Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯೋಜನಾ ಕ್ಷೇತ್ರದಲ್ಲಿ ಭಾರತ ಮತ್ತು ಸಿಂಗಾಪುರ ನಡುವಿನ ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಸಿಂಗಾಪುರ ನಡುವೆ ನಗರ ಯೋಜನೆ ಮತ್ತು ಅಭಿವೃದ್ದಿಗೆ ಸಂಬಂಧಿಸಿ ಏರ್ಪಟ್ಟ ತಿಳುವಳಿಕಾ ಒಡಂಬಡಿಕೆಗೆ ಪೂರ್ವಾನ್ವಯಗೊಂಡಂತೆ ತನ್ನ ಅನುಮೋದನೆ ನೀಡಿತು. ಈ ಒಡಂಬಡಿಕೆಗೆ 2018ರ ಮೇ 31ರಂದು ಅಂಕಿತ ಹಾಕಲಾಗಿತ್ತು.

ಕೇಂದ್ರ ಮತ್ತು ರಾಜ್ಯಗಳಲ್ಲಿರುವ ನಗರ ಸಭೆ, ಪುರಸಭೆ ಮೊದಲಾದ ಸರಕಾರಿ ಸಂಸ್ಥೆಗಳು ನಗರಾಭಿವೃದ್ದಿ ಮತ್ತು ನಿರ್ವಹಣೆ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಸಿಂಗಾಪುರದ ಏಜೆನ್ಸಿಗಳ ಪ್ರಾವೀಣ್ಯತೆಯನ್ನು ಗಳಿಸಿಕೊಳ್ಳಲು ಅನುಕೂಲ ಒಅದಗಿಸುವುದು ಮತ್ತು ಆ ಮೂಲಕ ನಗರ ಪುನಃಶ್ಚೇತನಕ್ಕೆ ನೆರವಾಗುವುದು ಈ ತಿಳುವಳಿಕಾ ಒಡಂಬಡಿಕೆಯ ಉದ್ದೇಶ. ಇದು ’ನೀತ”ಯ (ಎನ್.ಐ.ಟಿ.ಐ.) ಸಾಮರ್ಥ್ಯವರ್ಧನೆ ಮಾಡಲಿದೆ ಮಾತ್ರವಲ್ಲದೆ ಸಾಕ್ಶ್ಯಾಧಾರ ಸಹಿತ ನೀತಿ ರಚನೆಗೆ , ಮೌಲ್ಯಮಾಪನ ಇತ್ಯಾದಿ ಕೌಶಲ್ಯಗಳನ್ನು ಒದಗಿಸಿಕೊಡಲಿದೆ. ಮತ್ತು ನೀತಿಗೆ ಹೊಸದಾಗಿ ಜೋಡಣೆಯಾದ ಚಿಂತಕರ ಕೂಟದ ಜವಾಬ್ದಾರಿಯನ್ನು ಹೆಚ್ಚು ಕ್ರಿಯಾಶೀಲವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ.

ಈ ತಿಳುವಳಿಕಾ ಒಡಂಬಡಿಕೆಯಡಿ ಯೋಜನೆ ಕ್ಷೇತ್ರ, ನಗರ ಯೋಜನೆ, ನೀರು ಮತ್ತು ತ್ಯಾಜ್ಯ ನೀರು ನಿರ್ವಹಣೆ, ಘನ ತ್ಯಾಜ್ಯ ನಿರ್ವಹಣೆ, ಇಂಟೆಲಿಜೆಂಟ್ ಸಾರಿಗೆ ವ್ಯವಸ್ಥೆ ಮತ್ತು ಸಾರ್ವಜನಿಕ ಹೂಡಿಕೆ ( ಸರಕಾರಿ-ಖಾಸಗಿ ಸಹಭಾಗಿತ್ವ ) ಗೆ ಆದ್ಯತೆ ನೀಡಲಾಗುವುದು.

ಪ್ರಮುಖ ಪರಿಣಾಮ:

ಉತ್ತಮ ಪದ್ದತಿಗಳ ಅನುಷ್ಟಾನದ ಜ್ಞಾನ , ಸಾಮರ್ಥ್ಯ ವರ್ಧನೆಗೆ ಈ ತಿಳುವಳಿಕಾ ಒಡಂಬಡಿಕೆ ಸಹಕಾರಿಯಾಗಲಿದೆಯಲ್ಲದೆ ರಾಜ್ಯ , ಕೇಂದ್ರ ಸರಕಾರ ಮಟ್ಟದಲ್ಲಿ ವಿವಿಧ ಏಜೆನ್ಸಿಗಳಿಗೆ ನಗರ ಯೋಜನೆ, ನೀರು ಮತ್ತು ತ್ಯಾಜ್ಯ ನೀರಿನ ನಿರ್ವಹಣೆ , ಘನ ತ್ಯಾಜ್ಯ ನಿರ್ವಹಣೆ, ಇಂಟೆಲಿಜೆಂಟ್ ಸಾರಿಗೆ ವ್ಯವಸ್ಥೆ ಮತ್ತು ಸಾರ್ವಜನಿಕ ಹೂಡಿಕೆ ( ಸರಕಾರಿ- ಖಾಸಗಿ ಸಹಭಾಗಿತ್ವ ) ಇತ್ಯಾದಿ ಕ್ಷೇತ್ರಗಳಲ್ಲಿ ನಿರ್ವಹಣಾ ಬೆಂಬಲವನ್ನು ಒದಗಿಸಲಿದೆ.

ಫಲಾನುಭವಿಗಳು:

ಕೇಂದ್ರ ಸರಕಾರದ ಅಧಿಕಾರಿಗಳು , ರಾಜ್ಯ ಸರಕಾರದ ಅಧಿಕಾರಿಗಳು ಮತ್ತು ಸ್ಥಳೀಯಾಡಳಿತ ಸಂಸ್ಥೆಯ ಅಧಿಕಾರಿಗಳು ತಮ್ಮ ಜ್ಞಾನದ ಮಟ್ಟವನ್ನು ವಿಸ್ತರಿಸಿಕೊಳ್ಳುವ ಮೂಲಕ ನೇರ ಪ್ರಯೋಜನ ಪಡೆಯಲಿದ್ದಾರೆ. ಇದರಿಂದ ಅಂತಿಮವಾಗಿ ನಗರ ಸಾರ್ವಜನಿಕ ಸೌಲಭ್ಯಗಳ ಉತ್ತಮೀಕರಣ ಸಾಧ್ಯವಾಗಲಿದೆ.