Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪರಾಕ್ರಮ ದಿವಸದ ಸಂದರ್ಭದಲ್ಲಿ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಧೈರ್ಯ ಮತ್ತು ಶೌರ್ಯದ ಆದರ್ಶಗಳನ್ನು ಸ್ಮರಿಸಿದ ಪ್ರಧಾನಮಂತ್ರಿ


ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನವು ನಮಗೆ ಧೈರ್ಯ ಮತ್ತು ಶೌರ್ಯದ ನಿಜವಾದ ಅರ್ಥವನ್ನು ಕಲಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.  ಇಂದು ಪರಾಕ್ರಮ ದಿವಸ ಸಂದರ್ಭದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಜೇಯ ಧೈರ್ಯ, ತ್ಯಾಗ ಮತ್ತು ಮಾತೃಭೂಮಿಯ ಮೇಲಿನ ಅಚಲ ನಿಷ್ಠೆಯನ್ನು ದೇಶ ಸ್ಮರಿಸುತ್ತದೆ ಎಂದು ಹೇಳಿದ್ದಾರೆ. 

ಪ್ರಧಾನಮಂತ್ರಿಗಳು ಈ ಸಂದರ್ಭದಲ್ಲಿ ಶೌರ್ಯ, ವೀರತ್ವದ ಉನ್ನತ ಆದರ್ಶಗಳನ್ನು ಪ್ರತಿಬಿಂಬಿಸುವ ಒಂದು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ. 

“एतदेव परं शौर्यं यत् परप्राणरक्षणम्। नहि प्राणहरः शूरः शूरः प्राणप्रदोऽर्थिनाम्॥

ಬೇರೆ ಜೀವಿಗಳನ್ನು ರಕ್ಷಿಸುವುದಲ್ಲಿಯೇ ಪರಮ ಶೌರ್ಯ ಅಡಗಿದೆ ಎಂಬ ಸಂದೇಶವನ್ನು ನೀಡುತ್ತದೆ; ಜೀವ ಹರಣ ಮಾಡುವವನು ವೀರನಲ್ಲ, ಬದಲಾಗಿ ಅಗತ್ಯವಿರುವವರಿಗೆ ಜೀವ ರಕ್ಷಣೆ ನೀಡುವ ಮತ್ತು ಅವರನ್ನು ಕಾಪಾಡುವವನೇ ನಿಜವಾದ ವೀರನು. 

ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಬರೆದಿದ್ದಾರೆ;

“नेताजी सुभाष चंद्र बोस का जीवन हमें बताता है कि वीरता और शौर्य के मायने क्या होते हैं। पराक्रम दिवस हमें इसी का स्मरण कराता है।

एतदेव परं शौर्यं यत् परप्राणरक्षणम्। 

नहि प्राणहरः शूरः शूरः प्राणप्रदोऽर्थिनाम्॥”

 

*****