Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ. ಚೋ. ರಾಮಸ್ವಾಮಿ ನಿಧನಕ್ಕೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಶ್ರೀ. ಚೋ. ರಾಮಸ್ವಾಮಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಚೋ. ರಾಮಸ್ವಾಮಿ ಅವರು ಬಹುಮುಖದ ವ್ಯಕ್ತಿಯಾಗಿದ್ದರು. ಅವರ ಅತ್ಯುನ್ನತ ಬೌದ್ಧಿಕತೆ, ಶ್ರೇಷ್ಠ ರಾಷ್ಟ್ರೀಯತೆ ಮತ್ತು ನಿರ್ಭೀತ ಧ್ವನಿಯನ್ನು ಗೌರವಿಸಲಾಗುತ್ತಿತ್ತು.

ಎಲ್ಲಕ್ಕಿಂತ ಮಿಗಿಲಾಗಿ, ಚೋ. ರಾಮಸ್ವಾಮಿ ನನ್ನ ಆತ್ಮೀಯ ಗೆಳೆಯರಾಗಿದ್ದರು. ನಾನು ಅವರ ಓದುಗರ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡಿದ್ದೆ, ಅದೊಂದು ಸಂಪಾದಕರು ಮತ್ತು ಓದುಗರ ನಡುವಿನ ಅಭೂತಪೂರ್ವ ಸಂವಾದವಾಗಿತ್ತು.

ಚೋ. ರಾಮಸ್ವಾಮಿ ಒಳನೋಟ ಹೊಂದಿದ್ದ, ನಿಷ್ಠುರವಾದಿ ಪ್ರತಿಭಾವಂತರು. ಅವರ ಅಗಲಿಕೆಯಿಂದ ನೋವಾಗಿದೆ. ಅವರ ಕುಟುಂಬಕ್ಕೆ ಮತ್ತು ಅವರ ತುಘಲಕ್ ನ ಅಸಂಖ್ಯಾತ ಓದುಗರಿಗೆ ಸಂತಾಪ ಸೂಚಿಸುತ್ತೇನೆ”, ಎಂದು ಪ್ರಧಾನಿ ತಿಳಿಸಿದ್ದಾರೆ..

***

AKT/AK