Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ವಿಜ್ಞಾನ ದಿನದಂದು ರಾಷ್ಟ್ರದ ಅಭಿವೃದ್ಧಿ ಮತ್ತು ಜಾಗತಿಕ ಹಿತಕ್ಕಾಗಿ ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಬಳಸುವ ಸಂಕಲ್ಪವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪುನರುಚ್ಛರಿಸಿದ್ದಾರೆ


ಇಂದು ರಾಷ್ಟ್ರೀಯ ವಿಜ್ಞಾನ ದಿನದ ಸಂದರ್ಭದಲ್ಲಿ, ನಮ್ಮ ರಾಷ್ಟ್ರವನ್ನು ಪ್ರಗತಿಯತ್ತ ಕೊಂಡೊಯ್ಯುವ ಸಂಶೋಧನೆ, ನವೀನತೆ ಮತ್ತು ವೈಜ್ಞಾನಿಕ ಕುತೂಹಲದ ಉತ್ಸಾಹವನ್ನು ನಾವು ಆಚರಿಸುತ್ತೇವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. 

“ಈ ದಿನವು ಸರ್ ಸಿ.ವಿ. ರಾಮನ್ ಅವರ ರಾಮನ್ ಎಫೆಕ್ಟ್ ಕ್ರಾಂತಿಕಾರಿ ಆವಿಷ್ಕಾರವನ್ನು ಸ್ಮರಿಸುತ್ತದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಈ ಆವಿಷ್ಕಾರವು ಭಾರತೀಯ ಸಂಶೋಧನೆಯನ್ನು ಜಾಗತಿಕ ನಕ್ಷೆಯಲ್ಲಿ ದೃಢವಾಗಿ ಸ್ಥಾಪಿಸಿತು.

ಯುವಜನತೆಯನ್ನು ಸಬಲಗೊಳಿಸಲು, ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ರಾಷ್ಟ್ರದ ಅಭಿವೃದ್ಧಿ ಮತ್ತು ಜಾಗತಿಕ ಹಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಲು ನಮ್ಮ ಸಂಕಲ್ಪವನ್ನು ಪುನರುಚ್ಚರಿಸುತ್ತೇವೆ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ. 

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ:

”ಇಂದು, ರಾಷ್ಟ್ರೀಯ ವಿಜ್ಞಾನ ದಿನದಂದು, ನಮ್ಮ ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯುವ ಸಂಶೋಧನೆ, ನವೀನತೆ ಮತ್ತು ವೈಜ್ಞಾನಿಕ ಕುತೂಹಲದ ಆಸಕ್ತಿಯನ್ನು ನಾವು ಆಚರಿಸುತ್ತೇವೆ.

ಈ ದಿನವು ಸರ್ ಸಿ.ವಿ. ರಾಮನ್ ಅವರ ರಾಮನ್ ಎಫೆಕ್ಟ್ ಕ್ರಾಂತಿಕಾರಿ ಆವಿಷ್ಕಾರವನ್ನು ಸ್ಮರಿಸುತ್ತದೆ. ಈ ಆವಿಷ್ಕಾರವು ಭಾರತೀಯ ಸಂಶೋಧನೆಯನ್ನು ಜಾಗತಿಕ ನಕ್ಷೆಯಲ್ಲಿ ದೃಢವಾಗಿ ಸ್ಥಾಪಿಸಿತು.

ಯುವಜನತೆಯನ್ನು ಸಬಲಗೊಳಿಸಲು, ಸಂಶೋಧನಾ ವ್ಯವಸ್ಥೆಗಳನ್ನು ಬಲಪಡಿಸಲು ಹಾಗೂ ರಾಷ್ಟ್ರದ ಅಭಿವೃದ್ಧಿ ಮತ್ತು ಜಾಗತಿಕ ಹಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಲು ನಮ್ಮ ಸಂಕಲ್ಪವನ್ನು ಪುನರುಚ್ಚರಿಸುತ್ತೇವೆ.”

******