ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರ್ಕಳದ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಧರ್ಮ ಸಂಘ ಟ್ರಸ್ಟ್ನ ಸ್ವಾಮೀಜಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಸಂವಾದದ ವೇಳೆ, ಸಾಮಾಜಿಕ ಸೇವೆ, ಶಿಕ್ಷಣ, ಆಧ್ಯಾತ್ಮಿಕತೆ ಹಾಗೂ ಸಮುದಾಯ ಕಲ್ಯಾಣ ಕ್ಷೇತ್ರಗಳಲ್ಲಿ ಸ್ವಾಮೀಜಿಯವರು ಕೈಗೊಂಡಿರುವ ಸಮರ್ಪಿತ ಕಾರ್ಯಗಳನ್ನು ಪ್ರಧಾನಮಂತ್ರಿ ಶ್ರೀ ಮೋದಿಯವರು ಶ್ಲಾಘಿಸಿದರು. ಅವರ ಪ್ರಯತ್ನಗಳು ಭಾರತದ ಸಾಮಾಜಿಕ ರಚನೆಗೆ ದೀರ್ಘಕಾಲಿಕ ಕೊಡುಗೆ ನೀಡಿವೆ ಎಂದು ಹೇಳಿದರು.
ಶ್ರೀ ನಾರಾಯಣ ಗುರುಗಳ ಶಾಶ್ವತ ಆದರ್ಶಗಳಲ್ಲಿ ಬೇರುಬಿಟ್ಟಿರುವ ಈ ಟ್ರಸ್ಟ್ನ ಮುಂದಾಳತ್ವಗಳು ಸಮಾಜದಾದ್ಯಂತ ಸಮಾನತೆ, ಸೌಹಾರ್ದತೆ ಮತ್ತು ಗೌರವವನ್ನು ಮುಂದುವರಿಸಿ ಉತ್ತೇಜಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಧಾನಮಂತ್ರಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ;
”ವಾರ್ಕಳದ ಶಿವಗಿರಿ ಮಠದಲ್ಲಿರುವ ಶ್ರೀ ನಾರಾಯಣ ಧರ್ಮ ಸಂಘ ಟ್ರಸ್ಟ್ಗೆ ಸಂಬಂಧಿಸಿದ ಸ್ವಾಮೀಜಿಯವರನ್ನು ಭೇಟಿ ಮಾಡಿದೆನು. ಸಾಮಾಜಿಕ ಸೇವೆ, ಶಿಕ್ಷಣ, ಆಧ್ಯಾತ್ಮಿಕತೆ ಹಾಗೂ ಸಮುದಾಯ ಕಲ್ಯಾಣ ಕ್ಷೇತ್ರಗಳಲ್ಲಿ ಅವರ ಸಮರ್ಪಿತ ಕಾರ್ಯಗಳು ನಮ್ಮ ಸಾಮಾಜಿಕ ರಚನೆ ಮೇಲೆ ದೀರ್ಘಕಾಲಿಕ ಕೊಡುಗೆ ನೀಡಿವೆ.
ಶ್ರೀ ನಾರಾಯಣ ಗುರುಗಳ ಶಾಶ್ವತ ಆದರ್ಶಗಳಲ್ಲಿ ಬೇರುಬಿಟ್ಟಿರುವ ಅವರ ಪ್ರಯತ್ನಗಳು ಸಮಾಜದಾದ್ಯಂತ ಸಮಾನತೆ, ಸೌಹಾರ್ದತೆ ಮತ್ತು ಗೌರವವನ್ನು ಮುಂದುವರಿಸಿ ಉತ್ತೇಜಿಸುತ್ತಿವೆ.”
*****
Met Swamis associated with the Sree Narayana Dharma Sanghom Trust, Sivagiri Mutt, Varkala. Their dedicated work in the fields of social service, education, spirituality and community welfare has made a lasting contribution to our social fabric.
— Narendra Modi (@narendramodi) January 23, 2026
Rooted in the timeless ideals of… pic.twitter.com/QsxEOh553n
വർക്കല ശിവഗിരി മഠത്തിലെ ശ്രീനാരായണ ധർമസംഘം ട്രസ്റ്റുമായി ബന്ധപ്പെട്ട സ്വാമിമാരുമായി കൂടിക്കാഴ്ച നടത്തി. സാമൂഹ്യസേവനം, വിദ്യാഭ്യാസം, ആത്മീയത, സാമൂഹ്യക്ഷേമം എന്നീ മേഖലകളിൽ അവർ നടത്തുന്ന അർപ്പണബോധമുള്ള പ്രവർത്തനങ്ങൾ നമ്മുടെ സാമൂഹ്യഘടനയ്ക്ക് അനശ്വരമായ സംഭാവനകൾ നൽകിയിട്ടുണ്ട്.… pic.twitter.com/Ym1jG6CnFf
— Narendra Modi (@narendramodi) January 23, 2026