಮತ್ತು ಸುನ್ ಕೋಶಿ ಸಂಗ್ರಹ ಮತ್ತು ತಿರುವು ಯೋಜನೆ ಕುರಿತಂತೆ ವಿಸ್ತಾರ ಯೋಜನಾ ವರದಿಯನ್ನು ಶೀಘ್ರ ಸಿದ್ಧಪಡಿಸಲು ಒಪ್ಪಿಗೆ ನೀಡಿದ್ದು, ಎರಡೂ ದೇಶಗಳು ನೀರು ನಿಲುಗಡೆ ಮತ್ತು ಪ್ರವಾಹ ನಿಯಂತ್ರಣ ಸಹಕಾರ ಹೆಚ್ಚಿಸಲೂ ಸಮ್ಮತಿಸಿದ್ದು, ಇದು ಇಡೀ ವಲಯದಲ್ಲಿ ಪ್ರವಾಹ ನಿಯಂತ್ರಣಕ್ಕೆ ಇದು ಉತ್ತೇಜನ ನೀಡಲಿದೆ.
AKT- 170250
Bihar CM Shri @NitishKumar, Deputy CM Shri @SushilModi, other dignitaries received PM @narendramodi, who came to review the flood situation. pic.twitter.com/5G4YxAXVFx
— PMO India (@PMOIndia) August 26, 2017
PM @narendramodi, CM @NitishKumar, Dy CM @SushilModi and top officials reviewing the flood situation in Bihar at a high level meeting. pic.twitter.com/8Qcxtk0sWC
— PMO India (@PMOIndia) August 26, 2017
PM @narendramodi undertook an aerial survey to take stock of the situation arising due to the floods in Bihar. pic.twitter.com/fl6ti3IWTO
— PMO India (@PMOIndia) August 26, 2017
PM @narendramodi and Bihar CM @NitishKumar take stock of the flood situation in Bihar during the aerial survey this morning. pic.twitter.com/qvFgG72pS6
— PMO India (@PMOIndia) August 26, 2017
प्रधानमंत्री नरेन्द्र मोदी ने आज बिहार के बाढ़ प्रभावित क्षेत्रों का हवाई सर्वेक्षण किया।
— PMO India (@PMOIndia) August 26, 2017
समीक्षा के पश्चात प्रधानमंत्री ने राज्य को हर संभव सहायता देने का आश्वासन दिया | उन्होंने 500 करोड़ रुपए की तुरंत सहायता की भी घोषणा की।
— PMO India (@PMOIndia) August 26, 2017
प्रधानमंत्री ने नुकसान के आकलन के लिए तुरंत ही एक central team भेजने का भी आश्वासन दिया है।
— PMO India (@PMOIndia) August 26, 2017
बाढ़ से प्रभावित सड़कों की मरम्मत के लिए सड़क एवं परिवहन मंत्रालय को उपयुक्त कार्रवाई करने का भी निर्देश दिया गया है।
— PMO India (@PMOIndia) August 26, 2017
बाढ़ से प्रभावित विद्युत् इंफ्रास्ट्रक्चर की शीघ्र बहाली के लिए भी केन्द्र, राज्य सरकार की हर संभव मदद करेगा |
— PMO India (@PMOIndia) August 26, 2017
प्रधान मंत्री राहत कोष से प्रत्येक मृतक के परिवार को 2 लाख रुपए एवं गंभीर रूप से घायल व्यक्ति को 50 हजार रुपए की दर से सहायता दी जाएगी।
— PMO India (@PMOIndia) August 26, 2017