ಪಿಎಂಇಂಡಿಯಾ
ಗುಣಪಡಿಸಬಹುದಾದ ಕಾಯಿಲೆ ಕುಷ್ಟರೋಗವನ್ನು ಭಾರತದಿಂದ ಸಂಪೂರ್ಣ ನಿರ್ಮೂಲನೆ ಮಾಡಲು ಸಂಘಟಿತ ಪ್ರಯತ್ನ ಮಾಡುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕರೆ ನೀಡಿದ್ದಾರೆ.
ಕುಷ್ಟರೋಗ ವಿರೋಧಿ ದಿನದ ಸಂದರ್ಭದಲ್ಲಿ ನೀಡಿರುವ ಸಂದೇಶದಲ್ಲಿ ಪ್ರಧಾನಮಂತ್ರಿಯವರು, ಕುಷ್ಟ ರೋಗದಿಂದ ಗುಣಮುಖರಾಗಿರುವ ಜನರನ್ನು ಸಾಮಾಜಿಕ-ಆರ್ಥಿಕವಾಗಿ ಮೇಲೆತ್ತಲು ಮತ್ತು ಅವರ ಕೊಡುಗೆಯನ್ನು ದೇಶ ನಿರ್ಮಾಣಕ್ಕೆ ಬಳಸಲು ನಾವೆಲ್ಲ ಒಗ್ಗೂಡಿ ಶ್ರಮಿಸಬೇಕು ಎಂದು ತಿಳಿಸಿದ್ದಾರೆ. ಮಹಾತ್ಮಾಗಾಂಧಿ ಅವರು ಕನಸು ಕಂಡಿದ್ದಂತೆ ನಮ್ಮ ದೇಶದ ಈ ನಾಗರಿಕರು ಗೌರವಯುತ ಬಾಳ್ವೆ ನಡೆಸಲು ನಾವು ಶಕ್ತಿ ಮೀರಿ ಶ್ರಮಿಸಬೇಕು ಎಂದು ಹೇಳಿದ್ದಾರೆ.
ಕುಷ್ಟುರೋಗ ಪೀಡಿತರಾದ ಜನರ ಬಗ್ಗೆ ಮಹಾತ್ಮಾ ಗಾಂಧಿ ಅವರು ನಿರಂತರ ಕಾಳಜಿ ಹೊಂದಿದ್ದರು ಎಂಬುದನ್ನು ಪ್ರಧಾನಿ ಸ್ಮರಿಸಿದ್ದಾರೆ. ಅವರ ದೃಷ್ಟಿಕೋನ ಕೇವಲ ಅವರಿಗೆ ಚಿಕಿತ್ಸೆ ನೀಡುವುದಷ್ಟೇ ಆಗಿರಲಿಲ್ಲ, ಜೊತೆಗೆ ನಮ್ಮ ಸಮಾಜದ ಮುಖ್ಯವಾಹಿನಿಗೆ ಸೇರಿಸುವುದೂ ಆಗಿತ್ತು ಎಂದೂ ತಿಳಿಸಿದ್ದಾರೆ.
