Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಧ್ಯಪ್ರದೇಶದ ಅಮರಕಂಠಕ್ ನಲ್ಲಿ ನರ್ಮದಾ ಸೇವಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಮಧ್ಯಪ್ರದೇಶದಲ್ಲಿ ನಾಳೆ ಮಧ್ಯಪ್ರದೇಶದಲ್ಲಿ ನರ್ಮದಾ ಸೇವಾ ಯಾತ್ರೆಯ ಸಮಾರೋಪದ ಅಂಗವಾಗಿ ಅಮರಕಂಠಕ್ ನಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

“ನರ್ಮದಾ ಸೇವಾ ಯಾತ್ರೆಯ ಸಮಾರೋಪದ ಅಂಗವಾಗಿ ಮಧ್ಯಪ್ರದೇಶದ ಅಮರಕಂಠಕ್ ನಲ್ಲಿ ನಾಳೆ ಮಧ್ಯಾಹ್ನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಉತ್ಸುಕನಾಗಿದ್ದೇನೆ.

ನರ್ಮದಾ ಸೇವಾ ಯಾತ್ರೆ, ನರ್ಮದಾ ನದಿ ಸಂರಕ್ಷಿಸಲು ಮತ್ತು ಪರಿಸರವನ್ನು ಉಳಿಸುವ ದೊಡ್ಡ ಸಂದೇಶ ಸಾರುವ ಒಂದು ಅದ್ಭುತ ಜನಾಂದೋಲನವಾಗಿತ್ತು.

ನಾಳೆ ಮಧ್ಯಪ್ರದೇಶದಲ್ಲಿ, ನಾನು ನರ್ಮದಾ ಸೇವಾ ಅಭಿಯಾನಕ್ಕೆ ಚಾಲನೆ ನೀಡಲಿದ್ದೇನೆ. ಇದು ಖಂಡಿತವಾಗಿಯೂ ಮಧ್ಯಪ್ರದೇಶದ ಪರಿಸರದ ಮೇಲೆ ಖಂಡಿತವಾಗಿ ಪ್ರಮುಖ ಪರಿಣಾಮ ಬೀರುತ್ತದೆ.

ನೀವು ನಾಳೆ ನರ್ಮದಾ ಸೇವಾ ಯಾತ್ರೆ ಕಾರ್ಯಕ್ರಮವನ್ನು ನೇರವಾಗಿ ನಿಮ್ಮ ಮೊಬೈಲ್ ನಲ್ಲಿಯೇ https://t.co/TYuxNNJfIf”, ನಲ್ಲಿ ನೋಡಬಹುದು ಎಂದು ಪ್ರಧಾನಿ ತಿಳಿಸಿದ್ದಾರೆ.

****

AKT/AK