Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಮೊದಲ ನಮೋ ಭಾರತ್ ಆರ್‌ಆರ್‌ಟಿಎಸ್ ಅನ್ನು ಉದ್ಘಾಟಿಸುತ್ತಿದ್ದಾರೆ ಮತ್ತು ದೆಹಲಿ-ಮೀರತ್ ನಮೋ ಭಾರತ್ ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಅರ್ಪಿಸುತ್ತಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಮೊದಲ ನಮೋ ಭಾರತ್ ಆರ್‌ಆರ್‌ಟಿಎಸ್ ಅನ್ನು ಉದ್ಘಾಟಿಸುತ್ತಿದ್ದಾರೆ ಮತ್ತು ದೆಹಲಿ-ಮೀರತ್ ನಮೋ ಭಾರತ್ ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಅರ್ಪಿಸುತ್ತಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೀರತ್‌ನಲ್ಲಿ ನಮೋ ಭಾರತ್ ರ‍್ಯಾಪಿಡೊ ರೈಲು ಮತ್ತು ಮೀರತ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದರು, ಈ ಯೋಜನೆಯನ್ನು ‘ವಿಕಸಿತ ಉತ್ತರ ಪ್ರದೇಶ’ ಮತ್ತು ‘ವಿಕಸಿತ ಭಾರತ’ಕ್ಕೆ ಹೊಸ ಶಕ್ತಿ ಎಂದು ಬಣ್ಣಿಸಿದರು. ಈ ಕಾರ್ಯಕ್ರಮವು ಭಾರತದಲ್ಲಿ ಮೊದಲ ಬಾರಿಗೆ ಒಂದೇ ವೇದಿಕೆಯಿಂದ ಒಂದೇ ದಿನ ತ್ವರಿತ ರೈಲು ಮತ್ತು ಮೆಟ್ರೋ ಸೇವೆಯನ್ನು ಪ್ರಾರಂಭಿಸಲಾಗಿದೆ.

ಅಭಿವೃದ್ಧಿ ಹೊಂದಿದ ಭಾರತದಲ್ಲಿ ಸಂಪರ್ಕ ಹೇಗಿರುತ್ತದೆ ಎಂಬುದರ ಅದ್ಭುತ ನೋಟವನ್ನು ಈ ಯೋಜನೆ ಒದಗಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಮಗ್ರ ವ್ಯವಸ್ಥೆಯು ನಗರದೊಳಗಿನ ಪ್ರಯಾಣಕ್ಕಾಗಿ ಮೆಟ್ರೋವನ್ನು ಮತ್ತು “ಅವಳಿ ನಗರಗಳು” ಎಂಬ ದೃಷ್ಟಿಕೋನವನ್ನು ವೇಗಗೊಳಿಸಲು ನಮೋ ಭಾರತ್ ರೈಲುಗಳನ್ನು ಬಳಸಿಕೊಳ್ಳುತ್ತದೆ. ಡಬಲ್-ಎಂಜಿನ್ ಸರ್ಕಾರದ ಕೆಲಸದ ಸಂಸ್ಕೃತಿಯನ್ನು ಎತ್ತಿ ತೋರಿಸಿದ ಪ್ರಧಾನಿ, ಯೋಜನೆಗಳು ಇನ್ನು ಮುಂದೆ ಗೊಂದಲದಲ್ಲಿ ಇರುವುದಿಲ್ಲ ಎಂದು ಹೇಳಿದರು. ತಮ್ಮ ಸರ್ಕಾರವು ಅಡಿಪಾಯ ಹಾಕುವ ಕೆಲಸವನ್ನು ಪೂರ್ಣಗೊಳಿಸುತ್ತದೆ. ಈ ಸೇವೆಗಳ ಅಡಿಪಾಯ ಮತ್ತು ಉದ್ಘಾಟನೆ ಎರಡನ್ನೂ ವೈಯಕ್ತಿಕವಾಗಿ ಮುನ್ನಡೆಸಲಾಗಿದೆ ಎಂದರು.

