Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ ಮಿಷನ್ ಲೈಫ್ ಹೇಗೆ ಕಾಲಾತೀತ ಸಂರಕ್ಷಣಾ ಪದ್ಧತಿಗಳನ್ನು ಪುನರುಜ್ಜೀವನಗೊಳಿಸುತ್ತಿದೆ ಎಂಬುದರ ಕುರಿತು ಲೇಖನ ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಭಾರತದ ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ತಮಿಳುನಾಡಿನ ಎರಿ ಟ್ಯಾಂಕ್ ವ್ಯವಸ್ಥೆಗಳಿಂದ ರಾಜಸ್ಥಾನದ ಜೋಹಾದ್‌ಗಳವರೆಗೆ ಕಾಲಾತೀತ ಸಂರಕ್ಷಣಾ ಪದ್ಧತಿಗಳನ್ನು ಹೇಗೆ ಪುನರುಜ್ಜೀವನಗೊಳಿಸುತ್ತಿದೆ ಮತ್ತು ಭೂಮಿಯ ಸೇವೆಯ ಪ್ರಜ್ಞಾಪೂರ್ವಕ ಕಾರ್ಯಗಳಾಗಿ ಹೇಗೆ ಮರುರೂಪಿಸಲಾಗುತ್ತಿದೆ ಎಂಬುದರ ಕುರಿತು ಬರೆದಿರುವ ಲೇಖನವನ್ನು ಇಂದು ಹಂಚಿಕೊಂಡಿದ್ದಾರೆ..ಅವರು “ನಿಜವಾದ ಸುಸ್ಥಿರತೆಯು ಮಾತುಕತೆಗಳಿಂದಲ್ಲ, ಬದಲಿಗೆ ಪೋಷಣೆಯೊಂದಿಗೆ ಆರಂಭವಾಗುತ್ತದೆ ಎಂಬ ಭಾರತದ ಸಂದೇಶವನ್ನು ಅವರು ಉಲ್ಲೇಖಿಸಿದ್ದಾರೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಭೂಪೇಂದ್ರ ಯಾದವ್ ಅವರ X ಖಾತೆಗೆ ಪ್ರತಿಕ್ರಿಯಿಸಿರುವ ಶ್ರೀ ನರೇಂದ್ರ ಮೋದಿ ಹೀಗೆ ಹೇಳಿದ್ದಾರೆ.

“ಓದಲೇಬೇಕಾದ ಈ ಲೇಖನದಲ್ಲಿ, ಕೇಂದ್ರ ಸಚಿವರಾದ ಶ್ರೀ @byadavbjp ಅವರು ಭಾರತದ ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ತಮಿಳುನಾಡಿನ ಎರಿ ಟ್ಯಾಂಕ್ ವ್ಯವಸ್ಥೆಗಳಿಂದ ರಾಜಸ್ಥಾನದ ಜೋಹಾದ್‌ಗಳವರೆಗೆ ಕಾಲಾತೀತ ಸಂರಕ್ಷಣಾ ಪದ್ಧತಿಗಳನ್ನು ಪುನರುಜ್ಜೀವನಗೊಳಿಸುತ್ತದೆ ಹಾಗೂ ಅವುಗಳನ್ನು ಹೇಗೆ ಭೂ ಸೇವೆಯ ಪ್ರಜ್ಞಾಪೂರ್ವಕ ಕಾರ್ಯಗಳಾಗಿ ಮರುರೂಪಿಸುತ್ತದೆ ಎಂದು ಬರೆದಿದ್ದಾರೆ. 

ನಿಜವಾದ ಸುಸ್ಥಿರತೆಯು ಮಾತುಕತೆಗಳಿಂದಲ್ಲ, ಬದಲಿಗೆ ಪೋಷಣೆಯೊಂದಿಗೆ ಆರಂಭವಾಗುತ್ತದೆ ಎಂಬ ಭಾರತದ ಸಂದೇಶವನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.’’

 

*****