ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜೈವಿಕ ಇಂಧನದ ರಾಷ್ಟ್ರೀಯ ನೀತಿ -2018ಕ್ಕೆ ತನ್ನ ಅನುಮೋದನೆ ನೀಡಿದೆ.
ಪ್ರಮುಖ ಅಂಶಗಳು:
iii. ಅಧಿಕ ಉತ್ಪಾದನೆ ಆದ ಸಂದರ್ಭದಲ್ಲಿ ರೈತರು ತಮ್ಮ ಬೆಳೆಗೆ ಸೂಕ್ತ ಬೆಲೆಯನ್ನು ಪಡೆಯದ ಅಪಾಯ ಎದುರಿಸುತ್ತಾರೆ. ಇದನ್ನು ಗಣನೆಗೆ ತೆಗೆದುಕೊಂಡಿರುವ ನೀತಿ, ಅಧಿಕವಾದ ಆಹಾರ ಧಾನ್ಯವನ್ನು ರಾಷ್ಟ್ರೀಯ ಜೈವಿಕ ಇಂಧನ ಸಮನ್ವಯ ಸಮಿತಿಯ ಅನುಮತಿಯೊಂದಿಗೆ ಪೆಟ್ರೋಲ್ ನೊಂದಿಗೆ ಸೇರಿಸುವ ಎಥನಾಲ್ ಉತ್ಪಾದನೆಗೆ ಬಳಸಲು ಅವಕಾಶ ನೀಡುತ್ತದೆ
ನಿರೀಕ್ಷಿತ ಪ್ರಯೋಜನಗಳು:
ಹಿನ್ನೆಲೆ:
ದೇಶದಲ್ಲಿ ಜೈವಿಕ ಇಂಧನ ಉತ್ತೇಜಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಜೈವಿಕ ಇಂಧನ ನೀತಿಯನ್ನು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವಾಲಯವು 2009ರಲ್ಲಿ ರೂಪಿಸಿತು. ಜಾಗತಿಕವಾಗಿ, ಜೈವಿಕ ಇಂಧನ ಕಳೆದ ದಶಕದಲ್ಲಿ ಗಮನ ಸೆಳೆಯಿತು ಮತ್ತು ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಯ ವೇಗವನ್ನು ಕಾಯ್ದುಕೊಂಡಿತು. ಭಾರತದಲ್ಲಿ ಜೈವಿಕ ಇಂಧನಗಳು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿವೆ,ಉದಾಹರಣೆಗೆ, ಮೇಕ್ ಇನ್ ಇಂಡಿಯಾ ಸ್ವಚ್ಛ ಭಾರತ ಅಭಿಯಾನ, ಕೌಶಲ್ಯಾಭಿವೃದ್ಧಿ ಉಪಕ್ರಮಗಳು ಮತ್ತು ರೈತರ ವರಮಾನ ಹೆಚ್ಚಳ,ಆಮದು ಕಡಿತ, ಉದ್ಯೋಗಗಳ ದುಪ್ಪಟ್ಟು, ತ್ಯಾಜ್ಯದಿಂದ ಸಂಪತ್ತು ಸೃಷ್ಟಿಯ ಮಹತ್ವಾಕಾಂಕ್ಷೆಯ ಗುರಿಗಳೊಂದಿಗೆ ಸಂಯೋಜಿಸಲು ಉತ್ತಮ ಅವಕಾಶವನ್ನು ನೀಡುತ್ತದೆ. ಭಾರತದಲ್ಲಿ ಜೈವಿಕ ಜೈವಿಕ ಇಂಧನ ಉತ್ಪಾದನೆಗೆ ದೇಶೀಯವಾಗಿ ಕಚ್ಚಾ ಸಾಮಗ್ರಿಯ ಸುಸ್ಥಿರ ಮತ್ತು ಅಗತ್ಯ ಪ್ರಮಾಣದ ಅಲಭ್ಯತೆಯಿಂದಾಗಿ ಇಂಧನ ಕಾರ್ಯಕ್ರಮಕ್ಕೆ ದೊಡ್ಡ ಪರಿಣಾಮವಾಗಿದ್ದು, ಇದನ್ನು ಪರಿಹರಿಸುವುದು ಅಗತ್ಯವಾಗಿದೆ.
****
AKT/VBA/SH