Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಾದರಕ್ಷೆ ಉದ್ಯಮದಲ್ಲಿ ತಾಂತ್ರಿಕ ಜವಳಿಗಳ ಪಾತ್ರ ಮತ್ತು ಅದನ್ನು ಒಟ್ಟುಗೂಡಿಸುವ ಬಗ್ಗೆ ವಿವರಿಸುವ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇಂದ್ರ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಅವರು ಬರೆದಿರುವ ಲೇಖನವನ್ನು ಹಂಚಿಕೊಂಡಿದ್ದು, ಪಾದರಕ್ಷೆ ಉದ್ಯಮದಲ್ಲಿ ತಾಂತ್ರಿಕ ಜವಳಿಯ ಪಾತ್ರ ಮತ್ತು ಅದನ್ನು ಒಂದುಗೂಡಿಸುವ ಬಗ್ಗೆ ವಿವರಿಸುವ ಲೇಖನವನ್ನು ಹಂಚಿಕೊಂಡಿದ್ದಾರೆ. 

ಈ ಲೇಖನವು ಸರಳವಾದರೂ ಶಕ್ತಿಶಾಲಿ ಒಳನೋಟವನ್ನು ನೀಡುತ್ತದೆ ಎಂದು ಹೇಳಿದ್ದಾರೆ—ಪಾದರಕ್ಷೆಗಳಲ್ಲಿ ತಾಂತ್ರಿಕ ಜವಳಿ ಕೇವಲ ಹೊಸ ಪರಿಕಲ್ಪನೆ ಅಲ್ಲ, ಈಗಾಗಲೇ ಉದ್ಯಮದಲ್ಲಿ ಆಳವಾಗಿ ಅಳವಡಿಸಿಕೊಂಡಿವೆ ಎಂದು ಸಾರುತ್ತದೆ ಎಂದು ಪ್ರಧಾನ ಮಂತ್ರಿಗಳು ತಿಳಿಸಿದ್ದಾರೆ, 

ಪ್ರಧಾನಮಂತ್ರಿ ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

“ಈ ಲೇಖನದಲ್ಲಿ ಕೇಂದ್ರ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಅವರು ಸರಳವಾದರೂ ಶಕ್ತಿಶಾಲಿ ಒಳನೋಟವನ್ನು ನೀಡಿದ್ದಾರೆ. ಪಾದರಕ್ಷೆಗಳಲ್ಲಿ ತಾಂತ್ರಿಕ ಜವಳಿಗಳು ಹೊಸ ಪರಿಕಲ್ಪನೆ ಅಲ್ಲ, ಈಗಾಗಲೇ ಉದ್ಯಮದಲ್ಲಿ ಅಳವಡಿಸಿಕೊಂಡಿವೆ.

ಮುಂದಿನ ಕಾರ್ಯವೆಂದರೆ ಈ ಏಕೀಕರಣವನ್ನು ಗುರುತಿಸಿ, ವ್ಯವಸ್ಥಿತಗೊಳಿಸಿ ವಿಸ್ತರಿಸುವುದು, ಹಾಗಾಗಿ ಪಾದರಕ್ಷೆ ಕ್ಷೇತ್ರವನ್ನು ತಾಂತ್ರಿಕ ಜವಳಿ ಪರಿಸರ ವ್ಯವಸ್ಥೆಯೊಳಗೆ ಹೆಚ್ಚು ಸ್ಪಷ್ಟವಾಗಿ ತರಬಹುದು ಎಂದು ಅವರು ಸಾರಿದ್ದಾರೆ.”

******