ಈ ದೇಶದಿಂದ ಕುಷ್ಟರೋಗವನ್ನು ನಿರ್ಮೂಲನೆ ಮಾಡಲು ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮದಡಿ ಪ್ರಯತ್ನ ಸಾಗಿದ್ದು, ಇದು ಮಹಾತ್ಮಾ ಗಾಂಧಿ ಅವರ ದೂರದೃಷ್ಟಿಗೆ ಸಲ್ಲಿಸುವ ಗೌರವವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಈ ಕಾರ್ಯಕ್ರಮವನ್ನು 1955ರಲ್ಲಿಯೇ ಆರಂಭಿಸಲಾಗಿದೆ ಎಂಬುದನ್ನು ಅವರು ಸ್ಮರಿಸಿದ್ದಾರೆ. ಕುಷ್ಟರೋಗದ ನಿರ್ಮೂಲನೆ ಗುರಿಯನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆಯಂತೆ ಮಾಡುವುದಾಗಿ ಉಲ್ಲೇಖಿಸಿದ್ದಾರೆ. 2005ರಲ್ಲಿ ಪ್ರತಿ 10 ಸಾವಿರ ಜನಸಂಖ್ಯೆಯಲ್ಲಿ ಒಬ್ಬರಿಗಿಂತ ಕಡಿಮೆ ಮಟ್ಟವನ್ನು ಸಾಧಿಸಲಾಗಿದೆ. ಆದಾಗ್ಯೂ, ಪ್ರಕರಣದ ಪತ್ತೆ ನಂತರ ಅಲ್ಪ ಇಳಿಕೆಯಾಗಿದೆ. ರೋಗನಿರ್ಣಯದ ಸಮಯದಲ್ಲಿ ಗೋಚರದ ವಿರೂಪ ಹೆಚ್ಚಾಗಿದೆ. ಒಂದು ದೇಶವಾಗಿ , ಕೊನೆಯ ಘಟ್ಟ ಮುಟ್ಟಲು ನಾವು ಯಾವುದೇ ಅವಕಾಶ ಬಿಡಬಾರದು, ಜೊತೆಗೆ ಈ ರೋಗದೊಂದಿಗೆ ಅಂಟಿಕೊಂಡಿರುವ ಸಾಮಾಜಿಕ ಕಳಂಕವನ್ನು ನಿರ್ಮೂಲನೆ ಮಾಡಲು ಒಗ್ಗೂಡಿ ದುಡಿಯಬೇಕು ಎಂದು ಹೇಳಿದ್ದಾರೆ.
ಸಮುದಾಯದಲ್ಲಿ ಅದರಲ್ಲೂ ಕಷ್ಟಪಟ್ಟು ತಲುಪಬೇಕಾದ ಪ್ರದೇಶಗಳಲ್ಲಿ ಕೂಡ ಕುಷ್ಟರೋಗದ ಪ್ರಕರಣಗಳನ್ನು ಆರಂಭದಲ್ಲಿಯೇ ಪತ್ತೆ ಮಾಡಲು ಮೂರು ಹಂತದ ಕಾರ್ಯತಂತ್ರವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 2016ರಲ್ಲಿ ಜಾರಿಗೊಳಿಸಲಾಗಿದೆ ಎಂಬುದನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದ್ದಾರೆ. 2016ರಲ್ಲಿ ಕುಷ್ಟರೋಗ ಪತ್ತೆ ವಿಶೇಷ ಅಭಿಯಾನವನ್ನು ನಡೆಸಲಾಯಿತು. ಇದರ ಫಲವಾಗಿ 32 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟವು ಮತ್ತು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಜೊತೆಗೆ ಈ ರೋಗಿಗಳೊಂದಿಗೆ ಆಪ್ತ ಸಂಪರ್ಕವನ್ನು ಹೊಂದಿದ್ದ ವ್ಯಕ್ತಿಗಳಲ್ಲೂ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ಕಡಿಮೆ ಮಾಡಲು ಔಷಧ ನೀಡಲಾಗಿದೆ ಎಂದು ತಿಳಿಸಿದ್ದಾರೆ.
AKT/SH
PM has shared a message on Anti Leprosy Day. He called for a collective effort to completely eliminate leprosy from India.
— PMO India (@PMOIndia) January 29, 2017
Mahatma Gandhi had an enduring concern for people affected with leprosy: PM @narendramodi
— PMO India (@PMOIndia) January 29, 2017
Mahatma Gandhi's vision was not only to treat them (people with leprosy) but to bring into the mainstream: PM @narendramodi
— PMO India (@PMOIndia) January 29, 2017
Our efforts to eliminate leprosy are a tribute to Mahatma Gandhi's vision: PM @narendramodi
— PMO India (@PMOIndia) January 29, 2017