ತಮ್ಮ ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿ ಮೀರತ್ ಮೆಟ್ರೋದಲ್ಲಿ ಪ್ರಯಾಣಿಸಿದರು ಮತ್ತು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಹೆಚ್ಚಿನ ರೈಲು ನಿರ್ವಾಹಕರು ಮತ್ತು ನಿಲ್ದಾಣ ನಿಯಂತ್ರಣ ಸಿಬ್ಬಂದಿ ಮಹಿಳೆಯರು ಎಂದು ಗಮನಿಸಿದ ಪ್ರಧಾನಮಂತ್ರಿ, ಈ ಯೋಜನೆಯನ್ನು ‘ನಾರಿ-ಶಕ್ತಿ’ಯ ಸಂಕೇತವೆಂದು ಶ್ಲಾಘಿಸಿದರು. ದೇಶದ ಮೊದಲ ನಮೋ ಭಾರತ್ ತ್ವರಿತ ರೈಲು ಸೇವೆಗಾಗಿ ಉತ್ತರ ಪ್ರದೇಶದ ಜನರನ್ನು ಅವರು ಅಭಿನಂದಿಸಿದರು.

ಮೀರತ್ ಜೊತೆಗಿನ ತಮ್ಮ ವಿಶೇಷ ಬಾಂಧವ್ಯವನ್ನು ಸ್ಮರಿಸಿದ ಪ್ರಧಾನಮಂತ್ರಿ, 2014, 2019 ಮತ್ತು 2024ರಲ್ಲಿ ತಮ್ಮ ರಾಷ್ಟ್ರೀಯ ಚುನಾವಣಾ ಪ್ರಚಾರಗಳು ಈ ಕ್ರಾಂತಿಕಾರಿ ಭೂಮಿಯಿಂದ ಪ್ರಾರಂಭವಾದವು ಎಂದು ಹೇಳಿದರು. ಈ ಪ್ರದೇಶದ ರೈತರು, ಕುಶಲಕರ್ಮಿಗಳು ಮತ್ತು ಉದ್ಯಮಿಗಳ ನಿರಂತರ ಆಶೀರ್ವಾದಕ್ಕಾಗಿ ಅವರು ಧನ್ಯವಾದಗಳನ್ನು ಅರ್ಪಿಸಿದರು. “2014 ಕ್ಕಿಂತ ಮೊದಲು, ಮೆಟ್ರೋ ಸೇವೆಗಳು ಕೇವಲ 5 ನಗರಗಳನ್ನು ತಲುಪಿದ್ದವು, ಆದರೆ ಈಗ 25ಕ್ಕೂ ಹೆಚ್ಚು ನಗರಗಳಲ್ಲಿ ಮೆಟ್ರೋಗಳು ಕಾರ್ಯ ನಿರ್ವಹಿಸುತ್ತಿವೆ, ಇದು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಜಾಲವನ್ನಾಗಿ ಮಾಡಿದೆ” ಎಂದು ಶ್ರೀ ಮೋದಿ ತಿಳಿಸಿದರು. “ಈ ಯೋಜನೆಯ ವಿಶಿಷ್ಟ ಲಕ್ಷಣವೆಂದರೆ ಭಾರತೀಯ ರೈಲ್ವೆ, ಮೆಟ್ರೋ ಮತ್ತು ಸರೈ ಕಾಲೇ ಖಾನ್, ಆನಂದ್ ವಿಹಾರ್, ಗಾಜಿಯಾಬಾದ್ ಮತ್ತು ಮೀರತ್‌ನಲ್ಲಿರುವ ಬಸ್ ನಿಲ್ದಾಣಗಳ ಏಕೀಕರಣಕ್ಕೆ ಆದ್ಯತೆ ನೀಡಲಾಗಿದೆ. ಭಾರತದಲ್ಲಿ ಮೊದಲ ಬಾರಿಗೆ, ನಮೋ ಭಾರತ್ ಮತ್ತು ಮೆಟ್ರೋ ರೈಲು ಒಂದೇ ಹಳಿ ಮತ್ತು ನಿಲ್ದಾಣದಲ್ಲಿ ಚಲಿಸಲಿವೆ” ಎಂದು ಶ್ರೀ ಮೋದಿ ವಿವರಿಸಿದರು. ಈ ಏಕೀಕರಣವು ಪ್ರಯಾಣಿಕರು ನಗರದೊಳಗೆ ಪ್ರಯಾಣಿಸಲು ಅಥವಾ ನೇರವಾಗಿ ದೆಹಲಿಗೆ ಹೋಗಲು ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು, ಹೀಗಾಗಿ ಅನೇಕ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ದೆಹಲಿಯಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವುದನ್ನು ಕೈಬಿಟ್ಟಿದ್ದಾರೆ.

