Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಗತ್ತಿನ ಮೇಲೆ ಪ್ರಭಾವ ಬೀರುವ ಧೈರ್ಯ ಮತ್ತು ಶೌರ್ಯದ ಮಹತ್ವವನ್ನು ಉಲ್ಲೇಖಿಸಿ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಂದು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡು, ಶೌರ್ಯ ಮತ್ತು ಧೈರ್ಯದ ಮಹತ್ವವನ್ನು ಹಾಗೂ ಒಬ್ಬ ಧೈರ್ಯಶಾಲಿ ವ್ಯಕ್ತಿ ಸಂಪೂರ್ಣ ಜಗತ್ತಿನ ಮೇಲೆ ಬೀರುವ ಆಳವಾದ ಪ್ರಭಾವವನ್ನು ಸಾರಿದ್ದಾರೆ. 

ಧೈರ್ಯ ಮತ್ತು ಪರಾಕ್ರಮವೇ ಪ್ರತಿಯೊಂದು ಕಷ್ಟವನ್ನು ಎದುರಿಸಲು ಬೇಕಾದ ಬಂಡವಾಳ. ಭಾರತದ ಯುವಜನತೆಯ ಧೈರ್ಯ ಮತ್ತು ಆತ್ಮವಿಶ್ವಾಸವು ಇದಕ್ಕೆ ಪ್ರೇರಣೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಮಂತ್ರಿಗಳು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ;

“वीरता और पराक्रम वो पूंजी है, जिससे हर कठिनाई का सामना किया जा सकता है। भारत के युवाओं का साहस और आत्मविश्वास इसी की प्रेरणा देता है।

एकेनापि हि शूरेण पादाक्रान्तं महीतलम्।
क्रियते भास्करेणेव स्फारस्फुरिततेजसा ॥”

ಹಗಲು ಹೊತ್ತಿನಲ್ಲಿ ಸೂರ್ಯನು ತನ್ನ ಪ್ರಕಾಶಮಾನ ಕಿರಣಗಳಿಂದ ಸಂಪೂರ್ಣ ಭೂಮಿಯನ್ನು ಹೇಗೆ ಬೆಳಗಿಸುತ್ತಾನೋ, ಅದೇ ರೀತಿಯಲ್ಲಿ ಒಬ್ಬ ಧೈರ್ಯಶಾಲಿ ವ್ಯಕ್ತಿ ತನ್ನ ಸಾಹಸದಿಂದ ಸಂಪೂರ್ಣ ಜಗತ್ತಿನ ಮೇಲೆ ಪ್ರಭಾವ ಬೀರುತ್ತಾನೆ.

 

*****