Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಸರ್ಕಾರಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ

ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಸರ್ಕಾರಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ


ಪ್ರಧಾನಮಂತ್ರಿಶ್ರೀ. ನರೇಂದ್ರ ಮೋದಿ ಅವರು ಇಂದು ಸಿಲ್ವಾಸಾ, ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ವಿವಿಧ ಸರ್ಕಾರಿ ಯೋಜನೆಗಳನ್ನು ಉದ್ಘಾಟಿಸಿದರು. ಇದರಲ್ಲಿ ಸರ್ಕಾರಿ ಕಟ್ಟಡಗಳು, ಸೌರ ಪಿ.ವಿ. ವ್ಯವಸ್ಥೆ, ಜನೌಷಧಿ ಕೇಂದ್ರಗಳು ಮತ್ತು ಪಾಸ್ ಪೋರ್ಟ್ ಸೇವಾ ಕೇಂದ್ರವೂ ಸೇರಿದೆ.

ಪ್ರಧಾನಿಯವರು ದಿವ್ಯಾಂಗದವರಿಗೆ ಸಹಾಯ ಮತ್ತು ಸಲಕರಣೆಗಳು ಹಾಗೂ ಸರ್ಕಾರದ ಹಾಲಿ ಯೋಜನೆಗಳ ಅಡಿಯಲ್ಲಿ ಇತರ ಸವಲತ್ತುಗಳನ್ನೂ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾವು ಪ್ರಧಾನಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ದಾದ್ರಾ ಮತ್ತು ನಗರ್ ಹವೇಲಿಗೆ ಬರುತ್ತಿದ್ದು, ಈ ಹಿಂದೆ ಹಲವು ಬಾರಿ ಬಂದಿದ್ದಾಗಿ ತಿಳಿಸಿದರು
ತಾವು ಅಧಿಕಾರವಹಿಸಿಕೊಂಡ ತರುವಾಯ ದಾದ್ರಾ ಮತ್ತು ನಗರ್ ಹವೇಲಿಗಳಲ್ಲಿ ಸರ್ಕಾರಿ ಯೋಜನೆಗಳ ಪರಿಣಾಮ ಕುರಿತಂತೆ ವಿವರ ಕೇಳಿದ್ದಾಗಿ, ಅದಾದ ಬಳಿಕ ಕೇಂದ್ರ ಸರ್ಕಾರ ಯಾವ ಕ್ಷೇತ್ರಕ್ಕೆ ಗಮನ ಕೊಡಬೇಕೋ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾಗಿ ತಿಳಿಸಿದರು.

ಅಭಿವೃದ್ಧಿಯ ದ್ಯೇಯಗಳ ಬಗ್ಗೆ ಮಾತನಾಡಿದ ಅವರು, ಪ್ರತಿಯೊಬ್ಬ ಭಾರತೀಯನೂ ವಸತಿ ಸೌಲಭ್ಯ ಪಡೆಯುವಂತಾಗಬೇಕು ಎಂದರು. ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಉಜ್ವಲ ಯೋಜನೆಯಡಿ ಎಲ್.ಪಿ.ಜಿ. ಸಂಪರ್ಕ ಪಡೆದವರ ಸಂಖ್ಯೆ 2 ಕೋಟಿ ದಾಟಿದೆ ಎಂದರು.

ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಬಡವರು ಮತ್ತು ಮಧ್ಯಮವರ್ಗದವರನ್ನು ಲೂಟಿ ಮಾಡಲು ಬಿಡುವುದಿಲ್ಲ ಎಂದು ಪ್ರಧಾನಿ ತಿಳಿಸಿದರು. ಬೀಮ್ ಆಪ್ ಡೌನ್ ಲೋಡ್ ಮಾಡಿಕೊಂಡು ನಗದು ರಹಿತ ವಹಿವಾಟು ನಡೆಸುವಂತೆ ಅವರು ನೆರೆದಿದ್ದ ಜನತೆಗೆ ಮನವಿ ಮಾಡಿದರು.

***

AKT/NT