“ಎಕ್ಸ್‌ಪ್ರೆಸ್‌ವೇಗಳು, ಸರಕು ಸಾಗಣೆ ಕಾರಿಡಾರ್‌ಗಳು ಮತ್ತು ಜೆವಾರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಆಧುನಿಕ ಮೂಲಸೌಕರ್ಯಗಳಲ್ಲಿ ಸರ್ಕಾರದ ಹೂಡಿಕೆಯು ಅಪಾರ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಈ ಯೋಜನೆಗಳು ಈ ಪ್ರದೇಶಕ್ಕೆ ಹೊಸ ಕೈಗಾರಿಕೆಗಳು ಮತ್ತು ವ್ಯವಹಾರಗಳನ್ನು ಆಕರ್ಷಿಸುತ್ತಿವೆ” ಎಂದು ಪ್ರಧಾನಮಂತ್ರಿ ಹೇಳಿದರು.

ಉತ್ತರ ಪ್ರದೇಶವನ್ನು ಕಾರ್ಮಿಕ ಮತ್ತು ಸೃಷ್ಟಿಯ ಭೂಮಿ ಎಂದು ಬಣ್ಣಿಸಿದ ಪ್ರಧಾನಮಂತ್ರಿ, ರಾಜ್ಯದ ರೈತರು ಮತ್ತು ಕುಶಲಕರ್ಮಿಗಳು ಪರಂಪರೆ ಮತ್ತು ಅಭಿವೃದ್ಧಿಯ ಮಂತ್ರವನ್ನು ಯಶಸ್ವಿಯಾಗಿ ಅರಿತುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಭಾರತದ ಜಾಗತಿಕ ಶಕ್ತಿ ಬೆಳೆದಂತೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರತದ ಯುವ ಶಕ್ತಿಯನ್ನು ಬಳಸಿಕೊಳ್ಳಲು ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಲು ಉತ್ಸುಕವಾಗಿವೆ ಎಂದು ಅವರು ಗಮನಿಸಿದರು. “ಇಂದು, ಜಗತ್ತು ಭಾರತವನ್ನು 21ನೇ ಶತಮಾನದ ಸವಾಲುಗಳನ್ನು ಪರಿಹರಿಸುವ ಸಾಮರ್ಥ್ಯವಿರುವ ಶಕ್ತಿ ಕೇಂದ್ರವಾಗಿ ನೋಡುತ್ತದೆ, ಇದು ಉತ್ತರ ಪ್ರದೇಶದ ನಾಗರಿಕರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ” ಎಂದು ಶ್ರೀ ಮೋದಿ ಹೇಳಿದರು.

MSME ವಲಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ 10,000 ಕೋಟಿ ರೂಪಾಯಿಗಳ ವಿಶೇಷ ನಿಧಿಯನ್ನು ಮೀಸಲಿರಿಸಲಾಗಿದೆ. ಇದು MSME ಗಳಿಗೆ ಸಾಲ ಪ್ರಕ್ರಿಯೆ ಸುಲಭಗೊಳಿಸಿದೆ. ನೇಕಾರರು ಜಾಗತಿಕ ಮಾರುಕಟ್ಟೆಗಳನ್ನು ತಲುಪಲು ಸಹಾಯ ಮಾಡುವ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆಯನ್ನು ಸಹ ಅವರು ಉಲ್ಲೇಖಿಸಿದರು. ಕೊರಿಯರ್ ಮೂಲಕ ಸರಕುಗಳನ್ನು ಕಳುಹಿಸುವ 10 ಲಕ್ಷ ಮಿತಿ  ನಿಯಮವನ್ನು ತೆಗೆದುಹಾಕಲಾಗಿದೆ. ಇದು ಮೀರತ್ ಮತ್ತು ಉತ್ತರ ಪ್ರದೇಶದಾದ್ಯಂತದ ಸಣ್ಣ ಉದ್ಯಮಿಗಳು ಆನ್‌ಲೈನ್ ಅಪ್ಲಿಕೇಶನ್‌ಗಳ ಮೂಲಕ ಅಮೆರಿಕ ಮತ್ತು ಯುರೋಪ್‌ನ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ” ಎಂದು ಪ್ರಧಾನಮಂತ್ರಿ ಘೋಷಿಸಿದರು.

“ಚೌಧರಿ ಚರಣ್ ಸಿಂಗ್ ಅವರ ದೃಷ್ಟಿಕೋನವನ್ನು ಗೌರವಿಸಲು, ನಮ್ಮ ಸರ್ಕಾರ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿತು. ಅವರಿಂದ ಪ್ರೇರಿತರಾಗಿ, ಡಬಲ್-ಎಂಜಿನ್ ಸರ್ಕಾರವು ಆಹಾರ ಸಂಸ್ಕರಣೆ ಮತ್ತು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ಕೆಲಸ ಮಾಡುತ್ತಿದೆ. ಈ ಯೋಜನೆಯಡಿಯಲ್ಲಿ, ಉತ್ತರ ಪ್ರದೇಶದ ರೈತರಿಗೆ ಈಗಾಗಲೇ ಸುಮಾರು 95,000 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ” ಎಂದು ಶ್ರೀ ಮೋದಿ ಹೇಳಿದರು.

ಗಲಭೆಗಳು ಮತ್ತು ಅಪರಾಧಗಳ ಯುಗದಿಂದ ಬ್ರಹ್ಮೋಸ್, ಮೊಬೈಲ್ ಉತ್ಪಾದನೆ ಮತ್ತು ಪ್ರವಾಸೋದ್ಯಮಕ್ಕೆ ಇಂದಿನ ಮನ್ನಣೆಗೆ ಬದಲಾವಣೆಯನ್ನು ಗಮನಿಸಿದ ಪ್ರಧಾನಮಂತ್ರಿಯವರು, ಯುಪಿಯ ಅಭಿವೃದ್ಧಿ ಅತ್ಯಂತ ಮುಖ್ಯ ಎಂದು ಹೇಳಿದರು. ಇಂದು, ಅಪರಾಧಿಗಳು ಜೈಲಿನಲ್ಲಿದ್ದಾರೆ, ಹೆಣ್ಣುಮಕ್ಕಳ ಘನತೆಯನ್ನು ರಕ್ಷಿಸಲಾಗಿದೆ ಮತ್ತು ಸುಧಾರಿತ ಕಾನೂನು ಮತ್ತು ಸುವ್ಯವಸ್ಥೆಯು ಪ್ರಮುಖ ಆರ್ಥಿಕ ಏರಿಕೆ ಮತ್ತು ಉತ್ಪಾದನಾ ಉತ್ಕರ್ಷಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

“ಉತ್ತರ ಪ್ರದೇಶವನ್ನು ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸಲಾಗುತ್ತಿದೆ ಮತ್ತು ಇತ್ತೀಚೆಗೆ ರಾಜ್ಯದ ಮೊದಲ ಸೆಮಿಕಂಡಕ್ಟರ್ ಕಾರ್ಖಾನೆಗೆ ಅಡಿಪಾಯ ಹಾಕಲಾಯಿತು. ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಭಿವೃದ್ಧಿ ಹೊಂದಿದ ಉತ್ತರ ಪ್ರದೇಶ ಅತ್ಯಗತ್ಯ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

 

*****